ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ಗುರುವಾರ (ನವೆಂಬರ್ 30, 2023) ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ದಾರಿ ಕೊಡದ ಘಟನೆ ವಾಹನವನ್ನು ಹಿಮ್ಮೆಟ್ಟಿಸಿದೆ.
ಆನೆ ಅವಳಿ ಮರಿಗಳಿಗೆ ಜನ್ಮ ನೀಡುವುದು ಅಪರೂಪವಂತೆ. ಒಮ್ಮೊಮ್ಮೆ ಹೀಗಾದಾಗ ಆ ದೃಶ್ಯ ಕಣ್ಣಿಗೆ ಹಬ್ಬ. ಇಲ್ಲಿ ತನ್ನ ಮುದ್ದಾದ ಎರಡು ಅವಳಿ ಮರಿಗಳೊಂದಿಗೆ ತಾಯಿ ಆನೆ ಹೆಜ್ಜೆ ಹಾಕುತ್ತಿದೆ.
ದೇವಸ್ಥಾನದ ಮೆರವಣಿಗೆಯಲ್ಲಿ ಆನೆ ಸಾಗುತ್ತಿತ್ತು. ದಾರಿ ಮಧ್ಯೆ ಆನೆ ಕಣ್ಣಿಗೆ ಹಲಸು ಬಿದ್ದಿದೆ. ಆಣೆ ಮೆರವಣಿಗೆಯಿಂದ ಹೊರ ಬಂದು ಮರದಿಂದ ಹಲಸಿನ ಹಣ್ಣು ತೆಗೆದು ತನ್ನ ಆಸೆ ತೀರಿಸಿಕೊಂಡಿದೆ.
ಕಾಡಿನ ಮಧ್ಯೆ ಕೊಳದಲ್ಲಿ ಆನೆ ನೀರು ಕುಡಿಯುತ್ತಾ ನಿಂತಿದೆ. ಅಲ್ಲಿಗೆ ತನ್ನ ದಾಹ ತೀರಿಸಿಕೊಳ್ಳಲು ಹುಲಿ ಕೂಡಾ ಬಂದಿದೆ. ಆದರೆ ತಾನಿದ್ದ ಜಾಗಕ್ಕೆ ಹುಲಿ ಬಂದಿರುವುದು ಆನೆಗೆ ಯಾಕೋ ಸರಿ ಕಾಣಲಿಲ್ಲ. ಹುಲಿಯನ್ನು ಆ ಸ್ಥಳದಲ್ಲಿ ನಿಲ್ಲುವುದಕ್ಕೂ ಗಜರಾಜ ಅವಕಾಶ ನೀಡಲಿಲ್ಲ.
ತುಂಬಿ ಹರಿಯುತ್ತಿರುವ ನದಿಯ ಮಧ್ಯೆ ಆನೆ ಸಿಲುಕಿ ಹಾಕಿಕೊಂಡಿದೆ. ನೀರಿನ ರಭಸ ಕಂಡು ಮರಿಯಾನೆ ತೀರಾ ಭಯಪಟ್ಟಿದೆ . ಅದೆಷ್ಟೇ ಪ್ರಯತನ್ ಪಟ್ಟರೂ ಒಂದು ಹೆಜ್ಜೆ ಕೂಡಾ ಮುಂದಿಡುತ್ತಿಲ್ಲ. ಆನೆ ಯನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕೂಡಾ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ.
ಈ ವ್ಯಕ್ತಿ ಆನೆಯನ್ನು ನೋಡಿಕೊಳ್ಳುವಾತ. ಆನೆಯನ್ನು ನೀರಿಗೆ ಬಿಟ್ಟು ತಾನು ಕೂಡಾ ನೀರಿಗಿಳಿದಿದ್ದಾನೆ. ಆದರೆ ನೀರಿನ ರಭಸ ಅರಿತ ಅನೆ ವ್ಯಕ್ತಿಯನ್ನು ಕೈ ಹಿಡಿದು ತನ್ನ ಬಳಿ ಎಳೆದು ತಂದಿದೆ.
ಹುಲಿ ರಾಜಾರೋಷವಾಗಿ ಹೆಜ್ಜೆ ಹಾಕಿಕೊಂಡು ಬರುತ್ತಿತ್ತು. ಆದರೆ ಯಾವಾಗ ಆನೆಗಳ ಹಿಂದೂ ಬರುತ್ತಿದೆ ಎನ್ನುವುದು ಅರಿವಾಗುತ್ತದೆಯೂ ಹುಲಿ ಪೊದೆಯಲ್ಲಿ ಅವಿತು ಕೊಳ್ಳುತ್ತದೆ. ಮತ್ತೆ ಆನೆಗಳು ದೂರ ಸಾಗಿತು ಎನ್ನುವುದು ಖಾತ್ರಿಯಗುತ್ತಿದ್ದಂತೆಯೇ ಪೊದೆಯಿಂದ ಈಚೆ ಬರುತ್ತದೆ. ಅಷ್ಟರಲ್ಲಿ ಮತ್ತೆ ಆನೆಯ ಸದ್ದು ಕೇಳಿದೊಡನೆ ಮತ್ತೆ ಹುಲಿರಾಯ ತನ್ನ ಕಾಲಿಗೆ ಬುದ್ದಿ ಹೇಳಿ ಬಿಡುತ್ತದೆ.
