ನ್ಯಾಚುರಲ್ ಸ್ಟಾರ್ ನಾನಿ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ದಸರಾ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರು ಸಾಲು ಸಾಲು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ನಾನಿ 31ನೇ ಸಿನಿಮಾ ಅನೌನ್ಸ್ ಆಗಿತ್ತು. ಈ ಹಿಂದೆ ಕಾಮಿಡಿ ಕಥಾಹಂದರದ ಅಂಟೆ ಸುಂದರಾನಿಕಿ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿ ಜೊತೆ ಕೈ ಜೋಡಿಸಿದ್ದಾರೆ. ದಸರಾ ಹಬ್ಬದ ಅಂಗವಾಗಿ ಹೈದ್ರಾಬಾದ್ ನಲ್ಲಿ ’ಸೂರ್ಯನ ಶನಿವಾರ’ ಸಿನಿಮಾ ಸೆಟ್ಟೇರಿದೆ.
ಇದನ್ನೂ ಓದಿ : ಟಗರು ಪಲ್ಯ ಚಿತ್ರತಂಡದ ಜೊತೆ ಜೀ ಕನ್ನಡ ನ್ಯೂಸ್ ಸಂದರ್ಶನ
RTನಗರದಲ್ಲಿ ಮೈಸೂರು ದಸರಾ ಮಾದರಿಯಲ್ಲೇ ಮಹೋತ್ಸವ
ಮುನಿರೆಡ್ಡಿಪಾಳ್ಯದಲ್ಲಿ ನಿನ್ನೆ ಸಂಜೆ 7 ಗಂಟೆಯಿಂದಲೇ ದಸರಾ
ನೂರಕ್ಕೂ ಹೆಚ್ಚು ವಿವಿಧ ದೇವರ ಪಲ್ಲಕ್ಕಿಗಳ ಮೆರವಣಿಗೆ ಆರಂಭ
ಸಂಗೀತ ಕಾರ್ಯಕ್ರಮ ಸೇರಿ ವಿವಿಧ ಕಲಾತಂಡಗಳ ಕಾರ್ಯಕ್ರಮ
JCನಗರ ದಸರಾದಿಂದ ಇಂದು ಬೆಳಗ್ಗೆ 8ಗಂಟೆವರೆಗೆ ರಸ್ತೆ ಬಂದ್
Banni tree pooja vidhana : ದಸರಾ ಹಬ್ಬದ ದಿನದಂದು ಬನ್ನಿ ಮರವನ್ನು ಪೂಜಿಸಲಾಗುತ್ತದೆ. ನಮ್ಮ ಪುರಾಣದಲ್ಲಿ ಬನ್ನಿ ಮರಕ್ಕೆ ಶಮೀ ವೃಕ್ಷ ಅಂತ ಕರೆಯಲಾಗುತ್ತದೆ. ಈ ಮರದ ಪೂಜೆ ಮಾಡುವುದರಿಂದ ಅನೇಕ ಫಲ ಸಿಗುತ್ತದೆ ಎಂಬುದು ನಮ್ಮ ಹಿರಿಯರ ನಂಬಿಕೆ. ಬನ್ನಿ ಮರದ ಪೂಜೆಯನ್ನು ಏಕೆ ಮಾಡುತ್ತಾರೆ? ಇದರ ಹಿಂದಿನ ಕಥೆ ಏನು? ಹೀಗೆ ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ..
ದಸರಾ ನವರಾತ್ರಿ ಅಂದಾಕ್ಷಣ ನೆನಪಾಗೋದು ಮೈಸೂರು ದಸರಾ. ದಸರಾದಲ್ಲಿ ಗೊಂಬೆಗಳನ್ನ ಕೂರಿಸಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಲಾಗುತ್ತೆ. ಅದೇ ರೀತಿ ನಾವೇನೂ ಕಮ್ಮಿ ಇಲ್ಲ ಅಂತ ರಾಜ್ಯದ ಗಡಿ ಜಿಲ್ಲೆಯಾದ ಕೋಲಾರದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ಪ್ರಚಲಿತ ವಿದ್ಯಾಮಾನಗಳು ಸೇರಿದಂತೆ ವಿವಿಧ ರೀತಿಯಲ್ಲಿ ಗೊಂಬೆಗಳನ್ನ ಕೂರಿಸಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯೋರ್ವರು ನವರಾತ್ರಿಯನ್ನ ತಮ್ಮ ಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ..
