IND vs SA : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೂಳೆಬ್ಬಿಸಲಿದ್ದಾರೆ ಈ ಮಾಂತ್ರಿಕ ಬೌಲರ್!

ರಿಷಬ್ ಪಂತ್ ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಹಂಬಲದಲ್ಲಿದ್ದಾರೆ. ಅದಕ್ಕೆ ಈ ಮಾಂತ್ರಿಕ ಬೌಲರ್ ಮೂಲಕ ಈ ಪಂದ್ಯವನ್ನು ಪಂತ್ ಪ್ಲಾನ್ ಮಾಡಿದ್ದಾರೆ. ಹಾಗಿದ್ರೆ ಈ ಬೌಲರ್ ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ.

Written by - Channabasava A Kashinakunti | Last Updated : Jun 19, 2022, 06:44 PM IST
  • ಪಂತ್ ಗೆ ಅಸ್ತ್ರವಾಗಲಿದ್ದಾರೆ ಈ ಬೌಲರ್
  • ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಅತ್ಯುತ್ತಮ ದಾಖಲೆಗಳು
  • ಸರಣಿ 2-2ರಲ್ಲಿ ಸಮಬಲಗೊಂಡಿದೆ
IND vs SA : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೂಳೆಬ್ಬಿಸಲಿದ್ದಾರೆ ಈ ಮಾಂತ್ರಿಕ ಬೌಲರ್! title=

IND vs SA 5th T20 : ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾದ ಟಿ20 ಸರಣಿಯ ಕೊನೆಯ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಸರಣಿಯನ್ನು ತನ್ನದಾಗಿಸಿಕೊಳ್ಳುತ್ತದೆ, ಆದ್ದರಿಂದ ರಿಷಬ್ ಪಂತ್ ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಹಂಬಲದಲ್ಲಿದ್ದಾರೆ. ಅದಕ್ಕೆ ಈ ಮಾಂತ್ರಿಕ ಬೌಲರ್ ಮೂಲಕ ಈ ಪಂದ್ಯವನ್ನು ಪಂತ್ ಪ್ಲಾನ್ ಮಾಡಿದ್ದಾರೆ. ಹಾಗಿದ್ರೆ ಈ ಬೌಲರ್ ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ.

 ಪಂತ್ ಗೆ ಅಸ್ತ್ರವಾಗಲಿದ್ದಾರೆ ಈ ಬೌಲರ್

ಟಿ20 ಸರಣಿಯ ಕೊನೆಯ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ, ಟೀಂ ಇಂಡಿಯಾದ ಮಾಂತ್ರಿಕ ಬೌಲರ್ ಯುಜ್ವೇಂದ್ರ ಚಹಾಲ್ ಸಾಕಷ್ಟು ಮಾರಣಾಂತಿಕ ಎಂದು ಸಾಬೀತುಪಡಿಸಿದ್ದಾರೆ. ರಿಷಬ್ ಪಂತ್ ಗೆ ಈ ಪಂದ್ಯದಲ್ಲಿ ಚಾಹಲ್ ದೊಡ್ಡ ಅಸ್ತ್ರವಾಗಲಿದ್ದು, ಸ್ವಂತ ಬಲದಿಂದಲೂ ಪಂದ್ಯ ಗೆಲ್ಲಬಲ್ಲರು.

ಇದನ್ನೂ ಓದಿ : ಟಿ20 ವಿಶ್ವಕಪ್ 2022 ರ ಸಂಭಾವ್ಯ ಆಟಗಾರರ ಬಗ್ಗೆ ಸುಳಿವು ನೀಡಿದ ಗಂಗೂಲಿ! 

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಅತ್ಯುತ್ತಮ ದಾಖಲೆಗಳು 

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಪೋಟಕ ಬೌಲರ್ ಯುಜುವೇಂದ್ರ ಚಹಾಲ್ ಅದ್ಭುತ ದಾಖಲೆಗಳನ್ನು ಬರೆದಿದ್ದಾರೆ. ಈ ಮೈದಾನದಲ್ಲಿ ಆಡಿದ 2 ಟಿ20 ಪಂದ್ಯಗಳಲ್ಲಿ 9.00 ಎಕಾನಮಿಯಲ್ಲಿ 6 ವಿಕೆಟ್ ಪಡೆದಿದ್ದಾರೆ. ಯುಜ್ವೇಂದ್ರ ಚಹಾಲ್ ಈ ಮೈದಾನದಲ್ಲಿ ಟಿ20 ಪಂದ್ಯದಲ್ಲಿ 6 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ. ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 25 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ.

ಸರಣಿ 2-2ರಲ್ಲಿ ಸಮಬಲಗೊಂಡಿದೆ

5 ಪಂದ್ಯಗಳ ಟಿ20 ಸರಣಿ ಇದುವರೆಗೆ ರೋಚಕವಾಗಿದೆ. ದಕ್ಷಿಣ ಆಫ್ರಿಕಾ ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಉತ್ತಮ ಆರಂಭವನ್ನು ಮಾಡಿದೆ, ಆದರೆ ಟೀಂ ಇಂಡಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಿದೆ. ಈ ಮೈದಾನದಲ್ಲಿ ಉಭಯ ತಂಡಗಳ ನಡುವೆ ಕೇವಲ ಒಂದು ಪಂದ್ಯ ಮಾತ್ರ ನಡೆದಿದೆ. ಈ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಸೋಲು ಅನುಭವಿಸಬೇಕಾಯಿತು.

ಇದನ್ನೂ ಓದಿ : IND vs SA : ರಿಷಬ್ ಪಂತ್ ನಂಬಿಕೆ ಹುಸಿಗೊಳಿಸಿದ ಈ ಇಬ್ಬರು ಆಟಗಾರರು!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News