ಊಟದ ವೇಳೆ ಮಾಡುವ ಈ ತಪ್ಪು ಮೃತ್ಯುವಿಗೆ ಆಮಂತ್ರಣ ನೀಡಿದಂತೆ

ಊಟ ತಿಂಡಿ ಸಮಯದಲ್ಲಿ ಕೆಲವರು ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಹೀಗೆ ಊಟದ ವೇಳೆ ಮಾಡುವ ತಪ್ಪು, ಹಲವು ರೋಗಗಳಿಗೆ ಕಾರಣವಾಗುತ್ತದೆ. 

Written by - Zee Kannada News Desk | Last Updated : Feb 17, 2022, 11:09 AM IST
  • ಊಟಕ್ಕೆ ಕುಳಿತುಕೊಳ್ಳುವಾಗ ಈ ವಿಚಾರವನ್ನು ನೆನಪಿನಲ್ಲಿಡಿ
  • ಸರಿಯಾದ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸಬೇಡಿ
  • ಊಟ ಸೇವಿಸುವಾಗ ಮಾಡುವ ಈ ತಪ್ಪಿನಿಂದ ಎದುರಾಗುತ್ತದೆ ಸಮಸ್ಯೆ
ಊಟದ ವೇಳೆ ಮಾಡುವ ಈ ತಪ್ಪು ಮೃತ್ಯುವಿಗೆ ಆಮಂತ್ರಣ ನೀಡಿದಂತೆ  title=
ಊಟಕ್ಕೆ ಕುಳಿತುಕೊಳ್ಳುವಾಗ ಈ ವಿಚಾರವನ್ನು ನೆನಪಿನಲ್ಲಿಡಿ (file photo)

ನವದೆಹಲಿ : ಜೀವನಕ್ಕೆ ಆಹಾರ ಬಹಳ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ತಿನ್ನುತ್ತಾನೆ. ಆದರೆ, ಊಟ ತಿಂಡಿ ಸಮಯದಲ್ಲಿ ಕೆಲವರು ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಹೀಗೆ ಊಟದ ವೇಳೆ ಮಾಡುವ ತಪ್ಪು, ಹಲವು ರೋಗಗಳಿಗೆ ಕಾರಣವಾಗುತ್ತದೆ.  ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸದಿರುವುದು ಇದರ ಹಿಂದಿನ ದೊಡ್ಡ ಕಾರಣವಾಗಿದೆ. ಆದರೆ ಇದರ ಹೊರತಾಗಿ, ವಾಸ್ತು ಶಾಸ್ತ್ರದಲ್ಲಿ (Vastu Shastra) ಸಾವಿಗೆ ಕಾರಣವಾಗುವ ಕೆಲವು ವಿಷಯಗಳನ್ನು ಹೇಳಲಾಗಿದೆ.   

ಈ ತಪ್ಪು ಸಾವಿಗೆ ಆಹ್ವಾನ ನೀಡಿದಂತೆ :  
ವಾಸ್ತು ಶಾಸ್ತ್ರದಲ್ಲಿ (Vastu Shastra) ಮನೆ-ಕಚೇರಿ, ಕಾರ್ಖಾನೆ, ಉದ್ಯಾನವನದಂತಹ ಪ್ರತಿಯೊಂದು ನಿರ್ಮಾಣ ಕಾರ್ಯಕ್ಕೂ ಸರಿಯಾದ ದಿಕ್ಕುಗಳು ಮತ್ತು ನಿಯಮಗಳನ್ನು ನೀಡಲಾಗಿದೆ (Vastu tips for eating). ಇದಲ್ಲದೆ, ನಮ್ಮ ದೈನಂದಿನ ಕೆಲಸಕ್ಕೆ ಅಗತ್ಯವಾದ ನಿಯಮಗಳನ್ನು ಸಹ ಇಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಆಹಾರ ಶೇಖರಣೆಯಿಂದ ಹಿಡಿದು ಅಡುಗೆ ಮಾಡಿ ತಿನ್ನುವವರೆಗೆ ಎಲ್ಲದ್ದಕ್ಕೂ ನೀತಿ ನಿಯಮಗಳನ್ನು ಹೇಳಲಾಗಿದೆ. ಅವುಗಳನ್ನು ನಿರ್ಲಕ್ಷಿಸುವುದು ಎಂದರೆ ಜೀವನದಲ್ಲಿ ಅನೇಕ ದೊಡ್ಡ ಸಮಸ್ಯೆಗಳನ್ನು  ಬರಮಾಡಿಕೊಳ್ಳುವುದು ಎಂದೇ ಅರ್ಥ (Kitchen vastu tips).  

ಇದನ್ನೂ ಓದಿ : ಸದಾ ಬಂಗಾರ ಧರಿಸುವುದು ಈ ನಾಲ್ಕು ರಾಶಿಯವರಿಗೆ ಅದೃಷ್ಟವಂತೆ ..!

ವಾಸ್ತು ಶಾಸ್ತ್ರದ (Vastu shastra) ಪ್ರಕಾರ ಯಾವಾಗಲೂ ಪೂರ್ವ ಅಥವಾ ಈಶಾನ್ಯಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ಇದರಿಂದ ವ್ಯಕ್ತಿಯ ವಯಸ್ಸು ಹೆಚ್ಚುತ್ತದೆ, ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ. ಅವರ ಆರೋಗ್ಯ ಚೆನ್ನಾಗಿಯೇ ಇದೆ. 

ಇನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು, ಆಹಾರವನ್ನು ತಿನ್ನುವುದು ಎಂದರೆ ನಿಮ್ಮ ಕೈಯ್ಯಾರ ನಿಮ್ಮ ಆಯುಷ್ಯವನ್ನು ಕಡಿಮೆ ಮಾಡಿದಂತೆ. ದಕ್ಷಿಣ ದಿಕ್ಕು ಯಮರಾಜನ ದಿಕ್ಕು ಎಂದು ಹೇಳಲಾಗುತ್ತದೆ.  ಆದ್ದರಿಂದ ಈ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. 

ಇದನ್ನೂ ಓದಿ :   Magha Purnima: ಮಾಘ ಪೂರ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದ ಎಲ್ಲಾ ಕಷ್ಟ ದೂರವಾಗುತ್ತೆ

ಕೆಲಸ ಅಥವಾ ವ್ಯಾಪಾರದಲ್ಲಿರುವವರು ಅಥವಾ ಮೆದುಳು ಹೆಚ್ಚು ಬಳಸುವಂತಹ ಯಾವುದೇ ಕೆಲಸ ಮಾಡುವವರು ಪಶ್ಚಿಮ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬೇಕು. ಇದರಲ್ಲಿ ಬರಹಗಾರರು, ಶಿಕ್ಷಕರು, ವಿಜ್ಞಾನಿಗಳು  ಸೇರಿರುತ್ತಾರೆ. 

ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವವರು, ವಿದ್ಯಾರ್ಥಿಗಳು ಉತ್ತರಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ಈ ದಿಕ್ಕಿಗೆ ಮುಖ ಮಾಡಿ ಊಟ ಮಾಡುವುದರಿಂದ ಜ್ಞಾನ ಹೆಚ್ಚುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ದಿಕ್ಕನ್ನು ಮನೆಯಲ್ಲಿ ಊಟದ ಕೋಣೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಸಾಧ್ಯವಾಗದಿದ್ದರೆ, ಡೈನಿಂಗ್ ಟೇಬಲ್ ಅನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿಯೂ ಇಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News