ʻಪುನೀತ ಪರ್ವʼ ಮಾಡಿದ್ದೇ ಅಭಿಮಾನಿಗಳಿಗಾಗಿ. ʻಪುನೀತ ಪರ್ವʼ ಕಾರ್ಯಕ್ರಮದಿಂದ ನನಗೆ ಸಂತೋಷವಾಗಿದೆ. ಕಾರ್ಯಕ್ರಮ ನನಗೆ ತೃಪ್ತಿ ನೀಡಿದೆ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ʼಪುನೀತ್ ಪರ್ವʼಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಕಾರಣಾಂತರದಿಂದ ಗೈರಾಗಿದ್ದರು. ಆದ್ರೆ ಅವರಿಬ್ಬರಿಗೂ ಅಪ್ಪು ಅವರ ಮೇಲಿರುವ ಅಭಿಮಾನ, ಪ್ರೀತಿ ಮಾತ್ರ ಅಪಾರ. ಆದರೂ ಇಬ್ಬರೂ ನಟರು ಪುನೀತ್ ಪರ್ವಕ್ಕೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಮತ್ತು ಇಬ್ಬರು ಸ್ಟಾರ್ಗಳ ಫ್ಯಾನ್ಸ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಟಾಕ್ ವಾರ್ ಶುರುವಾಗಿದೆ.
ಗಂಧದಗುಡಿ ಪ್ರೀ ಇವೆಂಟ್ ರಿಲೀಸ್ ಕಾರ್ಯಕ್ರಮ ʼಪುನೀತ್ ಪರ್ವʼ ಅನೇಕ ತಾರಾಬಳಗಕ್ಕೆ ಸಾಕ್ಷಿಯಾಗಿತ್ತು. ಅದೆ ರೀತಿ ಎಲ್ಲಾ ಸ್ಟಾರ್ಗಳು ರಾಜರತ್ನನನ್ನು ನೆನೆದು ಬಾವುಕರಾದರು. ಅಲ್ಲದೆ, ನಟಿ ಅನು ಪ್ರಭಾಕರ್ ಅವರು, ಕರ್ನಾಟಕ ರತ್ನನನ್ನು ಸ್ಮರಿಸಿದರು. ಹಾಗೂ ಅನ್ನಪೂರ್ಣಳಾಗಿದ್ದ ತಮ್ಮನ್ನು ಅನುಪ್ರಭಾಕರ್ ಆಗಿ ಬದಲಾಯಿಸಿದ್ದು ಪಾರ್ವತಮ್ಮ ರಾಜ್ಕುಮಾರ್ ಎಂದು ದೊಡ್ಮನೆಯ ಹೃದಯವೈಶಾಲ್ಯ ನೆನಪಿಸಿದರು.
ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್ ಅಕ್ಕಿನೇನಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪುಗಳನ್ನು ಸ್ಮರಿಸಿದರು.
ನಾನು ಹಾಗೂ ನನ್ನ ಸಹೋದರ ಅಪ್ಪು 47 ವರ್ಷದ ಹಿಂದೆಯೇ ತಾಯಿಯ ಗರ್ಭದಲ್ಲಿದ್ದಾಗ ಭೇಟಿಯಾಗಿದ್ದೇವು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ತಮಿಳು ನಟ ಸೂರ್ಯ ಅವರು ಡಾ. ಪುನೀತ್ ರಾಜ್ಕುಮಾರ್ ಅವರ ಜೊತೆಗೆ ಕಳೆದ ನೆನೆಪುಗಳನ್ನು ಸ್ಮರಿಸಿದರು.
‘ಅಪ್ಪು’ ಹೆಸರಿನಲ್ಲಿ ಕರ್ನಾಟಕದ 30 ಜಿಲ್ಲೆಗೂ ಆಂಬುಲೆನ್ಸ್ ಸೇವೆ ಒದಗಿಸೋ ಬಗ್ಗೆ ಮಾತನಾಡಿದ ಪ್ರಕಾಶ್ ರೈ, ನನ್ನ ಜೊತೆ ನಟ ಸೂರ್ಯ, ಚಿರಂಜೀವಿ ಸೇರಿ ಎಲ್ಲರೂ ಕೂಡ ಸಾಥ್ ಕೊಟ್ಟಿದ್ದಾರೆ ಎಂದರು.
Puneetha Parva: ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಗಣ್ಯರ ಆಗಮನ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಪರಭಾಷೆಯ ತಾರೆಯರು ಆಗಮಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೆ ಯಾರಿಗೂ ತಿಳಿಯದ ಸತ್ಯ ಸಂಗತಿಯೊಂದನ್ನು ಹೇಳಿದರು.
Puneeth Parva: ಇಂದು ಪುನೀತ್ ಪರ್ವ ಗಂಧದ ಗುಡಿ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕತೆ ಇದೆ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.