Palmistry: ಅಂಗೈಯಲ್ಲಿರುವ ಈ ಚಿಹ್ನೆ ಅಪಾರ ಧನಪ್ರಾಪ್ತಿಯ ಸಂಕೇತ ನೀಡುತ್ತದೆ, ನಿಮ್ಮ ಕೈಯಲ್ಲೂ ಇದೆಯಾ?

Hasta Samudrika - ಕೈಗಳಲ್ಲಿನ ರೇಖೆಗಳು ಓರ್ವ ವ್ಯಕ್ತಿಯ ಭಾಗ್ಯ ಯಾವಾಗ ಬದಲಾಗಲಿದೆ ಹಾಗೂ ಆತ ಯಾವಾಗ ಧನಿಕನಾಗುತ್ತಾನೆ ಎಂಬುದನ್ನು ಹೇಳುತ್ತವೆ. ಅಂಗೈಯಲ್ಲಿನ ಮೂರು ರೇಖೆಗಳು ಕೂಡಿ 'M' ಆಕೃತಿ ನಿರ್ಮಾಣಗೊಂಡರೆ, ಆ ವ್ಯಕ್ತಿ ವೈಭವೋಪೇತ ಜೀವನ ಬದುಕುತ್ತಾನೆ ಎನ್ನಲಾಗುತ್ತದೆ.

Written by - Nitin Tabib | Last Updated : Aug 31, 2021, 11:46 AM IST
  • ಕೈಯಲ್ಲಿ M ಆಕೃತಿ ನಿರ್ಮಾಣಗೊಂಡರೆ ಅದು ತುಂಬಾ ಶುಭ
  • ಈ ಜನರಿಗೆ ಅಪಾರ ಧನ-ಸಂಪತ್ತು ಲಭಿಸುತ್ತದೆ.
  • ವಿವಾಹದ ಬಳಿಕ ಭಾಗ್ಯ ಬೆಳಗುತ್ತದೆ.
Palmistry: ಅಂಗೈಯಲ್ಲಿರುವ ಈ ಚಿಹ್ನೆ ಅಪಾರ ಧನಪ್ರಾಪ್ತಿಯ ಸಂಕೇತ ನೀಡುತ್ತದೆ, ನಿಮ್ಮ ಕೈಯಲ್ಲೂ ಇದೆಯಾ? title=
Hasta Rekha Shastra (File Photo)

ನವದೆಹಲಿ:  Hasta Rekha Shastra - ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಕಠಿಣ ಪರಿಶ್ರಮ, ಬುದ್ಧಿವಂತಿಕೆಯ ಜೊತೆಗೆ ಅದೃಷ್ಟವೂ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಜ್ಯೋತಿಷ್ಯಶಾಸ್ತ್ರದಂತೆ ಹಸ್ತ ರೇಖೆಗಳು (Hastrekha) ಕೂಡ ಭವಿಷ್ಯ ಹೇಳುತ್ತವೆ. ಜೀವನದಲ್ಲಿ ಹಣ ಎಷ್ಟೊಂದು ಮಹತ್ವದ್ದಾಗಿದೆ ಈ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನಮ್ಮ ಜೀವನದಲ್ಲಿ ಹಣ ಇದೆಯೋ ಇಲ್ಲವೋ ಎಂಬ ಉತ್ಸುಕತೆ ಎಲ್ಲರಿಗೂ ಇದ್ದೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ತಾವು ಎಷ್ಟು ಅದೃಷ್ಟಶಾಲಿಗಳಾಗಿದ್ದೇವೆ ಎಂಬುದನ್ನು ಎಲ್ಲರೂ ತಿಳಿಯಲು ಬಯಸುತ್ತಾರೆ. ಅಂಗೈಯಲ್ಲಿನ ರೇಖೆಗಳನ್ನು ಕಂಡು ಈ ಕುರಿತು ನೀವು ತಿಳಿಯಬಹುದು. ಇದಕ್ಕಾಗಿ ನೀವು ಕೆಲಸ ಮಾಡುವ ಕೈಯಲ್ಲಿರುವ ರೇಖೆಗಳನ್ನು ನೋಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲರು ಕೆಲಸಕ್ಕಾಗಿ ತಮ್ಮ ಬಲಗೈಯನ್ನು ಬಳಸುತ್ತಾರೆ. ಆದರೆ ಕೆಲವರು ತಮ್ಮ ಎಡಗೈಯನ್ನೂ ಕೂಡ ಬಳಸುತ್ತಾರೆ.

