“ಯಾರೂ ಇಲ್ಲ ಅಂತಾ ಅವನಿಗೆ ಚಪ್ಪಾಳೆ ಕೊಟ್ರಾ?”-ಕಿಚ್ಚನ ಚಪ್ಪಾಳೆ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ ನಮ್ರತಾ ಗೌಡ

Namrata Gowda negative comment: ನಮ್ರತಾ, ವಿನಯ್ ಹಾಗೂ ಮೈಕಲ್ ಒಂದೆಡೆ ಕುಳಿತಿದ್ದ ಸಂದರ್ಭದಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಚರ್ಚೆ ನಡೆದಿದೆ. ಆಗ ನಮ್ರತಾ, “ಯಾರೂ ಇಲ್ಲ ಅಂತಾ ಅವರಿಗೆ ಚಪ್ಪಾಳೆ ಕೊಟ್ರಾ? ಅಥವಾ ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರಾ?” ಎಂದು ಪ್ರಶ್ನೆ ಮಾಡಿದ್ದಾರೆ.

Written by - Bhavishya Shetty | Last Updated : Dec 11, 2023, 11:39 PM IST
    • ಕಿಚ್ಚ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದ ಕಾರ್ತಿಕ್
    • ಈ ವಿಚಾರದ ಬಗ್ಗೆ ವಿನಯ್ ಮತ್ತು ನಮ್ರತಾ ನೆಗೆಟಿವ್ ಕಾಮೆಂಟ್
    • ಕಾಮೆಂಟ್ ಮಾಡಿರುವುದು ಎಷ್ಟು ಸಮಂಜಸ ಎಂದು ನೆಟಿಜನ್ಸ್ ಗರಂ
“ಯಾರೂ ಇಲ್ಲ ಅಂತಾ ಅವನಿಗೆ ಚಪ್ಪಾಳೆ ಕೊಟ್ರಾ?”-ಕಿಚ್ಚನ ಚಪ್ಪಾಳೆ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ ನಮ್ರತಾ ಗೌಡ title=
Namratha Gowda statement on Kicchana Chappale

Namratha Gowda statement on Kicchana Chappale: ಬಿಗ್ ಬಾಸ್ ಸೀಸನ್ 10ರಲ್ಲಿ ಕಳೆದ ವಾರ ಕಾರ್ತಿಕ್ ಮಹೇಶ್ ಕಳಪೆ ಪಟ್ಟ ಪಡೆದುಕೊಂಡಿದ್ದರು. ಆದರೆ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬ ಆಧಾರದ ಮೇಲೆ ಅವರಿಗೆ ಕಿಚ್ಚ ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ನೀಡಿದ್ದರು. ಇದೀಗ ಈ ವಿಚಾರದ ಬಗ್ಗೆ ವಿನಯ್ ಗೌಡ ಮತ್ತು ನಮ್ರತಾ ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂ. ಯುವರಾಜ್ ಸಿಂಗ್! ಫ್ಯಾನ್ ಆಗ್ಬಿಟ್ಟೆ ಎಂದ ಗವಾಸ್ಕರ್

9ನೇ ವಾರ ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್‌ ನೀಡಲಾಗಿತ್ತು. ಎಲ್ಲಾ ಸ್ಪರ್ಧಿಗಳು ಬಹಳ ಅಗ್ರೆಸ್ಸಿವ್ ಆಗಿ ಆಡಿದ್ದರು, ಅಷ್ಟೇ ಅಲ್ಲದೆ, ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೂ ಸಿಗಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಕಿಚ್ಚ ಸುದೀಪ್ ಅವರು ಈ ವಾರ ಕಾರ್ತಿಕ್ ಮಹೇಶ್ ಅವರಿಗೆ ಮೆಚ್ಚುಗೆಯ ಚಪ್ಪಾಳೆ ನೀಡಿದ್ದರು. ಇದೇ ವಿಚಾರಕ್ಕೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

ನಮ್ರತಾ, ವಿನಯ್ ಹಾಗೂ ಮೈಕಲ್ ಒಂದೆಡೆ ಕುಳಿತಿದ್ದ ಸಂದರ್ಭದಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಚರ್ಚೆ ನಡೆದಿದೆ. ಆಗ ನಮ್ರತಾ, “ಯಾರೂ ಇಲ್ಲ ಅಂತಾ ಅವರಿಗೆ ಚಪ್ಪಾಳೆ ಕೊಟ್ರಾ? ಅಥವಾ ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರಾ?” ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಿನಯ್ ಪ್ರತಿಕ್ರಿಯಿಸಿ, “ನಾನು ಕೆಟ್ಟದಾಗಿ ಆಡಿದೆ, ಅದಕ್ಕೆ ಕಾರ್ತಿಕ್​’ಗೆ ಕಿಚ್ಚನ ಚಪ್ಪಾಳೆ ಸಿಕ್ತು” ಎಂದಿದ್ದಾರೆ. ಒಟ್ಟಾರೆಯಾಗಿ ಇವರಿಬ್ಬರ ಸಂಭಾಷಣೆಯಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇದನ್ನೂ ಓದಿ:  ಪ್ರಖ್ಯಾತ ನಟಿ ಕಂ ಡ್ಯಾನ್ಸರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನಿಮಲ್ ಸಿನಿಮಾ ನಟ!

ಕಿಚ್ಚ ತಮ್ಮ ಮೆಚ್ಚುಗೆಯ ಚಪ್ಪಾಳೆ ನೀಡೋದು ಸ್ಪರ್ಧಿಯ ಒಂದು ವಾರದ ಆಟವನ್ನು ಗಮನದಲ್ಲಿ ಇಟ್ಟುಕೊಂಡು. ಅನೇಕ ಬಾರಿ ಕಿಚ್ಚನಿಗೆ ಮೆಚ್ಚುಗೆ ಎನಿಸಿಲ್ಲ ಎಂದಾಗ ಚಪ್ಪಾಳೆ ಕೊಡದೆ ಶೋ ನಡೆಸಿಕೊಟ್ಟಿದ್ದೂ ಇದೆ. ಹೀಗಿರುವಾಗ ನಮ್ರತಾ ಈ ರೀತಿ ಕಾಮೆಂಟ್ ಮಾಡಿರುವುದು ಎಷ್ಟು ಸಮಂಜಸ ಎಂದು ನೆಟಿಜನ್ಸ್ ಗರಂ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News