ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?

UP Wife killed husband : ಗಂಡನನ್ನು ಸಾಯಿಸಿ ಅವನ ತಲೆಯನ್ನು ಒಡೆದು ನಂತರ ಬುರುಡೆಯಲ್ಲಿನ ರಕ್ತವನ್ನು ಕೈಯಿಂದ ಮಹಿಳೆಯೊಬ್ಬಳು ತೆಗೆಯುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಈ ಭೀಕರ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ..

Written by - Krishna N K | Last Updated : Aug 9, 2024, 05:13 PM IST
    • ಗಂಡನನ್ನು ಸಾಯಿಸಿ ಅವನ ತಲೆ ಬುರುಡೆ ಒಡೆದ ಪತ್ನಿ
    • ಕ್ಷುಲ್ಲಕ ಕಾರಣಕ್ಕೆ ನಡೆಯಿತು ಭೀಕರ ಹತ್ಯೆ
    • ಹತ್ಯೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..? title=

Viral news : ವಿವಾಹ ಪವಿತ್ರ ಬಂಧ.. ಇಂದಿನ ಜಮಾನದಲ್ಲಿ ಈ ಬಂಧನ ಕೆಡುತ್ತಿದೆ.. ವೈವಾಹಿಕ ಜೀವನಕ್ಕೆ ಬೆಲೆಯೇ ಇಲ್ಲದಂತಾಗುತ್ತಿದೆ.. ಮದುವೆ, ಡಿವೋರ್ಸ್‌, ಅನೈತಿಕ ಸಂಬಂಧ ಹೆಚ್ಚಾಗುತ್ತಿವೆ.. ಸಣ್ಣಪುಟ್ಟ ವಿಷಯಗಳಿಗೂ ಗಂಡ-ಹೆಂಡತಿ ಜಗಳವಾಡುತ್ತಿರುತ್ತಾರೆ.. ಜಗಳ ಭೀಕರ ಹಂತ ತಲುಪಿ ರಕ್ತಪಾತಗಳು ನಡೆಯುತ್ತಿವೆ.. ಇದಕ್ಕೆ ಉದಾರಹಣೆ ಇಲ್ಲಿದೆ ನೋಡಿ..

ಸಣ್ಣ ಸಣ್ಣ ವಿಚಾರಕ್ಕೆ ಇಂದು ದಂಪತಿಗಳ ನಡುವೆ ಜಗಳಗಳು ನಡೆಯುತ್ತಿವೆ.. ಅಡುಗೆ ಮಾಡಿಲ್ಲ, ಸಾರಿಗೆ ಉಪ್ಪು ಹಾಕಿಲ್ಲ, ತುಪ್ಪ ಇಲ್ಲ ಹೀಗೆ ಚಿಕ್ಕಪುಟ್ಟ ವಿಚಾರಗಳು ಇಂದು ಡಿವೋರ್ಸ್‌ ಹಂತಕ್ಕೆ ಹೋಗುತ್ತಿವೆ.. ಇನ್ನು ಕೆಲವರು ತಮ್ಮ ಹೆಂಡತಿಯರ ಮೇಲೆ ಅನುಮಾನ ಪಡುತ್ತಿದ್ದಾರೆ.. ಎಲ್ಲಿಗೆ ಹೋಗಿ ಬಂದರೂ ಜಗಳವಾಡುತ್ತಾರೆ.

ಇದನ್ನೂ ಓದಿ:ಲವರ್‌ ಹುಟ್ಟುಹಬ್ಬಕ್ಕೆ Iphone ಗಿಫ್ಟ್‌ ನೀಡಲು, ತಾಯಿಯ..! ದೇಶವನ್ನೇ ಬೆಚ್ಚಿ ಬಿಳಿಸುತ್ತಿದೆ 9ನೇ ತರಗತಿ ವಿದ್ಯಾರ್ಥಿಯ ಕೃತ್ಯ 

ಮೇಲಾಗಿ.. ಕೆಲವರು ಅನುಮಾನದಿಂದ ಪತಿ/ಪತ್ನಿಯನ್ನು ಕೊಲ್ಲಲೂ ಹಿಂಜರಿಯುವುದಿಲ್ಲ. ಈ ಹಿನ್ನಲೆಯಲ್ಲಿ ಸಮಾಜದಲ್ಲಿ ಪತಿ-ಪತ್ನಿಯರ ಬಗ್ಗೆ ದಿನಕ್ಕೊಂದು ಘಟನಗಗಳು ಸುದ್ದಿಯಾಗುತ್ತಿವೆ. ಕೋಳಿ ಬೇಯಿಸಲಿಲ್ಲವೆಂದು ಗಂಡಂದಿರು ಹೆಂಡತಿಯರ ಜೊತೆ ಜಗಳವಾಡಿ ಸಾಯಿಸಿದ ಘಟನೆಗಳೂ ನಡೆದಿವೆ. ಈ ಪೈಕಿ ಇದೀಗ ಆಘಾತಕಾರಿ ಘಟನೆಯೊಂದು ಮುನ್ನೆಲೆಗೆ ಬಂದಿದೆ..