ಕಾಡಿನ ಮಧ್ಯೆ ಎರಡು ಆನೆಗಳು ಕಾದಾಟಕ್ಕೆ ಇಳಿದಿವೆ. ಈ ಆನೆಗಳಲ್ಲಿ ಯಾರೂ ಕಡಿಮೆ ಇಲ್ಲ ಎನ್ನುವಂತೆ ಹಣೆಗೆ ಹಣೆ ಇಟ್ಟುಕೊಂಡು ಕಾದಾಟಕ್ಕೆ ಇಳಿದಿವೆ. ಇದನ್ನೂ ಒಂದು ರೀತಿ ಆನೆಗಳ WWE fight ಎನ್ನಬಹುದೋ ಏನೋ.?
ಸರಿಸುಮಾರು 8000 ಕೆಜಿ ತೂಕದ, ತಾಂಜಾನಿಯಾದ ಆನೆ. ಇದು ವಿಶ್ವದಲ್ಲೇ ಅತಿ ದೊಡ್ಡ ಆನೆ ಎನ್ನಲಾಗಿದೆ. ಆನೆಗಳ ಗಾತ್ರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಸಂಶೋಧನೆಯ ಒರಕರ Tanzania elephant ಅನ್ನು ವಿಶ್ವದ ಅತಿದೊಡ್ಡ ಆನೆ ಎಂದು ಹೇಳಲಾಗುತ್ತದೆ.
ಆನೆಯ ಬುದ್ದಿವಂತಿಕೆ ಎಷ್ಟಿದೆ ಎನ್ನುವುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಮರಿ ಆನೆಯೊಂದು ಕೊಳಕ್ಕೆ ಇಳಿಯುವ ಮುನ್ನ ತನ್ನ ಸೊಂಡಿಲ ನ್ನು ಇಳಿಸಿ ಆಳ ಎಷ್ಟಿದೆ ಎಂದು ಪರೀಕ್ಷಿಸುತ್ತಿದೆ. ತನಗೆ ಇದು ಸುರಕ್ಷಿತವಾಗಿದೆ ಎಂದು ತಿಳಿದುಕೊಂಡ ನಂತರವೇ ಆ ಆನೆ ನೀರಿಗೆ ಇಳಿಯುತ್ತದೆ. ಮರಿಯಾನೆಯ ಮುದ್ದಾದ ವಿಡಿಯೋ ಇಲ್ಲಿದೆ.
ಆನೆಗಳು ಅತಿ ಬುದ್ದಿವಂತ ಪ್ರಾಣಿ. ಕಾಡಿನಲ್ಲಿ ಕೆಸರಿನಲ್ಲಿ ಹುದುಗುತ್ತಿರುವ ಕೃಷ್ಣ ಮೃಗವನ್ನು ಕಾಲಿನಲ್ಲಿ ಒದ್ದು ಮೇಲೇಳಲು ಸಹಾಯ ಮಾಡಿದೆ. ಇನ್ನೇನು ಸತ್ತೆ ಹೋಗುವೆ ಅಂದುಕೊಂಡಿದ್ದ ಕೃಷ್ಣ ಮೃಗಕ್ಕೆ ಜೀವದಾನ ನೀಡಿದೆ.
Elephant Video : ಸೋಷಿಯಲ್ ಮೀಡಿಯಾದಲ್ಲಿ ಸ್ಮಾರ್ಟ್ ಆನೆಯ ವಿಡಿಯೋವೊಂದು ವೈರಲ್ ಆಗಿದೆ. ಬಾಳೆಹಣ್ಣನ್ನು ಈ ಆನೆ ಸೇವಿಸುವ ಪರಿ ಎಲ್ಲರ ಗಮನ ಸೆಳೆಯುತ್ತಿದೆ. ಲಕ್ಷಾಂತರ ಜನರು ಈ ವಿಡಯೋವನ್ನು ವೀಕ್ಷಿಸಿದ್ದು, ಲೈಕ್ಸ್ - ಕಾಮೆಂಟ್ಸ್ ಕೂಡ ಬಂದಿವೆ.
Baby Elephant viral video : ಜನರು ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ವೀಡಿಯೊಗಳನ್ನು ನೋಡಿಕೊಂಡು ಕಳೆಯುತ್ತಿದ್ದಾರೆ. ಪ್ರತಿದಿನ ಹಲವಾರು ಇಂಟ್ರಸ್ಟಿಂಗ್ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಈ ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೆ, ಇನ್ನು ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಅಳುವಂತೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.