ಸೆಮಿಫೈನಲ್ ಹಣಾಹಣಿಗೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ: ಹೈವೋಲ್ಟೇಜ್ ಹಣಾಹಣಿಗೆ ಆಡುವ 11ರ ಬಳಗ ಹೀಗಿದೆ

IND vs ENG Semifinals: 2022ರ ಟಿ20 ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ 10 ವಿಕೆಟ್‌’ಗಳ ಹೀನಾಯ ಸೋಲಿನ ನಂತರ ಭಾರತ ತನ್ನ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಮಾಡಿದೆ. ಗಯಾನಾದಲ್ಲಿ ಇಲ್ಲಿಯವರೆಗೆ ಸ್ಪಿನ್ನರ್‌’ಗಳಿಗೆ ಸಾಕಷ್ಟು ನೆರವು ಸಿಕ್ಕಿದೆ.

Written by - Bhavishya Shetty | Last Updated : Jun 27, 2024, 05:10 PM IST
    • 2ನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ
    • ಎರಡೂ ತಂಡಗಳು ಜೂನ್ 27 ರಂದು ಗಯಾನಾದಲ್ಲಿ ಮುಖಾಮುಖಿಯಾಗಲಿವೆ
    • ಭಾರತ ತನ್ನ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಮಾಡಿದೆ
ಸೆಮಿಫೈನಲ್ ಹಣಾಹಣಿಗೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ: ಹೈವೋಲ್ಟೇಜ್ ಹಣಾಹಣಿಗೆ ಆಡುವ 11ರ ಬಳಗ ಹೀಗಿದೆ  title=
team india playing 11 for t20 world cup 2024

IND vs ENG Semifinals: T20 ವಿಶ್ವಕಪ್ 2024ರ ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಎರಡೂ ತಂಡಗಳು ಜೂನ್ 27 ರಂದು ಗಯಾನಾದಲ್ಲಿ ಮುಖಾಮುಖಿಯಾಗಲಿವೆ. ಆಂಗ್ಲ ತಂಡ 2022ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಗೆದ್ದಿತ್ತು. ಅಷ್ಟೇ ಅಲ್ಲದೆ, ಸೆಮಿಫೈನಲ್‌’ನಲ್ಲಿ ಭಾರತವನ್ನು 10 ವಿಕೆಟ್‌’ಗಳಿಂದ ಸೋಲಿಸಿತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ಇದೀಗ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಯಾರು ಗೊತ್ತಾ? ಈಕೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಸೊಸೆ... 300 ಕೋಟಿ ಆಸ್ತಿಯ ಒಡತಿ

2022ರ ಟಿ20 ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ 10 ವಿಕೆಟ್‌’ಗಳ ಹೀನಾಯ ಸೋಲಿನ ನಂತರ ಭಾರತ ತನ್ನ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಮಾಡಿದೆ. ಗಯಾನಾದಲ್ಲಿ ಇಲ್ಲಿಯವರೆಗೆ ಸ್ಪಿನ್ನರ್‌’ಗಳಿಗೆ ಸಾಕಷ್ಟು ನೆರವು ಸಿಕ್ಕಿದೆ. ಹೀಗಿರುವಾಗ ಭಾರತದ ಕುಲದೀಪ್ ಯಾದವ್ ಹಾಗೂ ಇಂಗ್ಲೆಂಡ್‌ನ ಆದಿಲ್ ರಶೀದ್ ಮೇಲೆ ಕಣ್ಣಿಟ್ಟಿದ್ದಾರೆ. ಪಂದ್ಯದ ಮೇಲೆ ಮಳೆಯ ಛಾಯೆ ಕೂಡ ಇದೆ.

ಮೊಹಮ್ಮದ್ ಸಿರಾಜ್ ಪುನರಾಗಮನ ಮಾಡುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಸಿರಾಜ್ ಸೇರ್ಪಡೆ ಭಾರತದ ವೇಗದ ದಾಳಿಗೆ ಇನ್ನಷ್ಟು ಬಲ ತುಂಬುವ ಸಾಧ್ಯತೆ ಇದೆ. ಈ ಬಾರಿಯ ಟಿ20 ವಿಶ್ವಕಪ್‌’ನಲ್ಲಿ ಸಿರಾಜ್ 3 ಪಂದ್ಯಗಳನ್ನು ಆಡಿದ್ದು, ಕೇವಲ 1 ವಿಕೆಟ್ ಪಡೆದಿದ್ದಾರೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.

ಇದನ್ನೂ ಓದಿ:  ಕರ್ಪೂರವನ್ನು ಈ ಎಣ್ಣೆಯಲ್ಲಿ ಅದ್ದಿ ಹಚ್ಚಿ: ಬಿಳಿಕೂದಲು ಮತ್ತೆಂದೂ ಬಾರದಂತೆ ಬುಡದಿಂದಲೇ ಕಪ್ಪಾಗುತ್ತೆ… ಕೇವಲ 10 ನಿಮಿಷದಲ್ಲಿ!

ಇಂಗ್ಲೆಂಡ್: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News