Dhananjay: ರಾಜಕೀಯಕ್ಕೆ ನಟರಾಕ್ಷಸನ ಎಂಟ್ರೀ! ಏನಂದ್ರು ಧನಂಜಯ್..??

Dhananjay Entry To Politics: ಚಂದನವನದ ನಟ ಡಾಲಿ ಧನಂಜಯ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗೆಸ್‌ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿಗಳು ಹರಿದಾಡಿತ್ತು. ಇದಕ್ಕೆ ಈ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Feb 22, 2024, 10:46 AM IST
  • ಧನಂಜಯ್‌ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಾರಣ, ಕಾಂಗ್ರೆಸ್ ಪಕ್ಷ ಈ ನಟನನ್ನು ಪ್ರತಾಪ್ ಸಿಂಹ ವಿರುದ್ಧ ನಿಲ್ಲಿಸುವುದಕ್ಕೆ ಚಿಂತಿಸುತ್ತಿದೆ ಅನ್ನುವ ಸುದ್ದಿ ಹಬ್ಬಿತ್ತು.
  • ಧನಂಜಯ್‌ ತಾವು ನಟನಾಗಿ, ನಿರ್ಮಾಪಕನಾಗಿ, ಚಿತ್ರರಂಗದಲ್ಲಿ ಇದ್ದುಕೊಂಡೇ ಇಂತಹ ಕೆಲಸ ಮಾಡಬಹುದಲ್ವಾ ಎಂದು ಪ್ರಶ್ನಿಸಿದಾರೆ.
  • ಡಾಲಿ ಧನಂಜಯ್‌ ರಾಜಕೀಯಕ್ಕೆ ಅದರದ್ದೇಯಾದ ಹಾಗೂ ಕ್ವಾಲಿಟೀಸ್ ಇರುತ್ತೆ. ಮೊದಲು ಅದನ್ನ ನಿಭಾಯಿಸೋ ಶಕ್ತಿಯಿರಬೇಕು ಎಂದಿದ್ದಾರೆ.
Dhananjay: ರಾಜಕೀಯಕ್ಕೆ ನಟರಾಕ್ಷಸನ ಎಂಟ್ರೀ! ಏನಂದ್ರು ಧನಂಜಯ್..?? title=

Dhananjay In Lokha Sabha Election: ಸ್ಯಾಂಡಲ್‌ವುಡ್‌ನಲ್ಲಿ ನಟರಾಕ್ಷಸ ಎಂದು ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ್‌ ಲೋಕಸಭಾ ಚುನಾವಣೆ ಹತ್ತಿರವಿರುವ ಕಾರಣ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಧನಂಜಯ್‌  ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಾರಣ, ಕಾಂಗ್ರೆಸ್ ಪಕ್ಷ ಈ ನಟನನ್ನು ಪ್ರತಾಪ್ ಸಿಂಹ ವಿರುದ್ಧ ನಿಲ್ಲಿಸುವುದಕ್ಕೆ ಚಿಂತಿಸುತ್ತಿದೆ ಅನ್ನುವ ಸುದ್ದಿ ಹಬ್ಬಿತ್ತು. 

ಇದೀಗ ನಟ ಧನಂಜಯ್‌ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಾಲಿ ಧನಂಜಯ್‌ ಸಿನಿಮಾ ಕೆಲಸದ ಮೇರಿಗೆ ಹೈದರಾಬಾದ್‌ಗೆ ಹೋಗಿದ್ದೆ. ನಾನು ಹೋಗಿ ಅಲ್ಲಿಂದ ಬರುವಷ್ಟರಲ್ಲಿ ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ನನಗೆ ಟಿಕೆಟ್ ಕೊಡಿಸಿದ್ದಾರೆ ಅನ್ೋ ಸುದ್ದಿ ನೀವೇ ಮಾಡಿರೋದು. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನೀವೆ ಹೇಳಬೇಕು. ಯಾರಾದ್ರೂ ಹೇಳಿದ್ದಾರಾ? ನನ್ನನ್ನು ಸಿನಿಮಾದಿಂದ ಹೊರಗೆ ಕಳಿಸಿ ಅಂತ. ನಾನು ಸಿನಿಮಾ ಮಾಡ್ತೀನಿ, ನಾನು ಸಿನಿಮಾ ಮಾಡಬೇಕು, ನಟನಾಗಿ ತುಂಬಾ ಕನಸು ಕಟ್ಟಿಕೊಂಡು ಬಂದಿದ್ದೇನೆ ಎಂದು ಸ್ಪಷ್ಟನೇ ನೀಡಿದ್ದಾರೆ.

