ಒಂದೇ ಓವರ್’ನಲ್ಲಿ ರೋಹಿತ್-ರಿಷಬ್ ವಿಕೆಟ್ ಕಬಳಿಸಿ ಶ್ರೀರಾಮನಿಗೆ ಕೈಮುಗಿದ ಕೇಶವ್ ಮಹಾರಾಜ್!

IND vs SA Final T20 World Cup 2024: ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ರೋಹಿತ್-ಕೊಹ್ಲಿ ಬೌಂಡರಿ ಬಾರಿಸಲು ಶುರುಮಾಡಿದ್ದರು. ಮೊದಲ ಓವರ್‌’ನಲ್ಲಿ ಕೊಹ್ಲಿ 4 ಬೌಂಡರಿ ಬಾರಿಸುವ ಮೂಲಕ ಎದುರಾಳಿಗಳನ್ನು ಬೆಂಡೆತ್ತಿದ್ದರು. ಈ ಮೂಲಕ ಮೊದಲ ಓವರ್‌’ನಲ್ಲಿ 15 ರನ್ ಬಂದಿತ್ತು.

Written by - Bhavishya Shetty | Last Updated : Jun 29, 2024, 11:18 PM IST
    • ಕೇಶವ್ ಮಹಾರಾಜ್ ಕೇವಲ ಒಂದು ಓವರ್‌’ನಲ್ಲಿ ಪಂದ್ಯದ ಗತಿಯನ್ನೇ ತಿರುಗಿಸಿದ್ದರು
    • ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
    • ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ರೋಹಿತ್-ಕೊಹ್ಲಿ ಬೌಂಡರಿ ಬಾರಿಸಲು ಶುರುಮಾಡಿದ್ದರು
ಒಂದೇ ಓವರ್’ನಲ್ಲಿ ರೋಹಿತ್-ರಿಷಬ್ ವಿಕೆಟ್ ಕಬಳಿಸಿ ಶ್ರೀರಾಮನಿಗೆ ಕೈಮುಗಿದ ಕೇಶವ್ ಮಹಾರಾಜ್!  title=
Keshav Maharaj

IND vs SA Final T20 World Cup 2024: T20 ವಿಶ್ವಕಪ್ 2024ರ ಅಂತಿಮ ಪಂದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಬ್ ಪಂತ್ ವಿಕೆಟ್’ನ್ನು ಒಂದೇ ಓವರ್’ನಲ್ಲಿ ಕೇಶವ್ ಮಹಾರಾಜ್ ಕಬಳಿಸಿದ್ದರು. ಭಾರತೀಯ ಮೂಲದ ಕೇಶವ್ ಮಹಾರಾಜ್ ಕೇವಲ ಒಂದು ಓವರ್‌’ನಲ್ಲಿ ಪಂದ್ಯದ ಗತಿಯನ್ನೇ ತಿರುಗಿಸಿದ್ದರು.

ಇದನ್ನೂ ಓದಿ: ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಮಿಂಚಿದ ದ.ಆಫ್ರಿಕಾದ ಕೇಶವ್ ಮಹಾರಾಜ್ ಹಿನ್ನೆಲೆ ಏನು ಗೊತ್ತಾ? ಈತ ಆಂಜನೇಯನ ಪರಮಭಕ್ತ!

ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ರೋಹಿತ್-ಕೊಹ್ಲಿ ಬೌಂಡರಿ ಬಾರಿಸಲು ಶುರುಮಾಡಿದ್ದರು. ಮೊದಲ ಓವರ್‌’ನಲ್ಲಿ ಕೊಹ್ಲಿ 4 ಬೌಂಡರಿ ಬಾರಿಸುವ ಮೂಲಕ ಎದುರಾಳಿಗಳನ್ನು ಬೆಂಡೆತ್ತಿದ್ದರು. ಈ ಮೂಲಕ ಮೊದಲ ಓವರ್‌’ನಲ್ಲಿ 15 ರನ್ ಬಂದಿತ್ತು.

ಎರಡನೇ ಓವರ್‌ನಲ್ಲಿ ಏಡನ್ ಮಾರ್ಕ್ರಾಮ್ ಚೆಂಡನ್ನು ಕೇಶವ್ ಮಹಾರಾಜ್ ಕೈಗೆ ನೀಡಿದರು. ರೋಹಿತ್ ಶರ್ಮಾ ಮೊದಲ ಎರಡು ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಮಹಾರಾಜ್ ಮೇಲೆ ಒತ್ತಡ ಹೇರಲು ಯತ್ನಿಸಿದರು. ಆದರೆ ಮೂರನೇ ಎಸೆತದಲ್ಲಿ ರೋಹಿತ್ ಶರ್ಮಾ ಕ್ಲಾಸೆನ್’ಗೆ ಕ್ಯಾಚ್ ನೀಡಿದರು. ಇದಾದ ಬಳಿಕ ಅದೇ ಓವರ್ ನ 5ನೇ ಎಸೆತದಲ್ಲಿ ರಿಷಬ್ ಪಂತ್ ಕೂಡ ಖಾತೆ ತೆರೆಯದೆ ಪೆವಿಲಿಯನ್’ಗೆ ಮರಳಿದರು.

ಇದನ್ನೂ ಓದಿ:  T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್

ಇವರಿಬ್ಬರ ವಿಕೆಟ್ ಪತನಗೊಳಿಸಿದ ಸಂತಸದಲ್ಲಿ ಕೇಶವ್ ಮಹಾರಾಜ್ ಕೈಮುಗಿದು ಪ್ರಾರ್ಥಿಸುತ್ತಿರುವುದು ಕಂಡುಬಂತು. ಅಂದಹಾಗೆ ಕೇಶವ್ ಮಹರಾಜ್ ಶ್ರೀರಾಮ ಮತ್ತು ಆಂಜನೇಯನ ಭಕ್ತ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News