ಅಂಗೈಯ ಈ ಭಾಗದಲ್ಲಿರುತ್ತದೆ ಧನರೇಖೆ
>> ಒಂದು ವೇಳೆ ಕೈಯಲ್ಲಿರುವ ಮಸ್ತಿಷ್ಕ ರೇಖೆ, ಜೀವನ ರೇಖೆ ಹಾಗೂ ಭಾಗ್ಯರೇಖೆಗಳು ಒಂದುಗೂಡಿ 'M' ಆಕೃತಿಯನ್ನು (M Sign In Hand) ನಿರ್ಮಿಸಿದರೆ, ಇಂತಹ ಜನರ ಜೀವನದಲ್ಲಿ ಅಪಾರ ಧನ-ಸಂಪತ್ತು ಇರುತ್ತದೆ. ಆದರೆ, ಅವರ ಆರ್ಥಿಕ ಸ್ಥಿತಿಯಲ್ಲಿ ಈ ದೊಡ್ಡ ಬದಲಾವಣೆ ಮದುವೆಯ ಬಳಿಕ ಅದೂ ಕೂಡ ಕನಿಷ್ಠ ಅಂದರೆ, 30 ವರ್ಷದ ಬಳಿಕ ಬರುತ್ತದೆ.

ಇದನ್ನೂ ಓದಿ- Benefits Of Green Leaves: ಆರೋಗ್ಯಕ್ಕೆ ವರದಾನವಾಗಿದೆ ಮೆಂತ್ಯೆ, ಪಾಲಕ್ ಸೇರಿದಂತೆ ಈ 5 ಸೊಪ್ಪುಗಳು

>> ಕೆಲವು ಜಾತಕದ ಜನರಲ್ಲಿ ಹಣ ಹಲವು ಮೂಲಗಳಿಂದ ಬರುತ್ತದೆ. ಅಂಗೈಯಲ್ಲಿ ಮಸ್ತಿಷ್ಕ ರೇಖೆ, ಜೀವನ ರೇಖೆ ಹಾಗೂ ಹೃದಯ ರೇಖೆ ಒಂದುಗೂಡಿ ತ್ರಿಕೊನಾಕೃತಿ ನಿರ್ಮಾಣಗೊಂಡ ಬಹುತೇಕ ಜನರಲ್ಲಿ ಇದು ಸಾಧ್ಯ.

>> ಯಾರ ಕೈಯಲ್ಲಿ ಗುರು ಪರ್ವತದಿಂದ ತೋರುಬೆರಳಿನ ಕೆಳಗೆ ಒಂದು ಗೆರೆ ಹೊರಬರುತ್ತದೆಯೋ ಮತ್ತು ಹೆಬ್ಬೆರಳಿಗೆ ಹೋಗುತ್ತದೆ (Dhan Rekha), ಅಂತಹ ಜನರು ತುಂಬಾ ಬುದ್ಧಿವಂತರು ಮತ್ತು ತಮ್ಮ ಬುದ್ಧಿಯಿಂದ ಹಣವನ್ನು ಗಳಿಸುತ್ತಾರೆ.

ಇದನ್ನೂ ಓದಿ-Benefits Of Curd: ಈ ಪದಾರ್ಥಗಳೊಂದಿಗೆ ಮೊಸರನ್ನು ಸೇವಿಸಿ, ಹಲವು ರೋಗಗಳಿಂದ ದೂರವಿರಿ

>> ಒಂದು ವೇಳೆ ಯಾವುದೇ ಓರ್ವ ವ್ಯಕ್ತಿಯ ಕೈಯಲ್ಲಿನ ರೇಖೆ ಸೂರ್ಯ ಪರ್ವತದಿಂದ ಹೊರಬಂದು, ಭಾಗ್ಯ ರೇಖೆಯನ್ನು ಸ್ಪರ್ಶಿಸಿದರೆ, ಅಂತಹ ವ್ಯಕ್ತಿಗಳು ಸಿರಿವಂತರಾಗುವುದರ ಜೊತೆಗೆ ಸಮಾಜದಲ್ಲಿ ವರ್ಚಸ್ಸನ್ನು ಹೊಂದಿರುತ್ತಾರೆ.

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯಾನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Shukra Rashi Parivartan: ಈ ರಾಶಿಯವರಿಗೆ ಅದೃಷ್ಟ ಹೊತ್ತು ತರಲಿದೆ ಶುಕ್ರನ ರಾಶಿ ಪರಿವರ್ತನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News