ನಿಷೇದಾಜ್ಞೆ ಉಲ್ಲಂಘನೆ ಮಾಡಿದ ಮೈಸೂರು ಸಂಸದ..!

              

Last Updated : Dec 4, 2017, 11:45 AM IST
ನಿಷೇದಾಜ್ಞೆ ಉಲ್ಲಂಘನೆ ಮಾಡಿದ ಮೈಸೂರು ಸಂಸದ..! title=
Twitter

ಮೈಸೂರು: ಕಾನೂನು ಪಾಲನೆಯ ಹಿನ್ನಲೆಯಲ್ಲಿ ಇಲ್ಲಿನ ಹುಣಸೂರಿನಲ್ಲಿ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿತ್ತು, ಆದರೆ ಸಂಸದ ಪ್ರತಾಪ ಸಿಂಹರವರು ಹನುಮ ಜಯಂತಿಯ ಸಂಧರ್ಭದಲ್ಲಿ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಕಾರನ್ನು ಬ್ಯಾರಿಕೇಡ್ ಮೇಲೆ ನುಗ್ಗಿಸಿದ ಘಟನೆ ಹುಣಸೂರು ಪಟ್ಟಣದ ಬಿಳಿಕೆರಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ  ಹನುಮಜಯಂತಿ ಮತ್ತು ಈದ್ ಮಿಲಾದ್ ಸಂದರ್ಭದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು, ಆದ ಕಾರಣ ಮುಂಜಾಗೃತಾ ಕ್ರಮವಾಗಿ  ಡಿಸೆಂಬರ್ 2 ರಂದು ಈದ್ ಮಿಲಾದ್ ಮತ್ತು 3 ರಂದು ಹನುಮನ ಜಯಂತಿಯ ಹಿನ್ನಲೆಯಲ್ಲಿ  ಎರಡು ದಿನಗಳ ಕಾಲ ಕಲಂ 144ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿತ್ತು..   

ಆದರೆ ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಕಾರ್ಯಕರ್ತರು ಉದ್ದೇಶ ಪೂರಕವಾಗಿ ಹನುಮನ ಜಯಂತಿಯ ಮೆರವಣಿಗೆಯನ್ನು ಪ್ರಾರಂಭಿಸಲು  ಮುಂದಾದಾಗ  ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.ಈ ಸಂದರ್ಭದಲ್ಲಿ  ಕಲ್ಲುತೂರಾಟ ನಡೆಸಿದ  ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದ ಘಟನೆ ಹುಣಸೂರಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.  

 

 

 

Trending News