BBK10:"ಬಿಗ್‌ಬಾಸ್‌ಗೋಸ್ಕರ ನಾನು ಬೆಂಗಳೂರಿಗೆ ಬಂದೆ,ನನಗೆ ಈ ಅವಕಾಶವನ್ನು ಬಿಡಲು ರೆಡಿ ಇಲ್ಲ": ಕಣ್ಣೀರಿಟ್ಟ ಇಶಾನಿ!

Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ, ಮನೆಯಲ್ಲಿ ಎಲ್ಲದಕ್ಕೂ ಕಣ್ಣೀರು ಹಾಕುತ್ತಿದ್ದ, ಮೂಲತಃ ಮೈಸೂರಿನ ಹುಡುಗಿ ಇಶಾನಿ ಆರನೇ ವಾರ ಎಲಿಮಿನೇಟ್ ಆದ ನಂತರವೂ ದೊಡ್ಮನೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ 'ನನಗೆ ಇನ್ನೊಮ್ಮ ಬಿಗ್ ಬಾಸ್ ಅವಕಾಶ ಬೇಕು' ಅಂತ ಗೋಳಿಟ್ಟಿದ್ದಾರೆ.

Written by - Zee Kannada News Desk | Last Updated : Nov 20, 2023, 09:48 AM IST
  • ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಇದ್ದು, ದೊಡ್ಮನೆಯಿಂದ ಇಬ್ಬರು ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು.
  • ಬಿಗ್‌ಬಾಸ್‌ನ ಶನಿವಾರದ ಎಪಿಸೋಡ್ ಕೊನೆಯಲ್ಲಿ ಈಶಾನಿ ಜರ್ನಿ ಅಂತ್ಯ ಆಗಿದೆ.
  • ಇಶಾನಿ ಇಷ್ಟು ದಿನದ ಬಿಗ್ ಬಾಸ್ ಜರ್ನಿಯನ್ನು ಪ್ಲೇ ಮಾಡಲಾಯ್ತು. ಅದನ್ನು ನೋಡಿದ ಬಳಿಕ ಇಶಾನಿ ಕಿಚ್ಚ ಸುದೀಪ್ ಬಳಿ ತುಂಬ ಆಕ್ರೋಶ ಭರಿತವಾಗಿ ಅತ್ತಿದ್ದಾರೆ .
BBK10:"ಬಿಗ್‌ಬಾಸ್‌ಗೋಸ್ಕರ ನಾನು ಬೆಂಗಳೂರಿಗೆ ಬಂದೆ,ನನಗೆ ಈ ಅವಕಾಶವನ್ನು ಬಿಡಲು ರೆಡಿ ಇಲ್ಲ": ಕಣ್ಣೀರಿಟ್ಟ ಇಶಾನಿ! title=

Eshani Eliminated From Bigg Boss: ಬಿಗ್‌ಬಾಸ್‌ ಮನೆಯಲ್ಲಿ ಕಳೆದ ವಾರ ವರ್ತೂರ್ ಸಂತೋಷ್‌ ಕಾರಣದಿಂದ ಎಲಿಮಿನೇಷನ್ ನಡೆಯದಿರುವ ಕಾರಣ, ಈ ವಾರ ಡಬಲ್ ಎಲಿಮಿನೇಷನ್ ಇದ್ದು, ದೊಡ್ಮನೆಯಿಂದ ಇಬ್ಬರು  ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು. ಶನಿವಾರದ ಎಪಿಸೋಡ್ ಕೊನೆಯಲ್ಲಿ ಸುದೀಪ್‌ "ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ" ಎಂದು ಕೇಳಿದಾಗ, ಇಶಾನಿ ಎದ್ದು ನಿಂತರು. 

ಬಳಿಕ ಕಿಚ್ಚ ಸುದೀಪ್‌, "ನಿಜ. ನಿಮ್ಮ ಪಯಣ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ ದಿ ಬೆಸ್ಟ್" ಎಂದಾಗ ಇಶಾನಿ "ನಾನು ಇನ್ನಷ್ಟು ಎಫರ್ಟ್‌ ಹಾಕಬೇಕಾಗಿತ್ತು. ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್‌ ದಿ ಬೆಸ್ಟ್" ಎಂದು ಹೇಳಿದರು.

ಇದನ್ನು ಓದಿ: BBK10 ಡಬಲ್ ಎಲಿಮಿನೇಷನ್: ಇಶಾನಿ ಬಳಿಕ ನಿನ್ನೆ ಹೊರಹೋಗಿದ್ಯಾರು?

ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ವೇದಿಕೆ ಮೇಲೆ ಕರೆದು ಮಾತನಾಡಿಸಿ ಕಳಿಸುತ್ತಾರೆ. ಅದರಂತೆ ಸೂಪರ್‌ ಸಂಡೇ ವಿತ್‌ ಕಿಚ್ಚ ಸುದೀಪ ಸಂಚಿಕೆಯಲ್ಲಿ, ಇಶಾನಿ ಇಷ್ಟು ದಿನದ ಬಿಗ್ ಬಾಸ್ ಜರ್ನಿಯನ್ನು ಪ್ಲೇ ಮಾಡಲಾಯ್ತು. ಅದನ್ನು ನೋಡಿದ ಬಳಿಕ ಇಶಾನಿ ಕಿಚ್ಚ ಸುದೀಪ್ ಬಳಿ ತುಂಬ ಆಕ್ರೋಶ ಭರಿತವಾಗಿ ಅತ್ತಿದ್ದಾರೆ .

ಬಿಗ್‌ಬಾಸ್‌ ಜರ್ನಿ ವಿಡಿಯೋ ನೋಡಿದ ನಂತರ ಇಶಾನಿ "ನನಗೋಸ್ಕರ ನಾನು ಆಟ ಆಡೋಕೆ ಬಂದಿದ್ದೀನಿ. ನನಗೆ ಈ ಅವಕಾಶವನ್ನು ಬಿಡಲು ರೆಡಿ ಇಲ್ಲ. ನಾನು ನನ್ನ ಗಮನವನ್ನು ಬೇರೆ ಕಡೆಗೆ ಕೊಟ್ಟೆ. ಬಿಗ್ ಬಾಸ್ ಬೇಕೇ ಬೇಕು, ಏನಾದರೂ ಮಾಡ್ತೀನಿ, ಆದರೆ ನಾನು ಬಿಗ್ ಬಾಸ್ ನನಗೆ ಬೇಕು. ನಾನು ಸ್ಟ್ಯಾಂಡ್ ಮಾಡ್ತೀನಿ, ಆದರೆ ನಾನು ಬಿಡೋಕೆ ರೆಡಿ ಇಲ್ಲ" ಎಂದು  ಕಿಚ್ಚ ಸುದೀಪ್ ಮುಂದೆ ಕಣ್ಣೀರು ಹಾಕಿದಾಗ,  ಸುದೀಪ್ "ಬಿಗ್‌ಬಾಸ್ ಮನೆಯಲ್ಲಿ ಒಮ್ಮೆ ಮಾತ್ರ ಈ ಅವಕಾಶ ಸಿಗತ್ತೆ, ಪದೇ ಪದೇ ಸಿಗಲ್ಲ. ಆದರೆ ಈ ಹಠವನ್ನು ನೀವು ನಿಮ್ಮ ಮುಂದಿನ ಜೀವನದಲ್ಲಿ ಮುಂದುವರೆಸಿ" ಎಂದು ಕಿವಿಮಾತು ಹೇಳಿದ್ದಾರೆ.

\ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News