ಇದನ್ನೂ ಓದಿ: Ashika Rangnath: ಪಟಾಕಿ ಪೋರಿಯ ಜಬರ್ದಸ್ತ್‌ ವರ್ಕೌಟ್: ವೈರಲ್‌ ವಿಡಿಯೋ!

ಧನಂಜಯ್‌ ತಾವು ನಟನಾಗಿ, ನಿರ್ಮಾಪಕನಾಗಿ,  ಚಿತ್ರರಂಗದಲ್ಲಿ ಇದ್ದುಕೊಂಡೇ ಇಂತಹ ಕೆಲಸ ಮಾಡಬಹುದಲ್ವಾ ಎಂದು ಪ್ರಶ್ನಿಸಿದಾರೆ. ಹಾಗೇ ಈ ನಟ ಲಿಡ್ಕರ್ ಅನ್ನೋ ಸಂಸ್ಥೆಯಲ್ಲಿ ಸಾವಿರಾರು ಬಡ ಕುಟುಂಬಗಳಿವೆ. ಆದರಿಂದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅಂತ ಅವರನ್ನು ಕೇಳಿದಾಗ, ತುಂಬಾ ಖುಷಿಯಾಗಿ ಒಪ್ಪಿಕೊಂಡೆ ಎಂದರು. ಯಾಕಂದ್ರೆ ಇದು ಧನಂಜಯ್‌ಗೆ ತುಂಬಾನೇ ಆಗಿದ್ದು, ಆದರೆ ಅದೊಂದೇ ಉದ್ದೇಶ ಬಿಟ್ಟರೆ, ಬೇರೆ  ಯಾವ ರಾಜಕೀಯ ಉದ್ದೇಶವಿಲ್ಲವೆಂದು ತಿಳಿಸಿದ್ದಾರೆ.

ಡಾಲಿ ಧನಂಜಯ್‌ ರಾಜಕೀಯಕ್ಕೆ ಅದರದ್ದೇಯಾದ ಹಾಗೂ ಕ್ವಾಲಿಟೀಸ್ ಇರುತ್ತೆ. ಮೊದಲು ಅದನ್ನ ನಿಭಾಯಿಸೋ ಶಕ್ತಿಯಿರಬೇಕು. ಸದ್ಯ ನಾನು ಚುನಾವಣಾ ಪ್ರಚಾರಕ್ಕೆನೇ ಹೋಗಿಲ್ಲ. ಎಲ್ಲಾ ಪಕ್ಷದಿಂದಲೂ ಗೆಳೆಯರಿದ್ದಾರೆ. ಎಲ್ಲರೂ ಕರೆದರೂ ಆದರೆ ನಾನು ಹೋಗಿಲ್ಲ. ಯಾಕಂದರೆ ಅದರಲ್ಲಿ ಗುರುತಿಸಿಕೊಳ್ಳುವುದಕ್ಕೆ ಇಷ್ಟವಿಲ್ಲವೆಂದಿದ್ದಾರೆ. ಹಾಗೇ ಅವರು ಒಬ್ಬ ಕಾಮನ್ ಮ್ಯಾನ್ ಆಗಿದ್ದು ಕಾಮನ್ ಮ್ಯಾನ್ ಆಗಿ ಇರುವುದಕ್ಕೇ ಇಷ್ಟ ಪಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News