Ganesh Puja Tips: ಬುಧವಾರ ಗಣಪನ ಪೂಜೆಯಲ್ಲೂ ಮರೆತೂ ಈ ವಸ್ತುಗಳನ್ನು ಅರ್ಪಿಸಬೇಡಿ

Lord Ganesh Puja Rules: ಬುಧವಾರ ಗಣೇಶನ ಪೂಜೆಗೆ ಮೀಸಲಾಗಿದೆ. ಈ ದಿನ ಮನಃಪೂರ್ವಕವಾಗಿ ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳ ವಿನಾಶಕ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ದುಃಖಗಳನ್ನು ದೂರಮಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಬುಧವಾರದಂದು ಗಣಪತಿ ಪೂಜೆಯ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಗಣಪತಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದೂ ಕೂಡ ಹೇಳಲಾಗುತ್ತದೆ ಅವುಗಳ ಬಗ್ಗೆ ತಿಳಿಯೋಣ...

Written by - Yashaswini V | Last Updated : Jun 1, 2022, 11:34 AM IST
  • ಬುಧವಾರ ವಿಘ್ನ ವಿನಾಶನಕ ಸಂಕಷ್ಟಹರ ಗಣೇಶನಿಗೆ ಮೀಸಲಾದ ದಿನವಾಗಿದೆ.

    ಹಿಂದೂ ಧರ್ಮದಲ್ಲಿ ಗಣೇಶ ಪೂಜೆಗೆ ವಿಶೇಷ ಮಹತ್ವವಿದೆ.

    ಯಾವುದೇ ಕೆಲಸಕ್ಕೂ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ.
Ganesh Puja Tips: ಬುಧವಾರ ಗಣಪನ ಪೂಜೆಯಲ್ಲೂ ಮರೆತೂ ಈ ವಸ್ತುಗಳನ್ನು ಅರ್ಪಿಸಬೇಡಿ  title=
Ganesh puja niyam

ಗಣೇಶ ಪೂಜೆ ನಿಯಮಗಳು:  ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ಕೆಲವು ದೇವರು-ದೇವತೆಗಳಿಗೆ ಮೀಸಲಾಗಿದೆ. ಬುಧವಾರ ವಿಘ್ನ ವಿನಾಶನಕ ಸಂಕಷ್ಟಹರ ಗಣೇಶನಿಗೆ ಮೀಸಲಾದ ದಿನವಾಗಿದೆ. ಹಿಂದೂ ಧರ್ಮದಲ್ಲಿ ಗಣೇಶ ಪೂಜೆಗೆ ವಿಶೇಷ ಮಹತ್ವವಿದೆ. ಯಾವುದೇ ಶುಭ ಕಾರ್ಯವು ಗಣೇಶನ ಪೂಜೆಯಿಂದ ಪ್ರಾರಂಭವಾಗುತ್ತದೆ. ಗಣೇಶನನ್ನು ಪೂಜಿಸುವುದರಿಂದ ವ್ಯಕ್ತಿಯ ಪ್ರತಿಯೊಂದು ಬಿಕ್ಕಟ್ಟುಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಬುಧವಾರದಂದು ಗಣಪತಿ ಪೂಜೆಯ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಗಣಪತಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದೂ ಕೂಡ ಹೇಳಲಾಗುತ್ತದೆ. ಗಣಪತಿ ಕೋಪಗೊಂಡರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಗಣೇಶನ ಪೂಜೆಯ ಸಮಯದಲ್ಲಿ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. 

ಪೂಜೆಯಲ್ಲಿ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಬೇಡಿ:
ಒಡೆದ ಅಕ್ಕಿ:

ಧಾರ್ಮಿಕ ಗ್ರಂಥಗಳ ಪ್ರಕಾರ, ಅಕ್ಕಿಯನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗಣೇಶನ ಪೂಜೆಯಲ್ಲಿ ಅಕ್ಷತೆಯನ್ನು ಅರ್ಪಿಸುವುದು ತುಂಬಾ ಶುಭ ಎಂದು ನಂಬಲಾಗಿದೆ. ಆದರೆ, ಗಣೇಶನ ಪೂಜೆಗಾಗಿ ಬಳಸುವ ಅಕ್ಕಿಯು ಒಡೆದಿರಬಾರದು ಎಂಬುದನ್ನು ನೆನಪಿನಲ್ಲಿಡಿ. ಗಣಪತಿಗೆ ಅಕ್ಷತೆಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಗಣೇಶ್ ಜಿಗೆ ಅಕ್ಷತವನ್ನು ಅರ್ಪಿಸುವಾಗ, ಅದನ್ನು ಸ್ವಲ್ಪ ಒದ್ದೆ ಮಾಡಿ ಅರ್ಪಿಸುವುದು ತುಂಬಾ ಶುಭ ಎನ್ನಲಾಗುತ್ತದೆ.

