Drone prathap : ಅಮ್ಮನ ಮಡಿಲಲ್ಲಿ ಪ್ರತಾಪ್‌ ಕಣ್ಣೀರು..! ಮಗನ ತಪ್ಪಿಗೆ ಅಡ್ಡ ಬಿದ್ದು ಕ್ಷಮೆ ಕೇಳಿದ ತಂದೆ

Bigg Boss Kannada 10 : ಬಿಗ್‌ಬಾಸ್‌ ಮನೆ ವಾರವಿಡೀ ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಸ್ಪರ್ಧಿಗಳು ಭಾವುಕತೆಯಲ್ಲಿ ಮಿಂದೆದ್ದರು. ಇನ್ನು ಕಳೆದ ಮೂರು ವರ್ಷಗಳಿಂದ ತಂದೆ-ತಾಯಿಯಿಂದ ದೂರವಿದ್ದ ಡ್ರೋನ್‌ ಪ್ರತಾಪ್‌ ಕೊನೆಗೂ ಒಂದಾಗಿದ್ದಾರೆ. ಅಪ್ಪ- ಮಗನ ಅಪ್ಪುಗೆಯ ದೃಶ್ಯ ನೋಡಿದವರ ಕಣ್ಣಲ್ಲಿ ನೀರು ಬರುವಂತಿತ್ತು.

Written by - Krishna N K | Last Updated : Dec 29, 2023, 05:23 PM IST
  • ಮೂರು ವರ್ಷಗಳ ಬಳಿಕ ಅಮ್ಮನ ಮಡಿಲು ಸೇರಿದ ಡ್ರೋನ್‌ ಪ್ರತಾಪ್‌
  • ಅಪ್ಪನನ್ನು ಕಂಡು ಕಣ್ಣೀರಿಟ್ಟು ಕ್ಷಮೆಯಾಚಿಸಿದ ಬಿಗ್‌ಬಾಸ್‌ ಸ್ಪರ್ಧಿ
  • ಪ್ರತಾಪನಲ್ಲಿ ಮಡಿಯಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡಿದ ತಾಯಿ
Drone prathap : ಅಮ್ಮನ ಮಡಿಲಲ್ಲಿ ಪ್ರತಾಪ್‌ ಕಣ್ಣೀರು..! ಮಗನ ತಪ್ಪಿಗೆ ಅಡ್ಡ ಬಿದ್ದು ಕ್ಷಮೆ ಕೇಳಿದ ತಂದೆ title=

Drone Prathap family : ಸುಮಾರು ಮೂರು ವರ್ಷಗಳ ಬಳಿಕ ಕೊನೆಗೂ ಡ್ರೋನ್‌ ಪ್ರತಾಪ್‌ ಅಮ್ಮನ ಮಡಿಲು ಸೇರಿದ್ದಾರೆ. ಅಪ್ಪನನ್ನು ಕಂಡು ಅಪ್ಪಿ ತನ್ನದು ತಪ್ಪಾಯಿತು ಅಂತ ಕ್ಷಮೆಯಾಚಿದ್ದಾರೆ. ಈ ಕುರಿತು ವಿಡಿಯೋವನ್ನು ಬಿಗ್‌ಬಾಸ್‌ ಹಂಚಿಕೊಂಡಿದ್ದು, ನೋಡುಗರು ಭಾವುಕರಾಗುವಂತಿದೆ.

ಹೌದು.. ಪ್ರತಾಪ್ ತಂದೆ ಮರಿಮಾದಯ್ಯ, ತಾಯಿ ಸವಿತಾ ಬಿಗ್‌ ಬಾಸ್‌ಗೆ ಬಂದಿದ್ದರು. ಮಗನನ್ನು ಕ್ಷಮಿಸಿದ ಮರಿಮಾದಯ್ಯ ಪ್ರತಾಪ್ ಮಾಡಿದ ತಪ್ಪಿಗೆ ಅಡ್ಡ ಬಿದ್ದು ಇತರರ ಕ್ಷಮೆ ಕೇಳಿದ ದೃಶ್ಯ ನೋಡಿದ್ರೆ ಅಕ್ಷರಶಃ ನಮಗೆ ತಿಳಿಯದಂತೆ ಕಣ್ಣೀರು ಬರುವಂತಿದೆ. ಕೊನೆಗೂ ಪ್ರತಾಪ್‌ ಕುಟುಂಬ ಸೇರಿದ್ದು, ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿತು.

