Rajasthan Assembly Election 2023: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಪ್ರಮುಖ ಅಭ್ಯರ್ಥಿಗಳಾದ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ವಸುಂಧರಾ ರಾಜೆ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಗೆಹ್ಲೋಟ್ ಸರ್ದಾರ್ಪುರದಿಂದ ಕಣದಲ್ಲಿದ್ದರೆ, ಪೈಲಟ್ ಟೊಂಕ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
Rajasthan Election Result 2023: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸರ್ದಾರ್ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವು ಗೆಹ್ಲೋಟ್ ಅವರ ಕಾರ್ಯಕ್ಷೇತ್ರವಾಗಿದ್ದು, ಅವರು 25 ವರ್ಷಗಳಿಂದ ನಿರಂತರವಾಗಿ ಇಲ್ಲಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.
Rajasthan Congress Manifesto: ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ರಾಜ್ಯದ ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಭರ್ಜರಿ ಘೋಷಣೆಗಳನ್ನು ಮಾಡಲಾಗಿದೆ.
ರಾಜಸ್ತಾನದ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮಗೆ ಮುಖ್ಯಮಂತ್ರಿ ಪದವಿ ಮುಖ್ಯವಲ್ಲ, ಆದರೆ ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುವುದಾಗಿ ಹೇಳಿದ್ದಾರೆ.
Rajasthan CM : ನನಗೆ ಸಿಎಂ ಸ್ಥಾನ ಎನ್ನುವುದು ದೊಡ್ಡದಲ್ಲ, ಸೋನಿಯಾ ಗಾಂಧಿಯವರು ನನಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೂ 3 ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಿಎಂ ಸ್ಥಾನವನ್ನು ತೊರೆಯಲು ಯೋಚಿಸುತ್ತಿದ್ದೇನೆ, ಆದರೆ 'ಈ ಹುದ್ದೆಯು ನನ್ನನ್ನು ಬಿಡುತ್ತಿಲ್ಲ' ಮತ್ತು ಇದನ್ನು ಹೇಳಲು 'ಧೈರ್ಯ' ಬೇಕು ಎಂದು ಸೋಮವಾರ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸಚಿವ ಸಂಪುಟವು ರಾಜ್ಯದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳನ್ನು ರಚಿಸುವ ಉನ್ನತ ಮಟ್ಟದ ಸಮಿತಿಯ ಪ್ರಸ್ತಾವನೆಗೆ ಶುಕ್ರವಾರ ಅನುಮೋದನೆ ನೀಡಿದೆ. ಗೆಹ್ಲೋಟ್ ಸರ್ಕಾರದ ಒಪ್ಪಿಗೆಯ ನಂತರ, ರಾಜಸ್ಥಾನವು ಈಗ ಒಟ್ಟು 50 ಜಿಲ್ಲೆಗಳನ್ನು ಹೊಂದಿರುತ್ತದೆ.
Chiranjeevi Health Insurance Scheme: ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ನಿಮಗೆ ಸರ್ಕಾರವು ಉಚಿತವಾಗಿ ಆರೋಗ್ಯ ವಿಮೆ ನೀಡುತ್ತದೆ. ಇದರಡಿ ಎಲ್ಲಾ ವರ್ಗಗಳ ಕುಟುಂಬಗಳಿಗೆ ರಾಜ್ಯ ಸರ್ಕಾರವೇ ವಿಮೆಯ ಪ್ರೀಮಿಯಂ ಮೊತ್ತವನ್ನು ಪಾವತಿಸುತ್ತದೆ.
ಸೀತಾ ಮಾತೆ ತುಂಬಾ ಸುಂದರವಾಗಿದ್ದಳು. ಸೀತೆಯ ಈ ಸೌಂದರ್ಯಕ್ಕೆ ಭಗವಾನ್ ರಾಮ ಮತ್ತು ರಾವಣರು ಹುಚ್ಚರಾಗಿದ್ದರು. ಆಕೆ ಸುಂದರವಾಗಿದ್ದರಿಂದಲೇ ರಾಮ ಮತ್ತು ರಾವಣರ ನಡುವೆ ಯುದ್ಧ ನಡೆದಿತ್ತು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನ ಉಚಿತ ಮೊಬೈಲ್ ಯೋಜನೆ 2023 ರ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ಗಳನ್ನು ನೀಡಲಿದ್ದಾರೆ. ಈಗ, ಮಹಿಳೆಯರಿಗಾಗಿ ಈ ಯೋಜನೆಯು ಗೇಮ್ ಚೇಂಜರ್ ಆಗಬಹುದೇ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಅಧಿಕಾರಿಗಳ ಪ್ರಕಾರ, ಇದು ರಾಜ್ಯದ ಸುಮಾರು 1.33 ಕೋಟಿ ಅರ್ಹ ಮಹಿಳೆಯರಿಗೆ ನೇರ ಪ್ರಯೋಜನವನ್ನು ನೀಡಲಿದೆ.
Free electricity up to 100 units: ತಿಂಗಳಿಗೆ 100 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಶುಲ್ಕ ಇರುವುದಿಲ್ಲ. ಇದಕ್ಕಿಂತಲೂ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
Rajasthan Politics: ಇದೇ ವರ್ಷ ರಾಜಸ್ಥಾನದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮತ್ತು ಸಿಎಂ ಅಶೋಕ್ ಗೆಹ್ಲೋಟ್ ನಡುವಿನ ವೈಮನಸ್ಸನ್ನು ಹೋಗಲಾಡಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಅಶೋಕ್ ಗೆಹ್ಲೋಟ್ ಅವರಿಗೆ ಸಚಿನ್ ಪೈಲಟ್ ಬಗ್ಗೆ ಪ್ರಶ್ನೆ ಕೇಳಿದಾಗ, ಅವರಿಗೆ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿಯವರ ಒಂದು ಮಾತು ನೆನಪಿಗೆ ಬಂದಿದೆ.
