ದುನಿಯಾ ವಿಜಯ್ ಬೆಂಬಿಡದ ಮಾಸ್ತಿಗುಡಿ; ಚಾರ್ಜ್ ಶೀಟ್ ಸಲ್ಲಿಕೆ

ಮಾಸ್ತಿಗುಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಿಗೆ ನೆರವಾದ ಆರೋಪದ ಮೇಲೆ ನಟ ದುನಿಯಾ ವಿಜಯ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 

Last Updated : Nov 4, 2018, 05:30 PM IST
ದುನಿಯಾ ವಿಜಯ್ ಬೆಂಬಿಡದ ಮಾಸ್ತಿಗುಡಿ; ಚಾರ್ಜ್ ಶೀಟ್ ಸಲ್ಲಿಕೆ title=

ಬೆಂಗಳೂರು: ಕೌಟುಂಬಿಕ ಕಲಹದ ಪ್ರಕರಣಗಳು ಹಸಿಯಾಗಿರುವ ಸಂದರ್ಭದಲ್ಲೇ, ನಟ ದುನಿಯಾ ವಿಜಯ್ ವಿರುದ್ಧ ಮಾಸ್ತಿ ದುರಂತ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 

ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಸಂದರ್ಭದಲ್ಲಿ ನಡೆದ ದುರಂತದಲ್ಲಿ ಸಹನಟರಾದ ಅನಿಲ್ ಹಾಗೂ ರಾಘವ್ ಉದಯ್ ಎಂಬ ನಟರು ಸಾವಿಗೀಡಾದ ಪ್ರಕರಣ ಮತ್ತೆ ಜೀವ ಪಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಿಗೆ ನೆರವಾದ ಆರೋಪದ ಮೇಲೆ ನಟ ದುನಿಯಾ ವಿಜಯ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. 

ಸಹನಟರ ಸಾವಿಗೆ ಕಾರಣರಾದ ನಿರ್ಮಾಪಕ ಸುಂದರ್‌ ಗೌಡ ಅವರು ಪರಾರಿಯಾಗಲು ಸಹಕಾರ ನೀಡಿದ ಪ್ರಕರಣದಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ದುನಿಯಾ ವಿಜಯ್ ವಿರುದ್ಧ 65 ಪುಟಗಳ ಚಾರ್ಜ್‌ ಶೀಟ್‌ ಸಿದ್ಧಪಡಿಸಿ 2 ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 

ನಿರ್ದೇಶಕ ನಾಗಶೇಖರ್, ಸುಂದರಗೌಡ, ಸಾಹಸ ನಿರ್ದೇಶಕ ರವಿವರ್ಮ, ಪೈಲಟ್ ಸೇರಿದಂತೆ ಆರು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮಾಸ್ತಿಗುಡಿ ಚಿತ್ರೀಕರಣ ಸಂದರ್ಭದಲ್ಲಿ ದುರಂತ ಪ್ರಕರಣದ ಮುಯ ಆರೋಪಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ನಾಪತ್ತೆಯಾಗಲು ನಟ ದುನಿಯಾ ವಿಜಯ್ ನೆರವಾಗಿದ್ದರು ಎಂದು ಉಲ್ಲೇಖಿಸಲಾಗಿದೆ.
 

Trending News