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸತ್ಯಪಾಲ್ (40) ಮತ್ತು ಗಾಯತ್ರಿ ದೇವಿ (39) ದಂಪತಿ ಹಟೌಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಕಳೆದ 20 ವರ್ಷಗಳ ಹಿಂದೆ ವಿವಾಹವಾದರು. ಇಬ್ಬರು ಮಕ್ಕಳು. ಮಗಳು ಬಿಎ ಓದುತ್ತಿದ್ದರೆ, ಮಗ ಇಂಟರ್ ಓದುತ್ತಿದ್ದಾನೆ. 

ಇದನ್ನೂ ಓದಿ: ದೇವಸ್ಥಾನದ ಉತ್ಸವದ ಬ್ಯಾನರ್‌ನಲ್ಲಿ ʼಮಿಯಾ ಖಲೀಫಾʼ..! ಫೋಟೋ ನೋಡಿ ಬೆಚ್ಚಿಬಿದ್ದ ಭಕ್ತರು

ಈ ಹಿನ್ನೆಲೆಯಲ್ಲಿ.. ಪ್ರತಿದಿನ ಪತಿ ನಾನ್ ವೆಜ್ ಅಡುಗೆ ಮಾಡುವಂತೆ ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದ ಪತಿ. ಹಗಲಿನಲ್ಲಿ ಕುಡಿದು ಬಂದು ಜಗಳ ಮಾಡುತ್ತಿದ್ದ. ಗಾಯತ್ರಿ ಸಂಪೂರ್ಣ ಸಸ್ಯಾಹಾರಿ.. ಆಕೆಗೆ ನಾನ್ ವೆಜ್ ಅಡುಗೆ ಇಷ್ಟವಿಲ್ಲ. ಆದರೆ ಗಂಡ ಕೇಳುವವನಲ್ಲ. ಈ ಕ್ರಮದಲ್ಲಿ ಗುರುವಾರವೂ.. ರಾತ್ರಿ ಕುಡಿದು ಬಂದು ನಾನ್ ವೆಜ್ ಅಡುಗೆ ಮಾಡುವಂತೆ ಜಗಳವಾಡಿದ್ದಾನೆ.

ಈ ವೇಳೆ ಜಗಳವಾಗಿ ಹೊಡೆಯಲು ಬಂದ ಹೆಂಡತಿ ಕಂಡು ಹೆದರಿ ಓಡಿ ಹೋಗುತ್ತಿದ್ದ ಪತಿಗೆ ಇಟ್ಟಿಗೆಯಿಂದ ಹೊಡೆದಿದ್ದಾಳೆ.. ಅವನು ಸತ್ತಾಗಲೂ.. ಅವನ ದೇಹವನ್ನು ಒಡೆದು ಮಾಂಸ ಮತ್ತು ರಕ್ತವನ್ನು ಹೊರತೆಗೆದು ಹಿಂಸಾತ್ಮಕವಾಗಿ ವರ್ತಿಸಿದ್ದಾಳೆ ಮಹಿಳೆ. ಪೊಲೀಸರು ಬಂದಾಗಲೂ ಮಹಿಳೆ ತನ್ನ ಕ್ರೌರ್ಯವನ್ನು ಬಿಟ್ಟಿರಲಿಲ್ಲ..

ಇದನ್ನೂ ಓದಿ:ದೇವಸ್ಥಾನದ ಉತ್ಸವದ ಬ್ಯಾನರ್‌ನಲ್ಲಿ ʼಮಿಯಾ ಖಲೀಫಾʼ..! ಫೋಟೋ ನೋಡಿ ಬೆಚ್ಚಿಬಿದ್ದ ಭಕ್ತರು

ಸಧ್ಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ತೋರುತ್ತದೆ. ಈ ಹಿಂದೆಯೂ ಆಕೆಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News