ರಾಜಸ್ತಾನದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದ್ದ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ನಡುವಿನ ಸಂಘರ್ಷಕ್ಕೆ ವಿರಾಮ ಹಾಡುವಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಶಸ್ವಿಯಾಗಿದೆ.
Karnataka Assembly Elections 2023: ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್ ನೀಡಿದ ಭರವಸೆಯ ತಂತರ, ಬಿಜೆಪಿ ಈ ಭರವಸೆಯನ್ನು ಭಜರಂಗಬಲಿ ಭಗವಂತನೊಂದಿಗೆ ಸಂಯೋಜಿಸುವ ಮೂಲಕ ದೊಡ್ಡ ಪ್ರಚಾರವನ್ನೆ ಗಿಟ್ಟಿಸಿಕೊಂಡಿತು. ಪ್ರಧಾನಿ ಮೋದಿ ಕೂಡ ತಮ್ಮ ರ್ಯಾಲಿಗಳಲ್ಲಿ ಬಜರಂಗಬಲಿಯ ಬಗ್ಗೆ ಹಲವು ಹಲವು ಬಾರಿ ಪ್ರಸ್ತಾಪಿಸಿದ್ದಾರೆ.
ಇಂದು ರಾಜಸ್ಥಾನದ ರಾಜ್ಸಮಂದ್ನ ನಾಥದ್ವಾರದಲ್ಲಿ 369 ಅಡಿ ಎತ್ತರದ ಶಿವನ 'ವಿಶ್ವ ಸ್ವರೂಪಂ' ಪ್ರತಿಮೆಯನ್ನು ಉದ್ಘಾಟಿಸಲಾಗುತ್ತಿದೆ. ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು ತತ್ ಪದಂ ಸಂಸ್ಥಾನ ನಿರ್ಮಿಸಿದೆ. ಈ ಶಿವನ ಪ್ರತಿಮೆಯ ತೂಕ ಸುಮಾರು 30 ಸಾವಿರ ಟನ್ ಇದೆ. ಶಿವನ ಅತಿ ಎತ್ತರದ ಪ್ರತಿಮೆಯ ವಿಶೇಷತೆಯನ್ನು ತಿಳಿಯೋಣ.
Rajasthan Politics: ನಮ್ಮ ಬಾಗಿಲು ಸಂಪೂರ್ಣವಾಗಿ ತೆರೆದಿದೆ'' ಎಂದು ರಾಜಸ್ಥಾನದ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಬಿದ್ದು ಬಿಜೆಪಿಗೆ ಆ ಸರ್ಕಾರ ಬೀಳಿಸಲು ಯಾರಾದರೂ ಸಹಾಯ ಮಾಡಿದರೆ ಅಂತಹ ವ್ಯಕ್ತಿಗೆ ನಾವು ಸಹಕಾರ ನೀಡುತ್ತೇವೆ. ಕಾಂಗ್ರೆಸ್ ನ ಈ ನಾಟಕದಲ್ಲಿ ಬಿಜೆಪಿ ಪಾತ್ರವಿಲ್ಲ. ಇದು ಅವರ ಆಂತರಿಕ ವಿಚಾರ' ಅವರು ಹೇಳಿದ್ದಾರೆ.
ಶನಿವಾರದಂದು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ತಮ್ಮ ರಾಜ್ಯದಲ್ಲಿನ ರಾಜಕೀಯ ಬಿಕ್ಕಟ್ಟಿನ ನೈತಿಕ ಹೊಣೆಗಾರಿಕೆಯನ್ನು ವಹಿಸಿಕೊಂಡ ಕೆಲವು ದಿನಗಳ ನಂತರ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸುಳಿವು ನೀಡಿದ್ದಾರೆ.
Ashok Gehlot: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದ ಕಾಂಗ್ರೆಸ್ ಪಾಳೆಯದಲ್ಲಿ ಭಾರಿ ಬಿರುಗಾಳಿಯೇ ಎದ್ದಿದೆ. ಏತನ್ಮಧ್ಯೆ ರಾಜಸ್ಥಾನದ ಮುಖ್ಯಮಂತ್ರಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಬಳಿಕ ಅವರ ಕೈಯಲ್ಲಿ ಪತ್ರವೊಂದು ಕಂಡುಬಂದಿದ್ದು, ಪತ್ರದಲ್ಲಿ ಪೈಲಟ್ ಬಣದ ವಿರುದ್ಧ ದೂರುಗಳಿದ್ದವು ಎನ್ನಲಾಗಿದೆ.
Congress President Election: ಪ್ರಸ್ತುತ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಅವರು ಚುನಾವಣೆಗೆ ನಾಮಪತ್ರ ಸಲ್ಲಿಸದೆ ಇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ ಅವರ ಮಧ್ಯೆ ನೇರ ಹಣಾಹಣಿ ನಡೆಯುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
Rajasthan Political Crisis: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆ ದೆಹಲಿ ದರ್ಬಾರ್ನಲ್ಲಿ ರಾಜ್ಯದ ಪ್ರಮುಖ ನಾಯಕರ ಹಾಜರಾತಿ ಮುಂದುವರೆದಿದೆ. ಈ ಹಿನ್ನೆಲೆ ಇಂದು ಸಚಿನ್ ಪೈಲಟ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಸಂಜೆ 7 ರಿಂದ 8 ರ ನಡುವೆ ಈ ಭೇಟಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.