Ind vs NZ: ಟೀಂ ಇಂಡಿಯಾದ ಬಹು ದೊಡ್ಡ ಅಸ್ತ್ರ ಈ ಆಟಗಾರ, ನ್ಯೂಜಿಲ್ಯಾಂಡ್ ಬೌಲರ್ ಗಳ ಪಾಲಿನ ಸಿಂಹ ಸ್ವಪ್ನ

ಟೀಂ ಇಂಡಿಯಾದ  16 ಸದಸ್ಯರ ತಂಡದಲ್ಲಿ ಶುಭಮನ್ ಗಿಲ್ ಇದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಶುಭಮನ್  ಗಾಯಗೊಂಡಿದ್ದು, ಅಂದಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು.  

Written by - Ranjitha R K | Last Updated : Nov 24, 2021, 11:46 AM IST
  • ಕಾನ್ಪುರದಲ್ಲಿ ನಡೆಯಲಿದೆ ಮೊದಲ ಪಂದ್ಯ
  • ಅಜಿಂಕ್ಯ ರಹಾನೆ ವಹಿಸಲಿದ್ದಾರೆ ತಂಡದ ಸಾರಥ್ಯ
  • ಟೀಂ ಇಂಡಿಯಾದ ಅತಿ ದೊಡ್ಡ ಅಸ್ತ್ರವಾಗಲಿದ್ದಾರೆ ಶುಭಮನ್ ಗಿಲ್
Ind vs NZ: ಟೀಂ ಇಂಡಿಯಾದ ಬಹು ದೊಡ್ಡ ಅಸ್ತ್ರ ಈ ಆಟಗಾರ, ನ್ಯೂಜಿಲ್ಯಾಂಡ್  ಬೌಲರ್ ಗಳ ಪಾಲಿನ ಸಿಂಹ ಸ್ವಪ್ನ  title=
ಕಾನ್ಪುರದಲ್ಲಿ ನಡೆಯಲಿದೆ ಮೊದಲ ಪಂದ್ಯ (file photo)

ನವದೆಹಲಿ : ಟೀಂ ಇಂಡಿಯಾ ನವೆಂಬರ್ 25 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ (IndVsNZ ) ಅನ್ನು ಎದುರಿಸಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿಶ್ರಾಂತಿಯ ಕಾರಣದಿಂದಾಗಿ, ಅಜಿಂಕ್ಯ ರಹಾನೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇದೀಗ ತಂಡದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವಿರುವ ದಾಂಡಿಗ ತಂಡದಲ್ಲಿದ್ದಾರೆ.

ಟೀಂ ಇಂಡಿಯಾದ ಅತಿ ದೊಡ್ಡ ಅಸ್ತ್ರ :  
ಹೌದು, ಟೀಂ ಇಂಡಿಯಾದ (Team India) 16 ಸದಸ್ಯರ ತಂಡದಲ್ಲಿ ಶುಭಮನ್ ಗಿಲ್ ಇದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಶುಭಮನ್ (Shubman Gill) ಗಾಯಗೊಂಡಿದ್ದು, ಅಂದಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು.  ಅವರ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ.  ಮೊಣಕೈ ಗಾಯದಿಂದಾಗಿ ಭಾರತದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಿಲ್ ನ್ಯೂಜಿಲೆಂಡ್ ವಿರುದ್ಧವೂ ಓಪನಿಂಗ್ ಮಾಡಬಹುದು. ಗಿಲ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಜೊತೆಗೆ ಉತ್ತಮ ಫೀಲ್ಡರ್ ಕೂಡಾ ಹೌದು. ನಾಯಕ ಅಜಿಂಕ್ಯ ರಹಾನೆ ಕೂಡಾ ಶುಭಮನ್ ಗಿಲ್ ಅವರಿಂದ ಉತ್ತಮ ಪ್ರದರ್ಶನವನ್ನೇ ಎದುರು ನೋಡುತ್ತಿದ್ದಾರೆ. 

