ಇಂದಿನಿಂದ ಭಾರತದಲ್ಲಿ ಆಫ್ಘನ್ ರಾಯಭಾರ ಕಚೇರಿ ಬಂದ್! ಕಾರಣ…

Afghan embassy Closed in India: ರಾಯಭಾರ ಕಚೇರಿಯು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗದಿರುವ ಕೆಲವು ಅಂಶಗಳನ್ನು ಪಟ್ಟಿ ಮಾಡಿದೆ ಮತ್ತು ಈ ದುರದೃಷ್ಟಕರ ನಿರ್ಧಾರಕ್ಕೆ ಇವು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.

Written by - Bhavishya Shetty | Last Updated : Oct 1, 2023, 01:39 PM IST
    • ಭಾರತದಲ್ಲಿನ ಆಫ್ಘನ್ ರಾಯಭಾರ ಕಚೇರಿ ಅಕ್ಟೋಬರ್ 1 ರಿಂದ ಬಂದ್
    • ಆತಿಥೇಯ ದೇಶದಿಂದ ಪ್ರಮುಖ ಬೆಂಬಲದ ಕೊರತೆಯಿದೆ ಎಂದು ಆರೋಪ
    • ಭಾರತ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ
ಇಂದಿನಿಂದ ಭಾರತದಲ್ಲಿ ಆಫ್ಘನ್ ರಾಯಭಾರ ಕಚೇರಿ ಬಂದ್! ಕಾರಣ… title=
Afghan Embassy

Afghan embassy Closed in India News: ಆತಿಥೇಯ ದೇಶದಿಂದ ತನಗೆ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿ, ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯನ್ನು ಅಕ್ಟೋಬರ್ 1 ರಿಂದ ಬಂದ್ ಮಾಡುವುದಾಗಿ ಶನಿವಾರ ರಾತ್ರಿ ಘೋಷಿಸಿದೆ. ಈ ನಿರ್ಧಾರವನ್ನು ಪ್ರಕಟಿಸಿದ್ದಕ್ಕಾಗಿ ವಿಷಾದಿಸುವುದಾಗಿ ಅಫ್ಘಾನ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: 12 ವರ್ಷಗಳ ಬಳಿಕ ವಿಶ್ವಕಪ್’ಗೆ ಎಂಟ್ರಿ ಪಡೆಯಿತು ಈ ತಂಡ!

ತನ್ನ ಹೇಳಿಕೆಯಲ್ಲಿ, ರಾಯಭಾರ ಕಚೇರಿಯು ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗದಿರುವ ಕೆಲವು ಅಂಶಗಳನ್ನು ಪಟ್ಟಿ ಮಾಡಿದೆ ಮತ್ತು ಈ ದುರದೃಷ್ಟಕರ ನಿರ್ಧಾರಕ್ಕೆ ಇವು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.

ಆತಿಥೇಯ ದೇಶದಿಂದ ಪ್ರಮುಖ ಬೆಂಬಲದ ಕೊರತೆಯಿದೆ ಎಂದು ಆರೋಪಿಸಿ ಹೇಳಿಕೆಯನ್ನು ನೀಡಿದೆ. ಇದರಿಂದಾಗಿ ತನ್ನ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಅಫ್ಘಾನಿಸ್ತಾನದ ಹಿತಾಸಕ್ತಿಗಳನ್ನು ಈಡೇರಿಸುವ ನಿರೀಕ್ಷೆಗಳನ್ನು ಈಡೇರಿಸಿಲ್ಲ ಎಂದು ರಾಯಭಾರ ಕಚೇರಿ ಹೇಳಿದೆ.

ಭಾರತ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ ಎಂದು ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿಯಲ್ಲಿನ ತನ್ನ ರಾಯಭಾರಿ ಕಚೇರಿಯ ಕಾರ್ಯಾಚರಣೆಯನ್ನು ಮುಚ್ಚುವ ನಿರ್ಧಾರದ ಬಗ್ಗೆ ಕೆಲವು ಸಮಯದ ಹಿಂದೆ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿರುವುದಾಗಿ ರಾಯಭಾರ ಕಚೇರಿ ತಿಳಿಸಿದೆ. ಭಾರತದಲ್ಲಿ ವಾಸಿಸುವ, ಕೆಲಸ ಮಾಡುವ, ಅಧ್ಯಯನ ಮಾಡುವ, ವ್ಯಾಪಾರ ಮಾಡುವ ಮತ್ತು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಆಫ್ಘನ್ನರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಅದು ಹೇಳಿದೆ.

ಇದನ್ನೂ ಓದಿ: 10 ವರ್ಷಗಳ ಬಳಿಕ ಮಹಾಭಾಗ್ಯ ಯೋಗ: ಈ ರಾಶಿಗೆ ಶ್ರೀಮಂತಿಕೆ ಜೊತೆ ಸಂಪತ್ತಿನ ಮಳೆ, ಕನಸೆಲ್ಲಾ ನನಸಾಗುವ ಕಾಲ

ಈ ಸೇವೆಗಳು ಮುಂದುವರಿಯಲಿವೆ…

ರಾಜತಾಂತ್ರಿಕರ ವೀಸಾಗಳನ್ನು ನಿಗದಿತ ಸಮಯಕ್ಕೆ ನವೀಕರಿಸಲಾಗಿಲ್ಲ ಎಂದು ಹೇಳಲಾಗಿದ್ದು, ಇದರಿಂದಾಗಿ ನಿರಾಸೆ ಉಂಟಾಗಿದೆ. ರಾಯಭಾರ ಕಚೇರಿಯನ್ನು ಆತಿಥೇಯ ದೇಶಕ್ಕೆ ವರ್ಗಾಯಿಸುವವರೆಗೆ ಅಫ್ಘಾನ್ ನಾಗರಿಕರಿಗೆ ತುರ್ತು ಕಾನ್ಸುಲರ್ ಸೇವೆಗಳು ಮುಂದುವರಿಯುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News