Vijay Deverakonda Birthday : ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್‌ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್‌!! ‌

Vijay Deverakonda: ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ವಿಜಯ್ ದೇವರಕೊಂಡ ಇಂದು ಸೆನ್ಸೇಷನಲ್ ಸ್ಟಾರ್‌.. ಅವರು ಈಗ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ.  

Written by - Savita M B | Last Updated : May 9, 2024, 03:08 PM IST
  • ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿರುವ ನಟ ವಿಜಯ್ ದೇವರಕೊಂಡ.
  • ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ
Vijay Deverakonda Birthday : ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್‌ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್‌!! ‌ title=

Vijay Deverakonda Real Life Story: ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿರುವ ನಟ ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಇವರು ಆಗ್ಗಾಗ್ಗೆ ಯಾವುದೋ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ..  

ವಿಜಯ್ ದೇವರಕೊಂಡ ಸುಮಾರು 13 ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿದ್ದಾರೆ. ಆದರೆ ಆರಂಭದಲ್ಲಿ ಅವರು ಕೇವಲ ಸಣ್ಣ ಪಾತ್ರಗಳಿಗೆ ಸೀಮಿತರಾಗಿದ್ದರು. 2011 ರಲ್ಲಿ, ವಿಜಯ್ ದೇವರಕೊಂಡ ಅವರು 2012ರ ಚಿತ್ರವೊಂದರಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು.. ನಂತರವೂ ಶೇಖರ್ ಕಮ್ಮುಲ ನಿರ್ದೇಶನದ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದಲ್ಲೂ ಬಹಳ ಸಣ್ಣ ಪಾತ್ರವನ್ನು ನಿರ್ವಹಿಸಿದರು. ಆ ಎರಡು ಸಿನಿಮಾಗಳಿಂದ ಅವರಿಗೆ ಮನ್ನಣೆ ಸಿಗಲಿಲ್ಲ. 

ಅದಾದ ನಂತರವೂ ಈ ನಾಯಕನಿಗೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಅವಕಾಶಗಳು ಬಂದವು.. ಮೇನ್ ಹೀರೋ ಆಗಿ ಯಾವ ಅವಕಾಶಗಳು ಸಿಗಲಿಲ್ಲ. ಆದರೂ ಛಲ ಬಿಡದ ನಾಯಕನಂತೆ ಸಿನಿಮಾ ಅವಕಾಶಗಳಿಗಾಗಿ ಕಷ್ಟಪಟ್ಟು ಕರಿಯರ್ ಮುಂದುವರಿಸಿದ ನಾಯಕ ವಿಜಯ್..‌ 

ಇದನ್ನೂ ಓದಿ-ಮಾನ್ಸೂನ್ ವೇಳೆಗೆ "ಭಗೀರಥ"ನ ಆಗಮನ.. ಕುತೂಹಲ ಮೂಡಿಸಿದೆ ವಿಭಿನ್ನ ಕಥಾಹಂದರ ಹೊಂದಿರುವ ಟೀಸರ್!

2015 ರಲ್ಲಿ ಬಿಡುಗಡೆಯಾದ ಎವಡೆ ಸುಬ್ರಹ್ಮಣ್ಯಂ ಚಿತ್ರದ ಮೂಲಕ ವಿಜಯ್ ದೇವರಕೊಂಡ ಸ್ವಲ್ಪ ಖ್ಯಾತಿಯನ್ನು ಪಡೆದರು. ನಾನಿ ಹೀರೋ ಆಗಿದ್ದ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಸಿನಿಮಾದಲ್ಲಿ ಆ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯಿಂದಾಗಿ ವಿಜಯ್ ದೇವರಕೊಂಡಗೂ ಒಳ್ಳೆ ಹೆಸರು ಬಂತು. 

ಇದನ್ನೂ ಓದಿ-Tanisha Kuppanda : ನಾಯಿ ಜೊತೆ ಫೋಟೋ ತೆಗೆಸಿದ ನಟಿ, ಡಾಗ್ ಲವರ್ ಎಂದ ನೆಟ್ಟಿಗರು

ನಂತರ 2016 ರಲ್ಲಿ, ಅವರು ಪೆಲ್ಲಿ ಚೋಪುಲು ಚಿತ್ರದ ಮೂಲಕ ನಾಯಕರಾದರು. ತರುಣ್ ಭಾಸ್ಕರ್ ನಿರ್ದೇಶನದ ಈ ಚಿತ್ರ ವಿಜಯ್ ದೇವರಕೊಂಡಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿದ್ದಲ್ಲದೆ ಹೆಚ್ಚಿನ ಅವಕಾಶಗಳನ್ನು ತಂದುಕೊಟ್ಟಿತು. 2017 ರಲ್ಲಿ ಬಿಡುಗಡೆಯಾದ ಅರ್ಜುನ್ ರೆಡ್ಡಿ ಚಿತ್ರದೊಂದಿಗೆ ವಿಜಯ್ ದೇವರಕೊಂಡ ಅವರ ವೃತ್ತಿಜೀವನವು ದೊಡ್ಡ ತಿರುವಿನೊಂದಿಗೆ ಬದಲಾಯಿತು. 

ಹಲವು ವಿವಾದಗಳ ನಡುವೆ ತೆರೆಕಂಡ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ವಿಜಯ್ ದೇವರಕೊಂಡ ಅವರ ರೇಂಜ್ ಅನ್ನು ಭರ್ಜರಿಯಾಗಿ ಹೆಚ್ಚಿಸಿತು.. ಈ ಚಿತ್ರದ ನಂತರ ವಿಜಯ್ ದೇವರಕೊಂಡ ಅವರಿಗೆ ರೌಡಿ ಬಾಯ್ ಟ್ಯಾಗ್ ಸಿಕ್ಕಿತ್ತು. ಅಂದಿನಿಂದ ಟಾಲಿವುಡ್‌ನಲ್ಲಿ ವಿಜಯ್ ದೇವರಕೊಂಡ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅರ್ಜುನ್ ರೆಡ್ಡಿ ಚಿತ್ರದ ನಂತರ ಮಹಾನಟಿ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೆ ಗೀತಾಗೋವಿಂದಂ ಚಿತ್ರದ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಗಳಿಸಿದರು. 

ಇಷ್ಟು ಸಿನಿಮಾಗಳು ಫ್ಲಾಪ್ ಆಗಿದ್ದರೂ ವಿಜಯ್ ದೇವರಕೊಂಡ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಖುಷಿ ಚಿತ್ರದ ಮೂಲಕ ವಿಜಯ್ ದೇವರಕೊಂಡ ಮತ್ತೊಂದು ಹಿಟ್ ಪಡೆದರು. ಕಷ್ಟಪಟ್ಟರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ವಿಜಯ್ ದೇವರಕೊಂಡ ಅತ್ಯುತ್ತಮ ಉದಾಹರಣೆ ಎಂದೇ ಹೇಳಬಹುದು. ಯಾವುದೇ ಹಿನ್ನೆಲೆಯಿಲ್ಲದೆ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ವಿಜಯ್ ಈಗ ತನಗೊಂದು ವಿಶಿಷ್ಟವಾದ ಐಡೆಂಟಿಟಿ ಮೂಡಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News