ರಾಜ್ಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ಸಾರ್ವಜನಿಕರ ನಕಾರ ! ಕಾಂಗ್ರೆಸ್ ಗೆ ಹೆಚ್ಚಿದ ತಲೆನೋವು

ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿಗಳಿಗೆ ತನ್ನ ಅನುಮೋದನೆ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಗ್ಯಾರನ್ತಿಗಲ್ ಈಡೇರಿಕೆಗೆ ಸಾರ್ವಜನಿಕರು ಪಟ್ಟು ಹಿಡಿಯುವುದನ್ನು ಗಮನಿಸಬಹುದು.   

Written by - Ranjitha R K | Last Updated : May 16, 2023, 09:44 AM IST
  • ಬಿಲ್ ಕಟ್ಟಲು ಸಾರ್ವಜನಿಕರ ನಕಾರ
  • ಕಾಂಗ್ರೆಸ್ ಬಳಿ ಬಿಲ್ ಕೇಳುವಂತೆ ಕಲೆಕ್ಟರ್ ಗೆ ಸೂಚನೆ
  • ಸರ್ಕಾರ ರಚನೆಗೆ ಮುನ್ನವೇ ಗ್ಯಾರಂಟಿ ಈಡೇರಿಸಲು ಆಗ್ರಹ
ರಾಜ್ಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ಸಾರ್ವಜನಿಕರ ನಕಾರ ! ಕಾಂಗ್ರೆಸ್ ಗೆ ಹೆಚ್ಚಿದ ತಲೆನೋವು  title=

ಚಿತ್ರದುರ್ಗ : ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಕರ್ನಾಟಕ ಜನತೆಗೆ ಭರವಸೆ ನೀಡಿತ್ತು. ರಾಜ್ಯದ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡಿ ಅಧಿಕಾರದ ಗದ್ದುಗೆಗೆ ಏರಿಸಿದ್ದಾರೆ. ಸರ್ಕಾರ ರಚೆಯಾದ ಬಳಿಕವಷ್ಟೇ ಕಾಂಗ್ರೆಸ್ ತಾನು ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಧ್ಯವಾಗುತ್ತದೆ. ಆದರೆ  ಕರ್ನಾಟಕದ ಹಳ್ಳಿಯೊಂದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಗ್ರಾಮಸ್ಥರು ತಮ್ಮ ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸಿದ್ದಾರೆ. 200 ಯೂನಿಟ್‌ಗಳನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ಚುನಾವಣಾ ಪೂರ್ವ ಘೋಷಿಸಿರುವ ಭರವಸೆಯನ್ನು ಗ್ರಾಮಸ್ಥರು ಇಲ್ಲಿ ಉಲ್ಲೇಖಿಸುತ್ತಿದ್ದಾರೆ. 

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿಗಳಿಗೆ ತನ್ನ ಅನುಮೋದನೆಯ ಮುದ್ರೆ ಒತ್ತುವುದಾಗಿ ಕಾಂಗ್ರೆಸ್ ಪದೇ ಪದೇ ಹೇಳುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗ  ಗ್ರಾಮಸ್ಥರೊಬ್ಬರು ವಿದ್ಯುತ್ ಬಿಲ್ ಕಲೆಕ್ಟರ್‌ಗೆ ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಹೇಳುತ್ತಿರುವುದನ್ನು ಗಮನಿಸಬಹುದು. 

ಇದನ್ನೂ ಓದಿ : Karnataka CM Race: ಬಹುಮತದಿಂದ ಗೆಲ್ಲಿಸಿದ್ದಾರೆ ಇದಕ್ಕಿಂತ ದೊಡ್ಡ ಉಡುಗೊರೆ ನಿರೀಕ್ಷಿಸಲು ಸಾಧ್ಯವೇ - ಡಿ.ಕೆ. ಶಿ

ಈ ತಿಂಗಳು ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ಬಿಲ್ ಕಲೆಕ್ಟರ್ ಗ್ರಾಮಸ್ಥರ ಮನವೊಲಿಸುವುದನ್ನು ಕೂಡಾ ಇಲ್ಲಿ ಕಾಣಬಹುದು. ಇದಕ್ಕೆ ಪ್ರತ್ಯುತ್ತರವಾಗಿ ಸರಕಾರ ಏನು ಹೇಳುತ್ತದೆ ನೋಡೋಣ ಎಂದು ಗ್ರಾಮಸ್ಥರು ಹೇಳುತ್ತಾರೆ. ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದರೆ ವಿದ್ಯುತ್ ಇಲಾಖೆ ಅದನ್ನು ಅನುಸರಿಸುತ್ತದೆ ಎಂದು ವಿದ್ಯುತ್ ಬಿಲ್ ಕಲೆಕ್ಟರ್ ಹೇಳಿದ್ದಾರೆ.  

ಇದಕ್ಕೆ ಉತ್ತರಿಸುವ ಗ್ರಾಮಸ್ಥರು ಹಣ ನೀಡುವುದಿಲ್ಲ ಎಂಡು ಪಟ್ಟು ಹಿಡಿಯುತ್ತಾರೆ. ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದೆ . ಕಾಂಗ್ರೆಸ್‌ನಿಂದ ಬಿಲ್ ತೆಗೆದುಕೊಳ್ಳಿ. ನಮ್ಮಿಂದ ಅಲ್ಲ ಎಂದು ಗ್ರಾಮಸ್ಥರು ಹೇಳುವುದನ್ನು ಇಲ್ಲಿ ಗಮನಿಸಬಹುದು. ಸರ್ಕಾರದ ಆದೇಶ ಬಂದರೆ ವಿದ್ಯುತ್ ಉಚಿತ ನೀಡುವುದಾಗಿ ಬಿಲ್ ಕಲೆಕ್ಟರ್ ಹೇಳುತ್ತಾರೆ. 

ಇದನ್ನೂ ಓದಿ : ಸಿದ್ದರಾಮಯ್ಯ Vs ಡಿ.ಕೆ.ಶಿವಕುಮಾರ್: ಈ ಇಬ್ಬರು ಸಿಎಂ ಆಕಾಂಕ್ಷಿಗಳಲ್ಲಿರುವ ಬಲಾಬಲಗಳೇನು?

ಒಟ್ಟಾರೆ ಸರ್ಜರ ರಚನೆಯಾಗುವ ಮುನ್ನವೇ ಗ್ಯಾರಂಟಿಗಳನ್ನೂ ಈಡೇರಿಸಿ ಎಂದು ಜನ ಪಟ್ಟು ಹಿಡಿಯುತ್ತಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News