ರಾಷ್ಟ್ರಗಳಿಗೆ ಮಾನವೀಯ ನೆರವು ಕಳುಹಿಸುವುದಕ್ಕಾಗಿ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಪ್ರವೇಶಿಸದಂತೆ ಭಾರತೀಯ ವಿಮಾನವನ್ನು ನಿಲ್ಲಿಸಿರುವುದು ಇದೇ ಮೊದಲಲ್ಲ.2021 ರಲ್ಲಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಭಾರತವು ತನ್ನ ಭೂಪ್ರದೇಶವನ್ನು ಬಳಸದಂತೆ ಪಾಕಿಸ್ತಾನ ತಡೆಯಿತು.
ಬ್ರಹ್ಮೋಸ್ ಕ್ಷಿಪಣಿಯ ಇತ್ತೀಚಿನ ಆವೃತ್ತಿ ಶಬ್ದದ ವೇಗಕ್ಕಿಂತ ಏಳು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಅದರ ಗುರಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮೋಸ್ ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾಗಿದ್ದು, ಇದು ಇಂತಹ ಅದ್ಭುತ ಆಯುಧವಾಗಿದ್ದರೂ, ರಷ್ಯನ್ ಸೇನೆ ಇನ್ನೂ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಭಾರತ ಮಾತ್ರವೇ ಬ್ರಹ್ಮೋಸ್ ಅನ್ನು ಉಪಯೋಗಿಸುತ್ತಿದೆ. ಯಾಕೆ ಹೀಗೆ? ನಾವು ಬ್ರಹ್ಮೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಾ, ಕ್ರೂಸ್ ಕ್ಷಿಪಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಗಮನಿಸೋಣ.
Rafale : ಫ್ರಾನ್ಸ್ ಜೊತೆಗಿನ ಒಪ್ಪಂದದ ಕೊನೆಯ ಕಂತಿನ ರಫೇಲ್ ಯುದ್ಧ ವಿಮಾನವು ಇಂದು ಭಾರತಕ್ಕೆ ಬಂದಿಳಿದಿದೆ. ಇದರೊಂದಿಗೆ ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದ ಪೂರ್ಣಗೊಂಡಿದೆ. ಗುರುವಾರ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿಳಿದಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
Light Combat Helicopter: ದೇಶದ ವಾಯುಶಕ್ತಿ ಮತ್ತು ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಅಕ್ಟೋಬರ್ 3 ಅತ್ಯಂತ ಮಹತ್ವದ ದಿನ ಎಂದೇ ಹೇಳಬಹುದು. ಏಕೆಂದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ LCH ಗಳು ವಾಯುಪಡೆಗೆ ಸೇರ್ಪಡೆಗೊಂಡಿವೆ.
IAF Fighter Jets Iran Plane:ಟೆಹರಾನ್ನಿಂದ ಚೀನಾಕ್ಕೆ ಹೋಗುತ್ತಿರುವ ಮಹಾನ್ ಏರ್ಲೈನ್ಸ್ ನ ವಿಮಾನದಲ್ಲಿ ಬಾಂಬ್ ಇರುವ ಸುದ್ದಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಆ ಸಮಯದಲ್ಲಿ ಈ ವಿಮಾನವು ಭಾರತದ ವಾಯುಪ್ರದೇಶದಲ್ಲಿತ್ತು. ವಿಮಾನವು ಇಳಿಯಲು ಅನುಮತಿ ಕೋರಲಾಗಿತ್ತು ಆದರೆ ಅದನ್ನು ನಿರಾಕರಿಸಲಾಯಿತು, ನಂತರ ಅದು ಚೀನಾಕ್ಕೆ ಹೋಗಿದೆ.
ಭಾರತೀಯ ವಾಯುಪಡೆಯು 'ಬೈ ಗ್ಲೋಬಲ್ ಮತ್ತು ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ 114 ಮಲ್ಟಿರೋಲ್ ಫೈಟರ್ ಏರ್ಕ್ರಾಫ್ಟ್ಗಳನ್ನು (MRFA) ಸ್ವಾಧೀನಪಡಿಸಿಕೊಳ್ಳುವ ಪ್ಲಾನ್ ಹೊಂದಿದೆ, ಅದರ ಅಡಿಯಲ್ಲಿ ಭಾರತೀಯ ಕಂಪನಿಗಳು ವಿದೇಶಿ ಮಾರಾಟಗಾರರೊಂದಿಗೆ ಪಾರ್ಟ್ನರ್ ಆಗಲು ಅವಕಾಶ ನೀಡಿವೆ.
ಕಳೆದ ವಾರ ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ಹಿನ್ನಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಸೇರಿದಂತೆ ಇತರ ನಾಗರಿಕರನ್ನು ಕಾಬೂಲ್ನಿಂದ ಸ್ಥಳಾಂತರಿಸಲು ಆಪರೇಷನ್ ದೇವಿ ಶಕ್ತಿಯನ್ನು ಭಾರತ ಸರ್ಕಾರ ನಡೆಸುತ್ತಿದೆ.
