ಸರಣಿ ಗೆಲುವು ಸಾಧಿಸಿದ ಭಾರತ!! ಸೂರ್ಯ ಕುಮಾರ್ ಸೂಪರ್ ಓವರ್ ಆಟಕ್ಕೆ ಟೀಂ ಇಂಡಿಯಾ ಜಯ..

IND VS SL 3rd T20 : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಭಾರತ ತಂಡ  ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು  ಭಾರತ ತಂಡ ಸೂಪರ್ ಓವರ್ ನಲ್ಲಿ ಆಡುವ ಮೂಲಕ ಗೆಲುವನ್ನು ಸಾಧಿಸಿತು. 

Written by - Zee Kannada News Desk | Last Updated : Jul 31, 2024, 12:07 AM IST
  • ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿದೆ
  • ಭಾರತ ತನ್ನ ಮೊದಲ ವಿಕೆಟ್ ಅನ್ನು ಪ್ರಾರಂಭದಲ್ಲಿಯೇ ಕಳೆದುಕೊಂಡಿತು ಮತ್ತು 137ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿತು
  • ಭಾರತ ತಂಡ ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು .
ಸರಣಿ ಗೆಲುವು ಸಾಧಿಸಿದ ಭಾರತ!! ಸೂರ್ಯ ಕುಮಾರ್ ಸೂಪರ್ ಓವರ್ ಆಟಕ್ಕೆ ಟೀಂ ಇಂಡಿಯಾ ಜಯ.. title=

IND VS SL  : ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಟಿ20 ಸರಣಿಯ ಮೂರನೇ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. 

ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಜುಲೈ 30 ರಂದು ಮೂರನೇ ಟಿ20 ಪಂದ್ಯ ಪಲ್ಲೆಕೆಲೆಯ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 

ಇದನ್ನು ಓದಿ : ಖಾಲಿ ಹೊಟ್ಟೆಯಲ್ಲಿ ಖರ್ಜುರ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ!! 

ಮಳೆ ಕಾರಣದಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಟಾಸ್ ವಿಳಂಬವಾಗಿತ್ತು 7:40ರ ಸುಮಾರಿಗೆ ಟಾಸ್ ನಡೆದು ಶ್ರೀಲಂಕಾ ತಂಡ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ ಮತ್ತು ಭಾರತ ತಂಡಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದು, ಪಂದ್ಯ 8 ಗಂಟೆಗೆ ಪ್ರಾರಂಭವಾಗಿದ್ದು, ಯಶಸ್ವಿ ಜೈಸ್ವಾನ್ ಹಾಗೂ ಶುಭಮನ್ ಗಿಲ್ ಕಣಕ್ಕಿಳಿದರು.

ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಈ ಪಂದ್ಯ ನಡೆಯುತ್ತಿದೆ ಮತ್ತು ಗೌತಮ್ ಗಂಭೀರ್ ಅವರ ನಿರ್ದೇಶನದಲ್ಲಿ ಭಾರತ ತಂಡ ಈಗಾಗಲೇ ಎರಡು ಪಂದ್ಯದಲ್ಲಿ ಗೆಲುವನ್ನು ಸಾಧಿಸಿದೆ. ಇದೀಗ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕ್ಲೀನ್ ಸ್ವಿಫ್ ಮೂಲಕ ಮೂರು ಪಂದ್ಯಗಳನ್ನು ಗೆದ್ದು ಈ ಸರಣಿ ಗೆಲುವನ್ನ ಸಾಧಿಸುವ ಹುರುಪಿನಲ್ಲಿತ್ತು 

ಭಾರತ ತನ್ನ ಮೊದಲ ವಿಕೆಟ್ ಅನ್ನು ಪ್ರಾರಂಭದಲ್ಲಿಯೇ ಕಳೆದುಕೊಂಡಿತು ಮತ್ತು 137ರನ್ ಗಳಿಗೆ  9 ವಿಕೆಟ್ ಕಳೆದುಕೊಂಡಿತು. , ಭಾರತ ತಂಡ  ಶ್ರೀಲಂಕಾಗೆ 138 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು . ಶ್ರೀಲಂಕಾ ತಂಡದ ಆಟಗಾರರಾದ ಕುಸಾಲ್ ಪೆರಾರ್, ಕುಸಾಲ್ ಮೆಂಡಿಸ್ ಅವರ ಜೋಡಿ ಆಟ ಉತ್ತಮ ಅಂಕವನ್ನು ಸಾಧಿಸಲು ಸಹಕಾರಿಯಾಯಿತು . ಆದರೆ ಕೊನೆಯಲ್ಲಿ . ಶ್ರೀಲಂಕಾ  137ರನ್ ಗಳಿಸಿ ಟೈ ಆಯಿತು. 

ಇದನ್ನು ಓದಿ : ಟೆಲಿಗ್ರಾಮ್‌ನಲ್ಲಿ ಆ ಫೈಲ್ ಕ್ಲಿಕ್ ಮಾಡಬೇಡಿ; ಸೈಬರ್ ಸಂಶೋಧಕರಿಂದ ಎಚ್ಚರಿಕೆ, ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ!!

ಕೊನೆಯಲ್ಲಿ ಸೂಪರ್ ಓವರ್ ಮೂಲಕ ಭಾರತ ಮತ್ತು ಶ್ರೀಲಂಕಾ ಆಡಿ, ಶ್ರೀಲಂಕಾ ೨ರನ್ ನೀಡಿತು, ಅದಕ್ಕೆ ವಿರುದ್ಧವಾಗಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ 4ರನ್ ಬಾರಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News