ಪ್ರತಿ ವರ್ಷ ದೀಪಾವಳಿ ಜಾತ್ರೆಯ ಸಮಯದಲ್ಲಿ ಅಮಾವಾಸ್ಯೆ ದಿನದಂದು ಈ ಉತ್ಸವ ನಡೆಯಲಿದ್ದು ಲಕ್ಷಾಂತರ ಭಕ್ತರು ಹಾಲರವಿ ಉತ್ಸವವನ್ನು ಕಣ್ತುಂಬಿಕೊಂಡರು. ಸ್ಥಳೀಯ ಬೇಡಗಂಪಣ ಸಮುದಾಯದವರು ಮಾದೇಶ್ವರನಿಗೆ ನಡೆಸುವ ಉತ್ಸವ ಇದಾಗಿದ್ದು ಸಮುದಾಯದ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಇದರಲ್ಲಿ ಭಾಗಿಯಾಗುತ್ತಾರೆ.
ಜಮ್ಮು & ಕಾಶ್ಮೀರದ ಅಖ್ನೂರ್ ಸೆಕ್ಟರ್ನಲ್ಲಿ ನಿನ್ನೆ ಸೈನಿಕರು ದೀಪಾವಳಿ ಆಚರಿಸಿದ್ದಾರೆ.. ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಸೇನೆಯ ಸೈನಿಕರು ಪಟಾಕಿಗಳನ್ನು ಸಿಡಿಸಿದರು ಮತ್ತು ಮಣ್ಣಿನ ದೀಪಗಳನ್ನು ಬೆಳಗಿಸಿದರು.
ಯಾರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹ ಕೆಲವೊಮ್ಮೆ ಪಟಾಕಿ ಸಿಡಿಸುವಾಗ ಕೆಲವು ಅಪಘಾತಗಳು ನಡೆಯುತ್ತವೆ. ಇದಕ್ಕಾಗಿ ನಾವು ಪಟಾಕಿ ಸಿಡಿಸುವಾಗ ಏನು ಮಾಡಬೇಕು? ಏನು ಮಾಡಬಾರದು..? ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು ಎಂಬ ಬಗ್ಗೆಯೂ ತಿಳಿದಿರುವುದು ಅತ್ಯಗತ್ಯ. ನೀವು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಮೊದಲು ಈ ವಿಷಯಗಳನ್ನೊಮ್ಮೆ ತಪ್ಪದೇ ತಿಳಿಯಿರಿ.
ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ಲಾಟ್ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಇಲಾಖೆ ತಿಳಿಸಿದೆ.
ಭಾರತೀಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದೆ. ಹಬ್ಬದ ವಿಶೇಷ ರೈಲುಗಳು ಕ್ರಮವಾಗಿ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ನಿ ನಡುವೆ ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ.
ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಸಕಾರಾತ್ಮಕ ವಾತಾವರಣವನ್ನು ಕಾಪಾಡುತ್ತದೆ. ಆದರೆ ಮನೆಯಲ್ಲಿ ಸರಿಯಾದ ಸಸ್ಯಗಳನ್ನು ನೆಡುವುದು ಬಹಳ ಮುಖ್ಯ. ಲಕ್ಷ್ಮಿ ದೇವಿ ನೆಲೆಸಿರುವ ವಾಸ್ತುವಿನಲ್ಲಿ ಇಂತಹ ಅನೇಕ ಸಸ್ಯಗಳನ್ನು ಹೇಳಲಾಗಿದೆ. ಧನ್ತೇರಸ್ ನಿಂದ ದೀಪಾವಳಿಯ ನಡುವೆ ಯಾವುದೇ ದಿನ ಈ ಗಿಡಗಳಲ್ಲಿ ಯಾವುದಾದರೂ ಒಂದನ್ನು ಮನೆಗೆ ತಂದರೆ ಲಕ್ಷ್ಮಿಯ ಸ್ಥಿರ ವಾಸಸ್ಥಾನವಾಗುತ್ತದೆ. ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸಲು, ಸಂತೋಷ-ಸಮೃದ್ಧಿ ಮತ್ತು ಸಂಪತ್ತು ಪಡೆಯಲು, ನೀವು ಮನೆಯಲ್ಲಿ ಈ ಗಿಡಗಳನ್ನು ನೆಡಬೇಕು.
Diwali Astrology: ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 24, 2022 ರಂದು ಆಚರಿಸಲಾಗುತ್ತದೆ ಮತ್ತು ಇದರ ನಂತರ ಬುಧ ಗ್ರಹವು ಅಕ್ಟೋಬರ್ 26 ರಂದು ಸಾಗಲಿದೆ. ಈ ಸಮಯವು ಕೆಲವು ಜನರಿಗೆ ಲಕ್ಷ್ಮಿ ದೇವಿಯ ಅಪಾರ ಆಶೀರ್ವಾದವನ್ನು ತರುತ್ತದೆ.
Diwali 2021: ದೀಪಾವಳಿಯ (Deepawali 2021) ಇಡೀ ದಿನವನ್ನು ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂಚಿಸಿದ ರೀತಿಯಲ್ಲಿ ಕಳೆದರೆ, ತಾಯಿ ಲಕ್ಷ್ಮಿ ಇಡೀ ವರ್ಷ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
Diwali 2021 Money Remedies: ದೀಪಾವಳಿ ಹಬ್ಬವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ವರ್ಷದ ಅತ್ಯಂತ ವಿಶೇಷ ಸಂದರ್ಭವಾಗಿದೆ. ಈ ದಿನ ಕೆಲವು ಪರಿಹಾರಗಳನ್ನು ತೆಗೆದುಕೊಂಡರೆ, ತಾಯಿ ಲಕ್ಷ್ಮೀಯ ಕೃಪೆಯಿಂದಾಗಿ ಶೀಘ್ರವೇ ಶ್ರೀಮಂತರಾಗಬಹುದು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.