ಆ ಮೆಗಾ ಹೀರೋ ಸಿನಿಮಾವನ್ನು 3 ಬಾರಿ ತಿರಸ್ಕರಿಸಿದ ಅನುಷ್ಕಾ, ಕಾರಣ ಏನು..?

Anushka Shetty: ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿ ಅನುಷ್ಕಾ ಶೆಟ್ಟಿ.. ಈ ಮೆಗಾ ಸ್ಟಾರ್ ಸಿನಿಮಾವನ್ನು ತಿರಸ್ಕರಿಸಿದ್ದರಂತೆ.. ಈ ವೈರಲ್ ಸುದ್ದಿಯಲ್ಲಿ ಎಷ್ಟು ಸತ್ಯವಿದೆ? ನಿಜವಾಗಿದ್ದರೆ ಕಾರಣ ಏನು..? ಎನ್ನುವುದನ್ನು ಈಗ ತಿಳಿಯೋಣ..  

Written by - Savita M B | Last Updated : Nov 10, 2023, 06:35 PM IST
  • ಅನುಷ್ಕಾ ಶೆಟ್ಟಿ ಇತ್ತೀಚೆಗೆ ಮಿಸ್‌ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾದಿಂದ ಮಿಂಚಿದ್ದರು
  • ಈ ಚೆಲುವೆ ಕೆಲವರನ್ನು ಹೊರತುಪಡಿಸಿ ಟಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದರು
  • ಆದರೆ ಅನುಷ್ಕಾ ಈ ಮೆಗಾ ಹಿರೋ ಜೊತೆಗೆ ನಟಿಸುವ ಅವಕಾಶಗಳನ್ನು ತಿರಸ್ಕರಿದ್ದರು
ಆ ಮೆಗಾ ಹೀರೋ ಸಿನಿಮಾವನ್ನು 3 ಬಾರಿ ತಿರಸ್ಕರಿಸಿದ ಅನುಷ್ಕಾ, ಕಾರಣ ಏನು..? title=

Kollywood News: ಅನುಷ್ಕಾ ಶೆಟ್ಟಿ ಇತ್ತೀಚೆಗೆ ಮಿಸ್‌ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾದಿಂದ ಮಿಂಚಿದ್ದರು.. ಸ್ವೀಟಿ ತನ್ನ ವೃತ್ತಿಜೀವನದಲ್ಲಿ ಹೆಚ್ಚು ರನ್ ಮಾಡದೆ ತುಂಬಾ ಕೂಲ್ ಆಗಿ ವೃತ್ತಿಜೀವನವನ್ನು ಮುಂದುವರೆಸಿದರು.. ಈ ಚೆಲುವೆ ಕೆಲವರನ್ನು ಹೊರತುಪಡಿಸಿ ಟಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದರು. ಅನುಷ್ಕಾ ಜತೆ ನಟಿಸದೇ ಇರುವವರ ಲಿಸ್ಟ್‌ನಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ಇದ್ದಾರೆ. ಆದರೆ ರಾಮ್ ಚರಣ್ ಜೊತೆ ನಟಿಸುವ ಅವಕಾಶ ಬಂದಾಗಲೂ ಅದನ್ನು ಸ್ವೀಟಿ ತಿರಸ್ಕರಿಸಿದ್ದು ಯಾಕೆ..? 

ಅನುಷ್ಕಾ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಉತ್ತಮ ಯಶಸ್ಸನ್ನು ಪಡೆದಿದ್ದಾರೆ. ಅವರು ಉತ್ತಮ ಫಾರ್ಮ್‌ನಲ್ಲಿದ್ದಾಗ, ಅವರಿಗೆ ಸಿನಿಮಾ ಅವಕಾಶಗಳು ಒಂದರ ಹಿಂದೆ ಒಂದರಂತೆ ಒಲಿದು ಬರುತ್ತಿದ್ದವು.. ಸ್ವೀಟಿ ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ವೃತ್ತಿಜೀವನದ ದೃಷ್ಟಿಯಿಂದ ಉತ್ತಮ ಯಶಸ್ಸನ್ನು ಪಡೆದಿದ್ದಾರೆ. ಸದ್ಯ ಸಿನಿಮಾಗಳನ್ನು ಬದಿಗಿಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ-BBK10: "ಇದು ನನ್ನ ಟೀಂಗೆ ಮಾಡಿದ ಮೋಸ ಒಂದೇ ಅಲ್ಲ, ನನಗೆ ನಾನೇ ಮಾಡಿಕೊಂಡ ಮೋಸ": ಮೈಕಲ್ ಅಜಯ್

