ಚಂದ್ರಯಾನ 3ರ ಯಶಸ್ಸಿನ ನಂತರ ಭಾರತದ ಕೈ ಸೇರುವುದು ಈ ನಿಧಿ !

Chandrayaan 3 Landing:  ಚಂದ್ರಯಾನ 3 ರ ಯಶಸ್ಸು ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಲಿದೆ. ದೇಶದ  ಆರ್ಥಿಕತೆಗೂ ಇದು ಬಹಳ ಮುಖ್ಯವಾಗಿದೆ.

Written by - Ranjitha R K | Last Updated : Aug 23, 2023, 02:03 PM IST
  • ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಿದ್ಧ
  • ಚಂದ್ರಯಾನ 3 ರ ಯಶಸ್ಸು ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಲಿದೆ.
  • ದೇಶದ ಆರ್ಥಿಕತೆಗೂ ಇದು ಬಹಳ ಮುಖ್ಯವಾಗಿದೆ.
ಚಂದ್ರಯಾನ 3ರ ಯಶಸ್ಸಿನ ನಂತರ ಭಾರತದ ಕೈ ಸೇರುವುದು ಈ ನಿಧಿ ! title=

Chandrayaan 3 Landing : ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಿದ್ಧವಾಗಿದೆ. ಚಂದ್ರಯಾನ 3 ರ ಯಶಸ್ಸು ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಲಿದೆ. ದೇಶದ  ಆರ್ಥಿಕತೆಗೂ ಇದು ಬಹಳ ಮುಖ್ಯವಾಗಿದೆ. ಒಂದು ರೀತಿಯಲ್ಲಿ, ದೊಡ್ಡ ನಿಧಿಯೇ ಭಾರತದ ಕೈಯಲ್ಲಿರುತ್ತದೆ ಎನ್ನಬಹುದು. ಭಾರತ ಒಂದು ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಲು ಇದು ಸಹಾಯ ಮಾಡುತ್ತದೆ. ಹಾಗಿದ್ದರೆ ಏನೀ ಲೆಕ್ಕಾಚಾರ ? ಇದಕ್ಕಾಗಿ ಕೆಲವು ಅಂಕಿಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. 

ಭಾರತದ ಕೈ ಸೇರಲಿದೆ ದೊಡ್ಡ ಸಂಪತ್ತು : 
2040 ರ ಹೊತ್ತಿಗೆ, ಮೂನ್ ಎಕಾನಮಿ ಅಥವಾ ಇದರ ಮೂಲಕ 4200 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಸರಳವಾಗಿ ಹೇಳುವುದಾದರೆ, 2030 ರ ವೇಳೆಗೆ, ಚಂದ್ರನ ಮೇಲೆ 40 ಗಗನಯಾತ್ರಿಗಳು  ಮತ್ತು10 ವರ್ಷಗಳ ನಂತರ ಅಂದರೆ 2040 ರ ವೇಳೆಗೆ ಒಂದು ಸಾವಿರಕ್ಕೂ ಹೆಚ್ಚು ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಡಲಿದ್ದಾರೆ. ಅನೇಕ ಬಾಹ್ಯಾಕಾಶ ಕಂಪನಿಗಳು ಅದರಲ್ಲಿ ದೊಡ್ಡ ಮಟ್ಟದ ವ್ಯಾಪಾರವನ್ನು ಎದುರು ನೋಡುತ್ತಿವೆ.  ಚಂದ್ರನಲ್ಲಿಗೆ ತಲುಪಲು 42 ಬಿಲಿಯನ್‌ ಬೇಕಾಗುತ್ತದೆ. ಹಾಗಿದ್ದರೆ ಇದರಲ್ಲಿ ಭಾರತದ ಪಾಲು ಏನಿರಲಿದೆ ಎನ್ನುವುದು ಪ್ರಶ್ನೆ. ದತ್ತಾಂಶದ ಬಗ್ಗೆ ಮಾತ್ರ ಮಾತನಾಡುವುದಾದರೆ ಅದರ ಮೂಲಕವೇ ಭಾರತ ಕೋಟ್ಯಂತರ ಡಾಲರ್ ವ್ಯವಹಾರ ಮಾಡಬಹುದು ಎನ್ನುತ್ತಾರೆ ತಜ್ಞರು. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ನೋಡಿದರೆ, ಅಮೇರಿಕಾ, ರಷ್ಯಾ ಮತ್ತು ಚೀನಾ ಸಾಫ್ಟ್ ಲ್ಯಾಂಡಿಂಗ್ ನಲ್ಲಿ  ಯಶಸ್ವಿಯಾಗಿದೆ. ಆದರೆ ಭಾರತಕ್ಕೆ ಇಂದಿನ ಮಿಷನ್ ಬಹಳ ಮುಖ್ಯ ಯಾಕೆಂದರೆ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಲಿದೆ. ಈ ಮೂಲಕ  ಅತಿದೊಡ್ಡ ಯಶಸ್ಸು  ತನ್ನ ತೆಕ್ಕೆಗೆ ಸೇರಲಿದೆ. 

ಇದನ್ನೂ ಓದಿ : ಚಂದ್ರನ ದಕ್ಷಿಣ ಧ್ರುವ ತಲುಪಲು ಬಾಹ್ಯಾಕಾಶ ಸಂಸ್ಥೆಗಳ ಮಧ್ಯೆ ಇಷ್ಟೊಂದು ಪೈಪೋಟಿ ಯಾಕೆ ಗೊತ್ತಾ ? ಇಲ್ಲಿದೆ ಕಾರಣ

ಸಂಶೋಧನೆಯಲ್ಲಿ ಕಂಡುಬರುವ ಮಾಹಿತಿಯು ಸಹ ಉಪಯುಕ್ತ : 
ಚಂದ್ರನ ಮೇಲೆ ನೀರು ಕಂಡುಬಂದರೆ, ಅದರ ಸಹಾಯದಿಂದ ಆಮ್ಲಜನಕವನ್ನು ಮಾಡಬಹುದು. ಇದರ ನಂತರ, ಬೇಸ್ ಗಳನ್ನೂ ಮಾಡಬಹುದು.  ಹೀಗಾದಾಗ ಚಂದ್ರನಲ್ಲಿಗೆ ತೆರಳುವವರ ಸಂಖ್ಯೆ  ಹೆಚ್ಚಾಗುತ್ತದೆ. ಭಾರತವು ಮೂನ್ ಟೂರಿಸಂನ ರಾಜನಾಗಬಹುದು. ಚಂದ್ರಯಾನ 3ರಿಂದ ಪಡೆದ ಮಾಹಿತಿಯು ಸಂಶೋಧನೆಗೆ ಉಪಯುಕ್ತವಾಗಲಿದ್ದು, ಅದರ ಪ್ರಯೋಜನಗಳು ಖಂಡಿತವಾಗಿಯೂ ಸಿಗಲಿವೆ.

ಇದನ್ನೂ ಓದಿ : ಬಹಳ ಮುಖ್ಯ ಚಂದ್ರಯಾನ 3 ರ ಕೊನೆಯ 17 ನಿಮಿಷ ! ಹೇಗಿರಲಿದೆ ಗೊತ್ತಾ ಆ ರೋಚಕ ಕ್ಷಣ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News