ಇದನ್ನೂ ಓದಿ :  IND vs NZ Test series: ಕೆ.ಎಲ್.ರಾಹುಲ್ ನಿರ್ಗಮನದಿಂದ ಟೀಂ ಇಂಡಿಯಾಕ್ಕೆ ಎದುರಾಗಿದೆ ಸಂಕಷ್ಟ..!

ಶುಭಮನ್ ಗಿಲ್ ಒಬ್ಬ ಉತ್ತಮ ಬ್ಯಾಟ್ಸ್‌ಮನ್ :
ಶುಭಮನ್ ಗಿಲ್ ಕೆಕೆಆರ್ (KKR) ಪರ ಆರಂಭಿಕರಾಗಿ ಹೆಚ್ಚು ರನ್ ಗಳಿಸಿದ್ದಾರೆ. ಐಪಿಎಲ್ 2021 ರಲ್ಲಿ, ಗಿಲ್ ತನ್ನ ಅದ್ಬುತ ಆಟದಿಂದಾಗಿ ಕೆಕೆಆರ್ ಅನ್ನು ಫೈನಲ್‌ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.  ಐಪಿಎಲ್ 2021ರ 17 ಪಂದ್ಯಗಳಲ್ಲಿ ಗಿಲ್ 478 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಪರ ಆಡಿರುವ 8 ಟೆಸ್ಟ್ ಪಂದ್ಯಗಳಲ್ಲಿ ಗಿಲ್ 414 ರನ್ ಗಳಿಸಿದ್ದಾರೆ. ಇನ್ನು ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧ ಉತ್ತಮ ಇನ್ನಿಂಗ್ಸ್ ಆಡುವುದು ಅವಶ್ಯಕವಾಗಿದೆ.   

ಈ ಹೊಸ ಆಟಗಾರರಿಗೆ ಸಿಕ್ಕಿದೆ ಅವಕಾಶ :
ಟೀಂ ಇಂಡಿಯಾದಲ್ಲಿ ಕೆಲ ಹೊಸ ಆಟಗಾರರಿಗೂ ಅವಕಾಶ ನೀಡಲಾಗಿದೆ. ಭಾರತಕ್ಕಾಗಿ ಮೊದಲ ಬಾರಿಗೆ ಟೆಸ್ಟ್ ಆಡುವ ಅನೇಕ ಆಟಗಾರರಿದ್ದಾರೆ. ಇವರಲ್ಲಿ ಯುವ ಬ್ಯಾಟ್ಸ್‌ಮನ್‌ಗಳಾದ ಕೆ.ಎಸ್.ಭರತ್, ಶ್ರೇಯಸ್ ಅಯ್ಯರ್ ಮತ್ತು ಪ್ರಸಿದ್ಧ ಕೃಷ್ಣ ಮುಂತಾದವರು ಸೇರಿದ್ದಾರೆ. ಜಯಂತ್ ಯಾದವ್‌ಗೆ ಸುದೀರ್ಘ ಸಮಯದ ನಂತರ ಮತ್ತೊಮ್ಮೆ ತಂಡದಲ್ಲಿ ಸ್ಥಾನ ನೀಡಲಾಗಿದೆ.   ವಿರಾಟ್ ಕೊಹ್ಲಿ (Virat Kohli) ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ಅಜಿಂಕ್ಯ ರಹಾನೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ವಾಪಸಾಗಲಿದ್ದಾರೆ. 

ಇದನ್ನೂ ಓದಿ :  Harbhajan Singh: ಹರ್ಭಜನ್ ಸಿಂಗ್ ಮುಂಬೈನಲ್ಲಿರುವ ಮನೆ ಮಾರಿ ಎಷ್ಟು ಕೋಟಿ ಗಳಿಸಿದ್ದಾರೆ ಗೊತ್ತಾ!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ :
ಅಜಿಂಕ್ಯ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪನಾಯಕ), ಸೂರ್ಯಕುಮಾರ್ ಯಾದವ್, ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್ ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News