Rama Ekadashi 2023: ರಾಮ ಏಕಾದಶಿಯಂದು ಈ ಕೆಲಸ ಮಾಡಿದ್ರೆ ಉದ್ಯೋಗದಲ್ಲಿ ಬಡ್ತಿ & ಧನಲಾಭ!

ರಾಮ ಏಕಾದಶಿ 2023: ಏಕಾದಶಿ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಪ್ರತಿ ತಿಂಗಳ ಎರಡೂ ಹದಿನೈದು ದಿನಗಳ ಏಕಾದಶಿಯಂದು ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕವನ್ನು ರಾಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿಯ ರಾಮ ಏಕಾದಶಿ ನವೆಂಬರ್ 9ರಂದು ಬರುತ್ತದೆ.

Written by - Puttaraj K Alur | Last Updated : Nov 8, 2023, 12:36 PM IST
  • ಏಕಾದಶಿ ಉಪವಾಸಕ್ಕೆ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ
  • ಏಕಾದಶಿಯ ಉಪವಾಸವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ
  • ಈ ದಿನ ಕೈಗೊಳ್ಳುವ ಕೆಲವು ಕ್ರಮಗಳು ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ
Rama Ekadashi 2023: ರಾಮ ಏಕಾದಶಿಯಂದು ಈ ಕೆಲಸ ಮಾಡಿದ್ರೆ ಉದ್ಯೋಗದಲ್ಲಿ ಬಡ್ತಿ & ಧನಲಾಭ! title=
ರಾಮ ಏಕಾದಶಿ 2023

ನವದೆಹಲಿ: ಏಕಾದಶಿ ಉಪವಾಸಕ್ಕೆ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ವಿಶೇಷ ಮಹತ್ವವಿದೆ. ಏಕಾದಶಿಯ ಉಪವಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಶ್ರೀ ಹರಿಗೆ ಸಮರ್ಪಿತವಾದ ಏಕಾದಶಿ ಉಪವಾಸವನ್ನು ಪ್ರತಿ ತಿಂಗಳು ಎರಡೂ ಪಕ್ಷಗಳ ಏಕಾದಶಿ ದಿನಾಂಕದಂದು ಆಚರಿಸಲಾಗುತ್ತದೆ. ಈ ಬಾರಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿ ನವೆಂಬರ್ 9ರಂದು ಬರುತ್ತದೆ. ಇದನ್ನು ರಾಮ ಏಕಾದಶಿ ಎಂದು ಕರೆಯಲಾಗುತ್ತದೆ.

ಅಷ್ಟೇ ಅಲ್ಲ ರಾಮ ಏಕಾದಶಿಯ ದಿನದಂದು ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿ ಜೊತೆಗೆ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನದಂದು ಕೈಗೊಳ್ಳುವ ಹಲವಾರು ಕ್ರಮಗಳು ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ: ಯೂರಿಕ್ ಆಸಿಡ್ ನಿಯಂತ್ರಿಸಿ ಕೀಲು, ಸಂಧಿ ನೋವಿಗೆ ಸಂಪೂರ್ಣ ಪರಿಹಾರ ನೀಡುತ್ತದೆ ಈ ಐದು ಹಣ್ಣುಗಳು

ರಾಮ ಏಕಾದಶಿಯ ದಿನದಂದು ಈ ಕೆಲಸ ಮಾಡಿ

ವೈವಾಹಿಕ ಜೀವನದಲ್ಲಿ ಸಂತೋಷಕ್ಕೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಮ ಏಕಾದಶಿಯ ದಿನದಂದು ಮಾಡುವ ಈ ಕ್ರಮಗಳು ವೈವಾಹಿಕ ಜೀವನದಲ್ಲಿ ಸಂತೋಷವನ್ನು ನೀಡುತ್ತದೆ. ಈ ದಿನ ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿ ಇಡಬೇಕು. ನಂತರ ಆ ಎಲೆಗಳನ್ನು ಮೊದಲ ಶುಕ್ರವಾರದಂದು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಗೆ ಅರ್ಪಿಸಬೇಕು. ಇದು ನಿಮ್ಮ ಜೀವನದಿಂದ ವೈವಾಹಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಹಣ ಗಳಿಸಲು ಈ ಕ್ರಮ ಮಾಡಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಮ ಏಕಾದಶಿಯ ದಿನದಂದು ತುಳಸಿ ಎಲೆಗಳನ್ನು ನಿಮ್ಮ ಪರ್ಸ್ ಅಥವಾ ಮನೆಯಲ್ಲಿ ಸುರಕ್ಷಿತವಾಗಿರಿಸಿಕೊಳ್ಳಿ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲ ಈ ದಿನದಂದು ತುಳಸಿಯ ಈ ಪರಿಹಾರವು ತಾಯಿ ಲಕ್ಷ್ಮಿದೇವಿಯನ್ನು ಮೆಚ್ಚಿಸುತ್ತದೆ ಮತ್ತು ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ. ವ್ಯಕ್ತಿಗೆ ಸಾಲದಿಂದ ಮುಕ್ತಿ ಸಿಗುತ್ತದೆ ಮತ್ತು ವಿವಿಧ ಮೂಲಗಳಿಂದ ಹಣ ಬರುತ್ತದೆ.

ಇದನ್ನೂ ಓದಿ: 2024ರ ವರ್ಷಾರಂಭದಲ್ಲಿ ಲಕ್ಷಾಧಿಪತಿ ಯೋಗ: ಈ ರಾಶಿಯವರ ಕೈಹಿಡಿಯುವಳು ಅದೃಷ್ಟಲಕ್ಷ್ಮೀ- ಮುಂದಿನ 18 ತಿಂಗಳು ಸಂಪತ್ತಿನ ಸುರಿಮಳೆ

ಬಡ್ತಿ ಪಡೆಯಲು: ನೀವು ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಯಸಿದರೆ, ರಾಮ ಏಕಾದಶಿಯ ದಿನದಂದು ಒಂದು ನಾಣ್ಯವನ್ನು ಪೂಜಿಸಬೇಕು. ನಂತರ ಅದರ ಮೇಲೆ ಕುಂಕುಮ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. ಇದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಮತ್ತು ನಿಮ್ಮ ಕಚೇರಿಯ ಡ್ರಾಯರ್‌ನಲ್ಲಿ ಇರಿಸಬೇಕು. ಇದು ನಿಮ್ಮ ಕೆಲಸದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಬಡ್ತಿ ಪಡೆಯುವ ಸಾಧ್ಯತೆಗಳು ವೇಗವಾಗಿ ಹೆಚ್ಚಾಗುತ್ತವೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News