ನವರಾತ್ರಿ ಹಿನ್ನೆಲೆಯಲ್ಲಿ ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಶ್ರೀ ಅಂಬಾಭವಾನಿ ತರುಣ ಮಂಡಳದ ವತಿಯಿಂದ ಈ ಬಾರಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಬರೊಬ್ಬರಿ 15 ಸಾವಿರ ಕ್ಕೂ ಹೆಚ್ಚು ಶೇಂಗಾ ಹೋಳಿಗೆ ವಿತರಿಸಲಾಗಿದೆ. ಶೇಂಗಾ ಹೋಳಿಗೆ ಸವಿದು ಭಕ್ತರು ಹರ್ಷ ಪಟ್ಟರು. ಇನ್ನೂ ಈ ಕಾಲೋನಿಯಲ್ಲಿ ಸದಾ ಜಾಗೃತವಾಗಿರೋ ಜಗನ್ಮಾತೆ ಅಂಬಾಭವಾನಿ ದೇವಸ್ಥಾನ ಇದೆ. ಇಲ್ಲಿ ಜಗನ್ಮಾತೆ ಭಕ್ತರ ಆಶೋತ್ತರಗಳನ್ನು ಈಡೇರಿಸೊ ಮೂಲಕ ನೊಂದವರ ಬಾಳಿಗೆ ಬೆಳಕಾಗಿ ನಿಲ್ಲುತ್ತಿದ್ದಾಳೆ. ಹೀಗಾಗಿ ಇಲ್ಲಿ ಭಕ್ತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ ನವರಾತ್ರಿ ಹಬ್ಬದಲ್ಲಿ ಪುರಾಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ...
ದಸರಾವನ್ನು ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ಈ ವರ್ಷ ಅಕ್ಟೋಬರ್ 24 ರಂದು ದಸರಾ ಆಚರಿಸಲಾಗುವುದು. ದಸರಾವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಜನರು ವಿಜಯದಶಮಿ ಸಂದರ್ಭದಲ್ಲಿ ಕೆಲವು ಹಣಕಾಸಿನ ಸಲಹೆಗಳನ್ನು ಸಹ ತಿಳಿದುಕೊಳ್ಳಬೇಕು, ಇದರಿಂದ ಜನರು ಹಣಕಾಸಿನ ವಿಷಯಗಳಲ್ಲಿ ಸರಿಯಾದ ಮಾರ್ಗವನ್ನು ಪಡೆಯಬಹುದು. ಇಂದಿನ ಕಾಲಘಟ್ಟದಲ್ಲಿ ಆರ್ಥಿಕವಾಗಿ ಸದೃಢರಾಗುವುದು ಬಹಳ ಮುಖ್ಯ.
ಹೊಸ ಆರಂಭ, ಹೊಸ ದೃಷ್ಟಿಕೋನ
ಮೈಸೂರಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಬೇಗ ಹೋಗಿ ಎಂದಿದ್ದಕ್ಕೆ ಪೊಲೀಸರ ಮೇಲೆ ದೌರ್ಜನ್ಯ ದಸರಾ ನೋಡಲು ಬಂದವ್ರಿಂದ ಪೊಲೀಸರ ಮೇಲೆ ಹಲ್ಲೆ ಮೈಸೂರಿನ ಹಾರ್ಡಿಂಗ್ ಸರ್ಕಲ್ ವೃತ್ತದಲ್ಲಿ ಘಟನೆ ಟ್ರಾಫಿಕ್ ಆಗುತ್ತೆ ಮುಂದೆ ಹೋಗಿ ಎಂದಿದ್ದಕ್ಕೆ ಹಲ್ಲೆ
ತುಮಕೂರಿನ ಶೆಟ್ಟಿಹಳ್ಳಿ ನಿವಾಸಿ ಸೀಮಾ ಮನೆಯಲ್ಲಿವೇ ಬಣ್ಣ ಬಣ್ಣದ ನೂರಾರು ಬೊಂಬೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಬೊಂಬೆಗಳ ಮೂಲಕ ಮೈಸೂರು ಅರಮನೆಯನ್ನೇ ನಿರ್ಮಿಸಿದ ಸೀಮಾ ಕುಟುಂಬ ಇಡೀ ಬಡಾವಣೆಯ ಆಕರ್ಷಕ ಕೇಂದ್ರ ಬಿಂದು.. ಸತತ ಒಂದು ತಿಂಗಳಿಂದ ಕುಟುಂಬಸ್ಥರೆಲ್ಲಾ ಸೇರಿ ಶ್ರಮಪಟ್ಟು.
ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಹಿನ್ನೆಲೆ
ಪ್ರವಾಸಿಗರನ್ನು ಸೆಳೆಯಲು ಕೆಆರ್ಎಸ್ ಬೃಂದಾವನಕ್ಕೆ ವಿಶೇಷ ದೀಪಾಲಂಕಾರ
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಬೃಂದಾವನ
ದೀಪಾಲಂಕಾರಕ್ಕೆ ಜಿಲ್ಲಾ ಸಚಿವ ಚಲುವರಾಯಸ್ವಾಮಿ ಚಾಲನೆ
October 2023 Festivals: ಚಾತುರ್ಮಾಸ ಸಮಯದಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಕ್ಟೋಬರ್ನಲ್ಲಿ ಯಾವ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ನಡೆಯಲಿವೆ ಎಂಬುದರ ಬಗ್ಗೆ ತಿಳಿಯಿರಿ.
ನಾಳೆ ರಾಷ್ಟ್ರಪತಿ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಸಚಿವ ಎಸ್.ಟಿ ಸೋಮಶೇಖರ್ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.