ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದಲ್ಲಿರುವ ಮಾವುತ ಹಾಗೂ ಕಾವಾಡಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಬಟ್ಟೆಗಳನ್ನು ವಿತರಿಸಲಾಯಿತು.
ಶಿವಮೊಗ್ಗ ಗಲಾಟೆ.. ಪೊಲೀಸ್ ತನಿಖೆಯಿಂದ ನಿಷ್ಪಕ್ಷಪಾತ ವರದಿ ಬರಲ್ಲ ಪೊಲೀಸ್ ತನಿಖೆಯಿಂದ ನ್ಯಾಯ ಸಿಗಲ್ಲ.. ಉನ್ನತ ಮಟ್ಟದ ತನಿಖೆ ಆಗ್ಬೇಕು ಗೃಹ ಸಚಿವರು ಎಲ್ಲಿದ್ದಾರೆ.. ಅವರು ಸೇಡಿನ ರಾಜಕಾರಣ ಮಾಡ್ತಾವ್ರೆ ರಾಜ್ಯದಲ್ಲಿ ಕೋಮು ಸಂಘರ್ಷ ತಡೆಯುವಲ್ಲಿ ಸರ್ಕಾರ ವಿಫಲ ಆಗಿದೆ
ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್ಗಳಿಗೆ ಬೆಂಬಲವಾಗಿ ರಾಜ್ಯದ ಕೋಮುವಾದಿ ಕಾಂಗ್ರೆಸ್ ಸರ್ಕಾರ ನಿಂತಿರುವುದಂತು ಸ್ಪಷ್ಟ. ಕೋಲಾರದಲ್ಲಿ ಆರಂಭವಾದ ಕೋಮುದಳ್ಳುರಿ, ಶಿವಮೊಗ್ಗವನ್ನು ದಾಟಿ, ಈಗ ವಿಜಯಪುರದ ಆಲಮಟ್ಟಿಗೆ ಕಾಲಿಟ್ಟಿದೆ ಎಂದು ಬಿಜೆಪಿ ಟೀಕಿಸಿದೆ.
Eid celebrations Controversy: ಕೋಲಾರದಲ್ಲಿ ತಲ್ವಾರ್ ಶೈಲಿಯ ಕಮಾನ್, ಕಟೌಟ್ ನಿರ್ಮಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾಯ್ತು, ಈಗ ಶಿವಮೊಗ್ಗದಲ್ಲಿ ಅದೇ ರೀತಿಯ ತಲ್ವಾರ್ ಕಮಾನ್, ಟಿಪ್ಪು ಕಟೌಟ್ಗಳನ್ನು ನಿರ್ಮಿಸಿ ಶಾಂತಿ ಕದಡುವ ಕೆಲಸ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಹೋಬಳಿಯ ಗ್ರಾಮವೊಂದರ ನಿವಾಸಿ ಮಂಜುನಾಥ್. ಜೂನ್ 15ರಂದು ಮನೆಯ ಹಾಲ್ನಲ್ಲಿದ್ದ ಅಡಿಕೆ ದಬ್ಬೆಗೆ ಸೀರೆ ಕಟ್ಟಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತ್ನಿ ದೂರು ನೀಡಿದ್ದು ಪೊಲೀಸ್ ಸಿಬ್ಬಂದಿ ನಡೆಸಿದ ಹಲ್ಲೆಯ ಕಾರಣಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರಕ್ಕೆ ಶಿಪಾರಸ್ಸಾದ ಮೇಲೆ ಅದು ರಾಜ್ಯ ಸರ್ಕಾರದ ಸ್ವತ್ತು
ಅದನ್ನ ತೆಗೆಯಿರಿ ಇದನ್ನ ತೆಗೆಯಿರಿ ಎಂದು ಪ್ರಶ್ನೆ ಮಾಡಲು ಬರಲ್ಲ
ಶಿವಮೊಗ್ಗದಲ್ಲಿ ಚಿಂತಕ ರೋಹಿತ್ ಚಕ್ರತೀರ್ಥ ಹೇಳಿಕೆ
ಅದನ್ನ, ಇದನ್ನ ಯಾಕೆ ತೆಗೆದ್ರಿ ಎಂದು ಅದು ನಮಗೆ ಸಂಬಂಧವಿಲ್ಲ
ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರ
ನಿನ್ನೆ (06 ಜೂನ್, ಭಾನುವಾರ) ರಾತ್ರಿ 10 ಗಂಟೆ ಸುಮಾರಿಗೆ ಆಯನೂರು ಕೋಟೆ ತಾಂಡದ ಮೂವರು ಇಲ್ಲಿನ ನವರತ್ನ ಬಾರ್ನಲ್ಲಿ ಕುಡಿದು ಗಲಾಟೆ ಮಾಡಿದ್ದಾರೆ. ಬಾರ್ ಮುಚ್ಚುವ ಸಮಯವಾಗಿದ್ದರೂ ಮದ್ಯಪಾನ ಮಾಡುತ್ತಾ ಕುಳಿತಿದ್ದರಿಂದ ಬಾರ್ ಸಿಬ್ಬಂದಿ 112 ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದಿದ್ಧಾರೆ.
ರಾಜ್ಯದ ಮಾಸ್ ಲೀಡರ್ ಗಳೆಂದೇ ಖ್ಯಾತಿ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಸಾರೆಕೊಪ್ಪ ಬಂಗಾರಪ್ಪ ಹಾಗೂ ಬಿ.ಎಸ್ .ಯಡಿಯೂರಪ್ಪರ ನಂತರ ಜಿಲ್ಲೆಯಲ್ಲಿ ಅಂತ ಒಬ್ಬ ನಾಯಕ ಉದಯವಾಗಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೇಸ್ ಬಿಜೆಪಿ ಪಕ್ಷಗಳಲ್ಲಿ ಪ್ರಭಾವಿ ಹಿರಿಯ ನಾಯಕರುಗಳೇ ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಜಿಲ್ಲೆ ಬಡವಾದಂತೆ ಭಾಸವಾಗುತ್ತಿದೆ.