ಇದನ್ನೂ ಓದಿ: "ರಶ್ಮಿಕಾ ವಿಜಯ್ ಮದುವೆ ಆಗ್ತಾರೆ, ಆದರೆ ಬಳಿಕ ಇಬ್ಬರೂ ದೂರವಾಗ್ತಾರೆ" : ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ

ಬಿಗ್‌ ಬಾಸ್‌ ಮೆನೆಗೆ ಬಂದ ಮರಿಮಾದಯ್ಯ ಮಗನಿಗೆ ತಮ್ಮ ಕೈಯಾರೆ ಹಣ್ಣು ತಿನಿಸಿದರು. ಅಲ್ಲದೆ ಪ್ರತಾಪ್‌ 'ತಂದೆ-ಮಗನನ್ನು ಒಂದು ಮಾಡಿದಕ್ಕೆ ಬಿಗ್ ಬಾಸ್‌ಗೆ ಧನ್ಯವಾದ ಅರ್ಪಿಸಿದರು. ಅಪ್ಪ ಅಮ್ಮನ ಜೊತೆ ಮನೆಯ ಆವರಣದಲ್ಲಿ ಕುಳಿತು ಕೆಲವೊತ್ತು ಮಾತನಾಡಿದರು, ಅಲ್ಲದೆ ಪ್ರತಾಪ್‌ ತಾಯಿಯ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟರು.

ಮೂರು ವರ್ಷಗಳ ಬಳಿಕ ಅಪ್ಪನನ್ನು ನೋಡಿ ಪ್ರತಾಪ್ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ತಂಗಿ ಬಗ್ಗೆ ಕೇಳಿ, ನಾನೇ ಅವಳ ಮದುವೆ ಮಾಡಿಸ್ತೀನಿ ಅಂತ ಪ್ರತಾಪ್‌ ಮಾತುಕೊಟ್ಟರು. ಅಲ್ಲದೆ ಬೆಳಗ್ಗೆ ಹಾಡು ಬಂದಕೂಡಲೇ ಮರಿಮಾದಯ್ಯ ಮಗನಿಗೆ ಡ್ಯಾನ್ಸ್ ಮಾಡು ಅಂತ ಹೇಳಿದ್ರು, ಅಲ್ಲದೆ ಮನೆಗೆ ಬಾ, ಊರಲ್ಲಿ ಯಾರೂ ಏನೂ ಅನ್ನಲ್ಲ, ಅದು ನಮ್ಮ ಮನೆ ಅಂತ ಮಗನನ್ನು ಮನೆಗೆ ಕರೆದರು.

ಇದನ್ನೂ ಓದಿ: ʼಸಲಾರ್‌ ಲೇಡಿ ವಿಲನ್‌ʼ ಮೇಲೆ ಬಿತ್ತು ಪಡ್ಡೆ ಹೈಕ್ಳ ಕಣ್ಣು..! ಯಾರು ಈ ಸುಂದರಿ..?

ಅಲ್ಲದೆ, ನಿನಗೆ ಅವಕಾಶ ಸಿಕ್ಕಿದೆ, ನೀನು ತಪ್ಪು ಮಾಡಿದ್ಯೋ.. ಇಲ್ಲವೋ... ಆದ್ರೆ ಅದರ ಕಳಂಕ ಕಳೆದು ಹೋಗಿದೆ. ಅಳಬೇಡ, ಯಾರು ಏನೇ ಮಾಡಿದ್ರೂ ನಮ್ಮ ಒಳ್ಳೆಯದಕ್ಕೆ ಮಾಡಿದ್ದಾರೆ.. ನೀನು ಯಾರಿಗೂ ಏನೂ ಅನ್ಬೇಡ ಎಂದು ಮಗನಿಗೆ ಬುದ್ದಿವಾದ ಹೇಳಿದರು. ಅಲ್ಲದೆ, ನನ್ನ ಮಗನಿಂದ ಯಾರಿಗಾದರೂ ನೋವಾಗಿದ್ರೆ ನಾನು ಇಲ್ಲಿಂದಲೇ ಅಡ್ಡ ಬಿದ್ದು ಕ್ಷಮೆ ಕೇಳ್ತೀನಿ ಅಂತ ಅಡ್ಡ ಬಿದ್ದು ಕ್ಷಮೆಯಾಚಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News