ಸಂಕಟದ ಹೊತ್ತಿನಲ್ಲಿ ದೇಶದ ರಕ್ಷಣೆಗೆ ಧಾವಿಸುವುದು ಭಾರತೀಯ ವಾಯುಪಡೆಯ ಜಾಯಮಾನ. ಅದು ಗಡಿಯಲ್ಲಿ ಶತ್ರುಗಳ ಉಪಟಳ ಇರಲಿ, ಭೂಕಂಪ, ಸುನಾಮಿ, ಯಾವುದೇ ನೈಸರ್ಗಿಕ ವಿಕೋಪ ಇರಲಿ. ಭಾರತೀಯರ ರಕ್ಷಣೆಗೆ ಓಡೋಡಿ ಬರುತ್ತವೆ ನಮ್ಮ ಸೇನೆ.
ವಾಯುಪಡೆಯ ಟ್ರಾನ್ಸ್ ಪೋರ್ಟ್ ವಿಭಾಗ ಈಗಾಗಲೇ ಅಗತ್ಯವಿರುವ ಕಡೆ ಅಮ್ಲಜನಕ, ಔಷಧ ಹಾಗೂ ವೈದ್ಯರನ್ನು ಏರ್ ಲಿಫ್ಟ್ ಮಾಡುತ್ತಿದೆ. ವಾಯುಪಡೆ ಮೂಲಗಳ ಪ್ರಕಾರ ವಾಯುಪಡೆಯ ವಿಮಾನಗಳು ಈಗಾಗಲೇ ಕೊಚ್ಚಿ, ಮುಂಬಯಿ, ವಿಶಾಖಪಟ್ಟಣಂ, ಬೆಂಗಳೂರಿನಲ್ಲಿರುವ ಡಿಆರ್ ಡಿಒ ಆಸ್ಪತ್ರೆಗಳಿಗೆ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಉಪಕರಣಗಳು ಹಾಗೂ ಬಹು ಅಮೂಲ್ಯ ಆಕ್ಸಿಜನ್ ಗಳನ್ನು ಏರ್ ಲಿಫ್ಟ್ ಮಾಡಿವೆ.
Aero india 2021: ಸಂಯೋಜಿತ ವಾಯು ಕಾರ್ಯಾಚರಣೆ ತಂಡ, ಅಂದರೆ ಸಿಎಟಿಎಸ್ ಮುಖ್ಯ ತೇಜಸ್ ಫೈಟರ್ ಜೆಟ್ ಅನ್ನು ಹೊಂದಿದೆ, ಇದು ಪ್ರಸ್ತುತ ತೇಜಸ್ನ ಅತ್ಯಾಧುನಿಕ ರೂಪವಾಗಿದೆ. ಇದರೊಂದಿಗೆ ಕ್ಯಾಟ್ ವಾರಿಯರ್ ಇರುತ್ತದೆ, ಇದು ದೊಡ್ಡ ಗಾತ್ರದ ಸಶಸ್ತ್ರ ಯುದ್ಧ ಯುಎವಿ ಆಗಿದೆ. ನೆಲ-ದಾಳಿ, ಗಾಳಿಯಿಂದ ಗಾಳಿಗೆ ಕ್ಷಿಪಣಿಗಳ ಜೊತೆಗೆ, ಕ್ಯಾಟ್ ವಾರಿಯರ್ನಲ್ಲಿ ಗ್ಲೈಡ್ ಬಾಂಬ್ ಕೂಡ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
ಭಾರತವು ಯುದ್ಧವನ್ನು ಬಯಸುವುದಿಲ್ಲ ಆದರೆ ಯಾವುದೇ 'ಸೂಪರ್ ಪವರ್' ದೇಶದ ಗೌರವಕ್ಕೆ ಧಕ್ಕೆ ತಂದರೆ ಸೈನಿಕರು ಸೂಕ್ತ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಚೀನಾದೊಂದಿಗಿನ ಎಂಟು ತಿಂಗಳ ಗಡಿ ವಿವಾದದ ಮಧ್ಯೆ ಹೇಳಿದ್ದಾರೆ.
ಚೀನಾದೊಂದಿಗೆ ಹೆಚ್ಚುತ್ತಿರುವ ಗಡಿ ವಿವಾದದ ಮಧ್ಯೆ ರಷ್ಯಾದಿಂದ 30ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಯೋಜಿಸುತ್ತಿದೆ. ಅದೇ ಸಮಯದಲ್ಲಿ ರಷ್ಯಾ ಕೂಡ ಈ ವಿಮಾನಗಳನ್ನು ಆದಷ್ಟು ಬೇಗ ಪೂರೈಸಲು ಒಪ್ಪಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.