Karnataka Assembly Election: ಸಮಾಜವಾದದ ತಾಯಿಬೇರಾಗಿರುವ ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ನಾಂದಿ ಹಾಡಿದ ಸಮಾಜವಾದದ ಹರಿಕಾರ ಶಾಂತವೇರಿಗೋಪಾಲಗೌಡರು ಜನಿಸಿದ್ದು ಹೆಮ್ಮೆಯ ಸಂಗತಿ. ಸಾಹಿತ್ಯ,ಕಲೆ, ರಂಗಭೂಮಿ, ಸುಗಮ ಸಂಗೀತ, ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ಸ್ಪೂರ್ತಿಯಾದರೆ, ಹೊರಾಟದ ಕಿಚ್ಚನ್ನು ಬೆಳೆಸಿದ ಇಲ್ಲಿನ ಮಣ್ಣು, ರಾಜಕೀಯವಾಗಿ ಹಲವರನ್ನು ಉತ್ತುಂಗಕ್ಕೇರಿಸಿದೆ.
former minister KS Eshwarappa: ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್ಬುಕ್ನಲ್ಲಿ, ಈ ವಿಡಿಯೋ ಮೊದಲು ಪ್ರಕಟವಾಗಿದ್ದು, ಆನಂತರ ಸೋಶಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆಗಳೊಂದಿಗೆ ಹಂಚಿಕೆಯಾಗುತ್ತಿದೆ.
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿದ ʻನಮೋʼ. ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣ ಉದ್ಘಾಟನೆ. ಬಟನ್ ಒತ್ತುವ ಮೂಲಕ ಏರ್ಪೋರ್ಟ್ ಲೋಕಾರ್ಪಣೆ. ಪ್ರಧಾನಿ ಮೋದಿಗೆ ಸಿಎಂ ಸೇರಿ ಬಿಜೆಪಿ ನಾಯಕರು ಸಾಥ್. ಯಡಿಯೂರಪ್ಪಗೆ ಪ್ರಧಾನಿ ಮೋದಿ ಸನ್ಮಾನ. ಮೋದಿ ಗೌರವಕ್ಕೆ ಮಾಜಿ ಸಿಎಂ BSY ಭಾವುಕ.
ಕುಮಾರಸ್ವಾಮಿ ಹೋದಕಡೆಯಲ್ಲಾ ಜನರು ಸೇರುತ್ತಾರೆ, ಆದ್ರೆ ಅದು ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಮಾತು ಈ ಚುನಾವಣೆಯಲ್ಲಿ ಬದಲಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ, 2008 ರ ಬಳಿಕ ಮೊದಲ ಬಾರಿಗೆ ಜೆಡಿಎಸ್ ಪಕ್ಷ ಚುನಾವಣೆಗೆ ಮುನ್ನ ಪಕ್ಷ ಸಂಘಟನೆ ಮಾಡುತ್ತಿದ್ದು, ನಮ್ಮ ಪಂಚರತ್ನ ಯೋಜನೆಯ ಐದು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡುವಂತೆ ಮನವಿ ಮಾಡಿದ್ರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗುವಲ್ಲಿ ಸಂಸದ ರಾಘವೇಂದ್ರ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿಮಾನ ನಿಲ್ದಾಣದ ಭೂಮಿ ಖರೀದಿಯಿಂದ ಹಿಡಿದು ಉದ್ಘಾಟನೆವರೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಯಲ್ಲಿ ಬಿಎಸ್ವೈ ಹಾಗೂ ಬಿ.ವೈ.ರಾಘವೇಂದ್ರ ಹೆಸರು ಇತಿಹಾಸ ಸೇರುತ್ತೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.. 739 ಕೋಟಿ ವೆಚ್ಚದ ಕಾಮಗಾರಿಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದು ಈಶ್ವರಪ್ಪ ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಹಲವಾರು ಯೋಜನೆಗಳ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವ ಪ್ಲಾನ್ ಮಾಡಿದೆ. ಅದೇ ರೀತಿ ಶಿವಮೊಗ್ಗದ ಹೊಸ ಏರ್ಪೋರ್ಟ್ ಕಾಮಗಾರಿ ಭರದಿಂದ ಸಾಗಿದೆ. ಇದೇ ಫೆಬ್ರವರಿ 27 ರಂದು ಖುದ್ದು ಪ್ರಧಾನಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಅವರ ಹೆಸರಿಡಲು ಸರ್ಕಾರ ಪಸ್ತಾವನೆ ಸಲ್ಲಿಸಲಿದೆ ಅಂತ ಬೊಮ್ಮಾಯಿ ಹೇಳಿದ್ದಾರೆ...
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಚಿತ್ರದುರ್ಗಕ್ಕೆ ಹೊರಟಿದೆ. ಶಿವಮೊಗ್ಗ, ಚಿತ್ರದುರ್ಗದಲ್ಲಿ ಯಾತ್ರೆಯನ್ನ ಕೈಗೊಂಡಿದ್ದೇವೆ. ಅಸೆಂಬ್ಲಿ ಮುಗಿದ ನಂತರ ಮೈಸೂರಿನಲ್ಲಿ ಯಾತ್ರೆ ನಡೆಸ್ತೇವೆ. ನಮ್ಮ ಯಾತ್ರೆ ನೋಡಿ ಬಿಜೆಪಿ, JDSಗೆ ಹಿಂಸೆಯಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.