ಇದನ್ನೂ ಓದಿ- Morning Luck Shine Tips: ಮುಂಜಾನೆ ಈ ವಸ್ತುಗಳನ್ನು ನೋಡಿದರೆ ಅದೃಷ್ಟ

ಗಣೇಶನ ಪೂಜೆಯಲ್ಲಿ ತುಳಸಿ ದಳವನ್ನು ಬಳಸಬೇಡಿ:
ಭೋಲೇಶಂಕರನಂತೆಯೇ ಗಣಪತಿಯ ಪೂಜೆಯಲ್ಲಿಯೂ ಸಹ ತುಳಸಿ ದಳ ಅರ್ಪಿಸುವುದನ್ನು ನಿಷೇಧಿಸಲಾಗಿದೆ. ದಂತಕಥೆಯ ಪ್ರಕಾರ, ಗಣೇಶ್ ಜಿ ತುಳಸಿಯನ್ನು ಶಪಿಸಿದರು. ಹಾಗಾಗಿ, ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಬಾರದು ಎಂದು ಹೇಳಲಾಗುತ್ತದೆ.

ಬಿಳಿ ಹೂವನ್ನು ಅರ್ಪಿಸಬೇಡಿ:
ಗಣೇಶನ ಪೂಜೆಯಲ್ಲಿ ಕೆಂಪು ಹೂವುಗಳು ಮತ್ತು ಕೆಂಪು ಸಿಂಧೂರವನ್ನು ಬಳಸಲಾಗುತ್ತದೆ. ಆದರೆ ತಪ್ಪಾಗಿಯೂ ಗಣೇಶನಿಗೆ ಬಿಳಿ ಹೂವುಗಳನ್ನು ಅರ್ಪಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಗಣೇಶನನ್ನು ಶಕ್ತಿ ಮತ್ತು ಉತ್ಸಾಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ- Vastu Tips: ಊಟ ಮಾಡುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಇರಲಿ ಎಚ್ಚರ

ಒಣಗಿದ ಹೂವುಗಳನ್ನು ಅರ್ಪಿಸಬೇಡಿ:
ಗಣೇಶ ಪೂಜೆಯಲ್ಲಿ ಒಣಗಿದ ಮತ್ತು ಹಳೆಯ ಹೂವುಗಳನ್ನು ಅಪ್ಪಿತಪ್ಪಿಯೂ ಬಳಸಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಬಡತನ ಬರುತ್ತದೆ ಎನ್ನಲಾಗುತ್ತದೆ. ಆದ್ದರಿಂದ, ಪೂಜೆಯ ಸಮಯದಲ್ಲಿ ಗಣೇಶನಿಗೆ ತಾಜಾ ಹೂವುಗಳನ್ನು ಅರ್ಪಿಸಿ. 

ತಪ್ಪಾಗಿಯೂ ಬಿಳಿ ಬಣ್ಣವನ್ನು ಬಳಸಬೇಡಿ:
ದಂತಕಥೆಯ ಪ್ರಕಾರ, ಚಂದ್ರನು ಗಣೇಶನನ್ನು ಅಪಹಾಸ್ಯ ಮಾಡಿದನು, ಆದ್ದರಿಂದ ಗಣೇಶನು ಚಂದ್ರನನ್ನು ಶಪಿಸಿದನು ಎಂದು ಹೇಳಲಾಗುತ್ತದೆ. ಆದ್ದರಿಂದ, ಚಂದ್ರನೊಂದಿಗಿನ ಸಂಬಂಧದಿಂದಾಗಿ ಬಿಳಿ ಹೂವುಗಳನ್ನು ಗಣೇಶನಿಗೆ ಅರ್ಪಿಸುವುದಿಲ್ಲ. ಅದೇ ಸಮಯದಲ್ಲಿ, ವಿಘ್ನಹರ್ತನನ್ನು ಪೂಜಿಸಲು ಬಿಳಿ ಬಟ್ಟೆ, ಬಿಳಿ ದಾರ ಮತ್ತು ಬಿಳಿ ಚಂದನವನ್ನು ಬಳಸಲಾಗುವುದಿಲ್ಲ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News