ಚೀನಾದೊಂದಿಗೆ ಎಲ್ಎಸಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಉಪಗ್ರಹ ಚಿತ್ರಗಳು ಚೀನಾ ದೇಶವು ಭಾರತ ಭೂಪ್ರದೇಶಕ್ಕೆ ನುಸುಳಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ವಿಶ್ವದ ಔಷಧಾಲಯವಾಗಿ ತನ್ನ ಅಪಾರ ಅನುಭವ ಮತ್ತು ಔಷಧದಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದು, ಅನೇಕ ಪ್ರಾದೇಶಿಕ ಮತ್ತು ಜಾಗತಿಕ ಉಪಕ್ರಮಗಳಿಗೆ ನಾಂದಿ ಹಾಡಿದೆ ಎಂದು ಶಾಂಘೈ ಸಹಕಾರ ಸಂಸ್ಥೆಯ (Shanghai Cooperation Organisation) ಪ್ರಧಾನ ಕಾರ್ಯದರ್ಶಿ ವ್ಲಾಡಿಮಿರ್ ನೊರೊವ್ (Vladimir Norov) ಹೇಳಿದ್ದಾರೆ.
ಹಿಂಸಾತ್ಮಕ ಮುಖಾಮುಖಿ ನಡೆದ ಲಡಾಖ್ನ ಸ್ಥಳವಾದ ಗಾಲ್ವಾನ್ ಕಣಿವೆಯ ಮೇಲೆ ಚೀನಾ ಸಾರ್ವಭೌಮತ್ವದ ವಾದವನ್ನು ಭಾರತದ ವಿದೇಶಾಂಗ ಇಲಾಖೆ ಸಾರಾಸಗಟಾಗಿ ತಿರಸ್ಕರಿಸಿದ್ದಷ್ಟೇ ಅಲ್ಲದೆ ಚೀನಾದ ವಾದವನ್ನು ತೀವ್ರವಾಗಿ ಖಂಡಿಸಿತು
ಚೀನಾದೊಂದಿಗೆ ಹೆಚ್ಚುತ್ತಿರುವ ಗಡಿ ವಿವಾದದ ಮಧ್ಯೆ ರಷ್ಯಾದಿಂದ 30ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಯೋಜಿಸುತ್ತಿದೆ. ಅದೇ ಸಮಯದಲ್ಲಿ ರಷ್ಯಾ ಕೂಡ ಈ ವಿಮಾನಗಳನ್ನು ಆದಷ್ಟು ಬೇಗ ಪೂರೈಸಲು ಒಪ್ಪಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರ ಹೇಳಿಕೆಯ ಪ್ರಕಾರ, ವಿವಾದಿತ ಪ್ರದೇಶವು ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಚೀನಾದ ಕಡೆಗೆ ಇದೆ ಎಂದು ಹೇಳಿಕೊಂಡಿದ್ದಾರೆ.
ಪಂದ್ಯಾವಳಿಗೆ ಸಂಬಂಧಿಸಿದ ವಿವಿಧ ಪ್ರಾಯೋಜಕತ್ವದ ಒಪ್ಪಂದಗಳನ್ನು ಪರಿಶೀಲಿಸಲು ಐಪಿಎಲ್ ಆಡಳಿತ ಮಂಡಳಿ ಮುಂದಿನ ವಾರ ಸಭೆ ಸೇರಲಿದೆ. ಐಪಿಎಲ್ ಆಡಳಿತ ಮಂಡಳಿ 2022 ರಲ್ಲಿ ಕೊನೆಗೊಳ್ಳಲಿರುವ ವಿವೊ ಜೊತೆಗಿನ ವಾರ್ಷಿಕ 440 ಕೋಟಿ ರೂ.ಗಳ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ಮರು ಪರಿಶೀಲಿಸಲಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚೀನಾವನ್ನು ಟೆಲಿಕಾಂ, ರೈಲ್ವೆ ಮತ್ತು ವಾಯುಯಾನ ಕ್ಷೇತ್ರಗಳಿಗೆ ಪ್ರವೇಶಿಸದಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ, ಆದರೆ ಗಾಲ್ವಾನ್ ಕಣಿವೆಯಲ್ಲಿ ತನ್ನ ಸೈನಿಕರೊಂದಿಗೆ ಹಿಂಸಾತ್ಮಕ ಮುಖಾಮುಖಿಯಾದ ನಂತರ ಬೀಜಿಂಗ್ ಜೊತೆ ವ್ಯವಹರಿಸುವಾಗ ನರೇಂದ್ರ ಮೋದಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.
ದೇಶವು ಯಥಾಸ್ಥಿತಿ ಪುನಃ ಸ್ಥಾಪನೆಯಾಗಲಿದೆ ಎಂಬ ಭರವಸೆಯನ್ನು ಬಯಸುತ್ತದೆ ಮತ್ತು ಚೀನಾವು ವಾಸ್ತವಿಕ ನಿಯಂತ್ರಣದ ರೇಖೆಯ ಮೂಲ ಸ್ಥಾನಕ್ಕೆ ಮರಳಲಿದೆ" ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದರು. ಪ್ರಧಾನಿ ಮೋದಿ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿ ಕೇಂದ್ರ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದರು.
ಈ ವಾರದ ಆರಂಭದಲ್ಲಿ ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾದ 10 ಭಾರತೀಯ ಸೈನಿಕರನ್ನು ಚೀನಾ ಹಿಂದಿರುಗಿಸಿದೆ ಎಂಬ ವರದಿಗಳ ಮಧ್ಯೆ, ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ (ಜೂನ್ 19) ಅದನ್ನು ನಿರಾಕರಿಸಿದೆ.
ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ವರ್ಚುವಲ್ ಸಭೆ ಇಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿದೆ.
ತನ್ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಕಾಪಾಡುವ ತನ್ನ ದೃಢ ಇಚ್ಛೆಯನ್ನು ಭಾರತ ಕಡೆಗಣಿಸಕೂಡದು ಎಂದು ಚೀನಾ ಹೇಳಿದೆ. ಈ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.