ಇತ್ತೀಚೆಗೆ ಅನುಷ್ಕಾಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಯಂಗ್ ಹೀರೋಗಳು ಹಾಗೂ ಸೀನಿಯರ್ ಹೀರೋಗಳ ಜೊತೆ ನಟಿಸಿ ಎಲ್ಲರ ಮನಗೆದ್ದಿದ್ದ ನಟಿ ರಾಮ್ ಚರಣ್ ಜೊತೆ ನಟಿಸಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದು ಸದ್ಯದ ವೈರಲ್ ಸುದ್ದಿ. 

ಇದನ್ನೂ ಓದಿ-'ಸಲಾರ್' ಟ್ರೇಲರ್‌ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಲ್ಲ: ಹೊಂಬಾಳೆ ಸಂಸ್ಥೆಯ ಈ ನಿರ್ಧಾರಕ್ಕೆ ಕಾರಣವೇನು?

ಒಂದಲ್ಲ..ಎರಡಲ್ಲ..ಮೂರು ಬಾರಿ..ಮೂರು ಬಾರಿ ರಾಮಚರಣ್ ಜೊತೆ ನಟಿಸುವ ಅವಕಾಶ ಸಿಕ್ಕರೂ ಅನುಷ್ಕಾ ಮೂರು ಬಾರಿ ತಿರಸ್ಕರಿಸಿದ್ದರು. ರಾಜಮೌಳಿ ಒಂದು ಚಿತ್ರದಲ್ಲಿ ಅನುಷ್ಕಾ ಅವರು ರಾಮ್‌ ಚರಣ್‌ ಜೊತೆ ನಟಿಸಬೇಕಾಗಿತ್ತು..  ಆದರೆ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಈ ಚಿತ್ರವನ್ನು ತಿರಸ್ಕರಿಸಿದರು. ಇದಾದ ಬಳಿಕ ರಾಮ್ ಚರಣ್ ನಾಯಕನಾಗಿರುವ ಮತ್ತೊಂದು ಚಿತ್ರದಲ್ಲಿ ಅನುಷ್ಕಾಗೆ ಪ್ಯೂರ್ ಮಾಸ್ ಪಾತ್ರ ಸಿಕ್ಕಿತ್ತು ಆದರೆ ಆಕೆಗೆ ಈ ಸಿನಿಮಾದ ಕಥೆ ಇಷ್ಟವಾಗದೆ ಈ ಸಿನಿಮಾವನ್ನೂ ರಿಜೆಕ್ಟ್ ಮಾಡಿದ್ದಾರಂತೆ

ಮತ್ತು ಇವರಿಬ್ಬರ ಕಾಂಬಿನೇಷನ್ ನಲ್ಲಿ ಮಿಸ್ ಆಗಿರುವ ಮೂರನೇ ಸಿನಿಮಾ..ಗೋವಿಂದುಡು ಅಂದರಿವಾಡೆಲೆ. ಈ ಸಿನಿಮಾದಲ್ಲಿ ಕೃಷ್ಣವಂಶಿ ಮೊದಲು ಅನುಷ್ಕಾ ಅವರನ್ನು ಸಂಪರ್ಕಿಸಿದ್ದು, ಆ ಸಮಯದಲ್ಲಿ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಕಾರಣ ಈ ಸಿನಿಮಾದ ಅವಕಾಶವನ್ನು ಕೈ ಬಿಟ್ಟಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News