ರಾಜಭಂಗ ಯೋಗದ ಮೂಲಕ ಬೆಳಗುವುದು ಈ ರಾಶಿಯವರ ಭಾಗ್ಯ! ಉಕ್ಕಿ ಬರುವುದು ಧನ ಸಂಪತ್ತು

ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ರಾಜಭಂಗ ಯೋಗ ನಿರ್ಮಾಣವಾಗುತ್ತದೆ.  3 ರಾಶಿಯವರು ಮಾತ್ರ ಈ ಸಮಯದಲ್ಲಿ ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ. 

Written by - Ranjitha R K | Last Updated : Aug 2, 2023, 03:47 PM IST
  • ಜುಲೈ 16, ರಂದು ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ
  • ಆಗಸ್ಟ್ 7, ರಂದು, ಶುಕ್ರ ಕೂಡಾ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಕರ್ಕಾಟಕದಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗವಿರುತ್ತದೆ.
ರಾಜಭಂಗ ಯೋಗದ ಮೂಲಕ ಬೆಳಗುವುದು ಈ ರಾಶಿಯವರ ಭಾಗ್ಯ! ಉಕ್ಕಿ ಬರುವುದು ಧನ ಸಂಪತ್ತು  title=

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜುಲೈ 16, ರಂದು ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 7, ರಂದು, ಶುಕ್ರ ಕೂಡಾ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗೆ ಕರ್ಕಾಟಕ ರಾಶಿ ಪ್ರವೆಶೀಸಿದ ಶುಕ್ರ  ಅಕ್ಟೋಬರ್ 2 ರವರೆಗೆ ಇದೇ  ರಾಶಿಯಲ್ಲಿ ಇರಲಿದ್ದಾನೆ. ಈ ಕಾರಣದಿಂದಾಗಿ ಕರ್ಕಾಟಕದಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗವಿರುತ್ತದೆ. ಸೂರ್ಯ ಮತ್ತು ಶುಕ್ರನ ಸಂಯೋಗದಿಂದ ರಾಜಭಂಗ ಯೋಗ ನಿರ್ಮಾಣವಾಗುತ್ತದೆ.  ಈ ಯೋಗದ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಕಾಣಿಸುತ್ತದೆ. ಆದರೆ 3 ರಾಶಿಯವರು ಮಾತ್ರ ಈ ಸಮಯದಲ್ಲಿ ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ. 

ರಾಜಭಂಗ ಯೋಗವು ಈ ರಾಶಿಯವರ ಅದೃಷ್ಟ ಬೆಳಗುತ್ತದೆ : 
ಮೇಷ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಜನೆಯು ಮೇಷ ರಾಶಿಯವರಿಗೆ ಎಲ್ಲಾ ವಿಷಯಗಳಲ್ಲಿ ಲಾಭವನ್ನು ನೀಡುತ್ತದೆ. ಈ ಜನರ ಜೀವನದಲ್ಲಿ ಭೌತಿಕ ಸಂತೋಷ ಹೆಚ್ಚಾಗುತ್ತದೆ. ಜೊತೆಗೆ ಆದಾಯವೂ ಹೆಚ್ಚುತ್ತದೆ.  ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿಯಲ್ಲಿ ಪ್ರಗತಿ ಹೊಂದಲು ಉತ್ತಮ ಅವಕಾಶಗಳು ಎದುರಾಗುತ್ತದೆ. ಹೊಸ ಉದ್ಯೋಗ ಪ್ರಸ್ತಾಪ ಬರಬಹುದು. ವಾಹನ-ಆಸ್ತಿ ಖರೀದಿಸುವ ಯೋಗವಿದೆ. 

ಇದನ್ನೂ ಓದಿ : 50 ವರ್ಷಗಳ ನಂತರ ಒಟ್ಟಿಗೆ ಸೇರುತ್ತಿದೆ ಮೂರು ಗ್ರಹಗಳು ! ಮೂರು ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ

ಕರ್ಕಾಟಕ ರಾಶಿ : ಈ ಯೋಗವು ಕರ್ಕಾಟಕ ರಾಶಿಯವರಿಗೆ ಮಂಗಳಕರವಾಗಿರಲಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಲಾಭ ಇರುತ್ತದೆ. ಪ್ರತಿಷ್ಠೆ ಮತ್ತು ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಅಧಿಕಾರಿಗಳೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 

ತುಲಾ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಂಡ ರಾಜಭಂಗ ರಾಜಯೋಗವು ತುಲಾ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರಿಗೆ ಇದರಿಂದ ಬಹಳಷ್ಟು ಲಾಭವಾಗಲಿದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಉನ್ನತ ಸ್ಥಾನ, ದೊಡ್ಡ ಮಟ್ಟದ ಇನ್ಕ್ರಿಮೆಂಟ್ ದೊರೆಯಬಹುದು. ಇದ್ದಕ್ಕಿದ್ದಂತೆ ಒಲಿದು ಬರುವ ಧನಲಕ್ಷ್ಮಿಯಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು. 

ಇದನ್ನೂ ಓದಿ : ಮೂರು ರಾಶಿಗಳಲ್ಲಿ ಅಪರೂಪದ ರಾಜಯೋಗ! ಧನ ಧಾನ್ಯ ಹರಿಸುವಳು ಧನ ಲಕ್ಷ್ಮೀ, ಸಿರಿ ಸಂಪತ್ತಿಗೆ ಕೊರತೆಯಾಗದಂತೆ ಕಾಯುವಳು ಮಹಾಲಕ್ಷ್ಮೀ

(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News