ಡಿಕೆಶಿ ವಿರುದ್ಧ ಯತ್ನಾಳ್ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಕೆ. ಯತ್ನಾಳ್ ಕಾನೂನು ಹೋರಾಟಕ್ಕೆ ಬೆಳಗಾವಿ ಸಾಹುಕಾರ್ ಸಾಥ್. ಸಾಹುಕಾರ್ ಬೆಂಬಲದೊಂದಿಗೆ ಕೋರ್ಟ್ಗೆ ದಾವೆ ಹೂಡಿದ ಯತ್ನಾಳ್. ಅರ್ಜಿ ಸಲ್ಲಿಸುವ ಮುನ್ನ ಯತ್ನಾಳ್-ರಮೇಶ್ ಜಾರಕಿಹೊಳಿ ಚರ್ಚೆ. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿರುವ ಉಭಯ ನಾಯಕರು .
ತಮ್ಮ ರಾಜಕೀಯ ಬದ್ಧವೈರಿ ಲಕ್ಷ್ಮಣ್ ಸವದಿ ಕ್ಷೇತ್ರವಾದ ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ನಂದಗಾಂವ ಗ್ರಾಮಕ್ಕೆ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದರು. ನಂದಗಾಂವ ಗ್ರಾಮದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮೇಶ್ ಜಾರಕಿಹೊಳಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು. ಎರಡು ಜೆಸಿಬಿಗಳ ಮೇಲೆ ಬೆಂಬಲಿಗರು ನಿಂತು ರಮೇಶ್ ಜಾರಕಿಹೊಳಿಗೆ ಹೂವಿನ ಮಳೆಗೈದು ಗ್ರ್ಯಾಂಡ್ ವೆಲ್ಕಮ್ ನೀಡಿದ್ರು.
ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ನಡುವೆ ಟಾಕ್ ವಾರ್. ಸಾಹುಕಾರ್ಗೆ ನಯವಾಗಿ ತಿರುಗೇಟು ನೀಡಿದ ಲಕ್ಷ್ಮಣ್ ಸವದಿ. ರಮೇಶ್ ಅಣ್ಣಾ ನೀನು ಏನೇ ಮಾತಾಡಿದ್ರು ನಾನು ತುಟಿ ಬಿಚ್ಚಲ್ಲ. ನಿಮಗೆ ಮೇ 10ರಂದು ಕ್ಷೇತ್ರದ ಜನರು ಉತ್ತರ ಕೊಡುತ್ತಾರೆ. ಅಥಣಿಯಲ್ಲಿ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸವದಿ ತಿರುಗೇಟು.
ನಗರದ ಹೋಟೆಲ್ ನಲ್ಲಿ ನಡೆಯುತ್ತಿರುವ ರಹಸ್ಯ ಸಭೆಯಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಸಚಿವ ಗೋವಿಂದ್ ಕಾರಜೋಳ ಭಾಗಿಯಾಗಿದ್ದು, ಟಿಕೆಟ್ ವಿಚಾರವಾಗಿ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕುಮಟಳ್ಳಿಗೆ ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ. ನಾನು ಸ್ಪರ್ಧಿಸಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ. ʻಆ ಬಗ್ಗೆ ನಾನು ಸದ್ಯಕ್ಕೆ ಯಾವುದೇ ಕಾಮೆಂಟ್ ಮಾಡಲ್ಲʼ ಎಂದು ವಿಜಯಪುರದ ಆಲಮಟ್ಟಿಯಲ್ಲಿ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ರು.
ಅನ್ಯ ಮಾರ್ಗವಾದ್ರೂ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ. ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್ಗೆ ಅಧಿಕಾರ ನೀಡಲ್ಲ. ಶಪಥ ಮಾಡಿದ್ದೆನೆ, ಎಷ್ಟೇ ಖರ್ಚಾದ್ರು ಸರಿ BJP ಗೆಲ್ಲಿಸುತ್ತೇನೆ ಎಂದು ಬೆಳಗಾವಿಯ ಗೋಕಾಕ್ನಲ್ಲಿ ರಮೇಶ್ ಜಾರಕಿಹೋಳಿ ಹೇಳಿದ್ರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಾಹುಕಾರ್ ಮತ ಬೇಟೆ. ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ರೌಂಡ್ಸ್. ಗ್ರಾಮೀಣ ಕ್ಷೇತ್ರದ ಜನರಿಗೆ ಕುಕ್ಕರ್, ಮಿಕ್ಸರ್ ಕೊಡುವ ನಾಟಕ ನಡೆಯಲ್ಲ. ಗ್ರಾಮೀಣ ಭಾಗದಲ್ಲಿ ಕಮಲ ಅರಳುತ್ತೆ ಎಂದು ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಜಾರಕಿಹೊಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.