"ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ" ಎಂದ ಸುನಿಲ್‌ ಗವಾಸ್ಕರ್‌..!

Sunil Gavaskar: ಟಿ20 ವಿಶ್ವಕಪ್‌ ಗೆದ್ದು ಬಂದ ಭಾರತ ಆಟಗಾರರಿಗೆ ಭಾರತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪಂದ್ಯ ಕಳೆದು ಹಲವು ದಿನಗಳು ಕಳೆದರು ಪಂದ್ಯದ ಕಾವು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಪಂದ್ಯ ಗಲ್ಲಲು ಕಾರಣ ಯಾರು ಎಂಬ ಚರ್ಚೆಗಳು ಶುರುವಾಗಿದೆ.  

Written by - Zee Kannada News Desk | Last Updated : Jul 6, 2024, 07:40 AM IST
  • 13 ವರ್ಷಗಳ ಕಾಯುವಿಕೆಯನ್ನ ಗೆದ್ದು ಬಂದ ಭಾರತ ತಂಡಕ್ಕೆ ಅದ್ದೂರಿಯಾಗಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.
  • ಪಂದ್ಯ ಗೆಲ್ಲಲು ಕಾರಣ ಯಾರು ಎನ್ನುವುದರ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿದೆ. ಒಬ್ಬಬ್ಬರು ಒಂದೊಂದು ಹೆಸರನ್ನು ಸೂಚಿಸುತ್ತಿದ್ದಾರೆ.
  • ಭಾರತದ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಪಂದ್ಯ ಗೆಲ್ಲಲು ಮುಖ್ಯ ಕಾರಣ ಬೂಮ್ರಾ ಅಲ್ಲ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
"ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ" ಎಂದ ಸುನಿಲ್‌ ಗವಾಸ್ಕರ್‌..! title=

Sunil Gavaskar: ಟಿ20 ವಿಶ್ವಕಪ್‌ ಗೆದ್ದು ಬಂದ ಭಾರತ ಆಟಗಾರರಿಗೆ ಭಾರತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪಂದ್ಯ ಕಳೆದು ಹಲವು ದಿನಗಳು ಕಳೆದರು ಪಂದ್ಯದ ಕಾವು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಪಂದ್ಯ ಗಲ್ಲಲು ಕಾರಣ ಯಾರು ಎಂಬ ಚರ್ಚೆಗಳು ಶುರುವಾಗಿದೆ.

13 ವರ್ಷಗಳ ಕಾಯುವಿಕೆಯನ್ನ ಗೆದ್ದು ಬಂದ ಭಾರತ ತಂಡಕ್ಕೆ ಅದ್ದೂರಿಯಾಗಿ ಆಯೋಜಿಸಿದ್ದ 
ವಿಜಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಪುಷ್ಪಗಳ ಸುರಿಮಳೆ ಗೈದು ಅಭಿಮಾನಿಗಳು ದೇಶದ ನಾಯಕರನ್ನು ಅದ್ದೂರಿಯಾಗಿ ಕೊಂಡಾಡಿದ್ದಾರೆ. ಟೀಂ ಇಂಡಿಯಾದ ಜಯವನ್ನು ಹಬ್ಬದಂತೆ ಆಚರಣೆ ಮಾಡಿದ್ದಾರೆ.  

ಪಂದ್ಯ ಗೆಲ್ಲಲು ಕಾರಣ ಯಾರು ಎನ್ನುವುದರ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿದೆ.  ಒಬ್ಬಬ್ಬರು ಒಂದೊಂದು ಹೆಸರನ್ನು ಸೂಚಿಸುತ್ತಿದ್ದಾರೆ. ಭಾರತ ತಂಡದ ನಾಯಕ ರೋಹಿತ್‌ ವಾಂಕಡೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪಂದ್ಯ ಗೆಲ್ಲಲು ಕಾರಣ ಹಾರ್ದಿಕ್‌ ಪಾಂಡ್ಯ ಎಂದು ಹೇಳಿಕೊಂಡಿದ್ದರು.  ನಂತರ ಮಾತನಾಡಿದ ಕೊಹ್ಲಿ ಪಂದ್ಯ ಗೆಲ್ಲಲು ಪ್ರಮುಖ ಕಾರಣ ಬೂಮ್ರಾ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೆ ಮಾತನಾಡಿರುವ, ಭಾರತದ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಪಂದ್ಯ ಗೆಲ್ಲಲು ಮುಖ್ಯ ಕಾರಣ ಬೂಮ್ರಾ ಅಲ್ಲ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಂತಿಮ ಇನ್ನಿಂಗ್ಸ್’ಗೂ ಮುನ್ನ ಏನು ಯೋಚಿಸ್ತಾ ಇದ್ರಿ?- ಹೀಗೆಂದು ಪ್ರಶ್ನಿಸಿದ ಪ್ರಧಾನಿ ಮೋದಿಗೆ ವಿರಾಟ್ ಕೊಟ್ಟ ಉತ್ತರ ಇದು…

ಭಾರತ ವಿಶ್ವಕಪ್ ಗೆಲ್ಲಲು ಕಾರಣ ಜಸ್ಪ್ರೀತ್ ಬುಮ್ರಾ ಅಲ್ಲ ಅವರಿಗಿಂತ ಹೆಚ್ಚು ಪಾತ್ರ ವಹಿಸಿದ್ದು ನಾಯಕ ರೋಹಿತ್ ಶರ್ಮಾ ಎಂದು ಹೇಳಿದ್ದಾರೆ. 

ಟಿ20 ವಿಶ್ವಕಪ್ 2024ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬುಮ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ರೋಹಿತ್ ಬ್ಯಾಟ್ಸ್ ಮನ್ ಮಾತ್ರವಲ್ಲದೆ ನಾಯಕನೂ ಆಗಿದ್ದು, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ ಎಂದು ಸುನಿಲ್‌ ಗವಾಸ್ಕರ್ ಹೇಳಿದ್ದಾರೆ. 

“ಭಾರತವು ಎಲ್ಲಾ ವಿಭಾಗಗಳಲ್ಲಿ ಚಾಂಪಿಯನ್‌ನಂತೆ ಪ್ರದರ್ಶನ ನೀಡಿದೆ. ಬುಮ್ರಾ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದರು, ಅವರು ಆ ಪ್ರಶಸ್ತಿಗೆ ಅರ್ಹರು. ಆದರೆ ರೋಹಿತ್ ಶರ್ಮಾ ಅವರಿಗೆ ಇದು ದಕ್ಕಬೇಕಿತ್ತು, ರೋಹಿತ್ ನಾಯಕತ್ವ ಅದ್ಭುತವಾಗಿದೆ. ಅವರು ಎಂದಿಗೂ ಒತ್ತಡಕ್ಕೆ ಮಣಿಯಲಿಲ್ಲ, ಅದಕ್ಕಾಗಿಯೇ ಅವರು ಅತ್ಯುನ್ನತ ಪ್ರಶಂಸೆಗೆ ಅರ್ಹರು. ಹೀಗಾಗಿ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ನನ್ನ ಪಾಲಿಗೆ ಅತ್ಯುತ್ತಮ ಪ್ರದರ್ಶನವಾಗಿತ್ತು,’’ ಎಂದು ಗವಾಸ್ಕರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News