ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠರವರ ಮೇಲೆ ಹಲ್ಲೆ

   

Last Updated : Dec 31, 2017, 04:47 PM IST
ಮಹದಾಯಿ ಹೋರಾಟಗಾರ ವೀರೇಶ್ ಸೊಬರದಮಠರವರ ಮೇಲೆ ಹಲ್ಲೆ  title=

ಬೆಂಗಳೂರು:  ಮಹದಾಯಿ ಹೋರಾಟದ ಮುಂಚೂಣಿಯಲ್ಲಿರುವ  ವೀರೇಶ್ ಸೊಬರದಮಠರವರ ಮೇಲೆ ಅಪರಿಚಿತ ಗುಂಪೊಂದು ಏಕಾಏಕಿ ವೇದಿಕೆಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟದ ನೇತೃತ್ವ ವಹಿಸಿಕೊಂಡಿರುವ ವೀರೇಶ್ ಸೊಬರದಮಠ ಇತ್ತೀಚಿಗೆ ಬೆಂಗಳೂರಿನಲ್ಲಿ  ಧರಣಿ ಸತ್ಯಾಗ್ರಹದ ಮೂಲಕ ಗಮನ ಸೆಳೆದಿದ್ದರು.ಅಲ್ಲದೆ ಈ ವಿಷಯವನ್ನು ತೀವ್ರಗೊಳಿಸಲು ಸಹ ಪ್ರಮುಖ ಪಾತ್ರವನ್ನು ವಹಿಸಿದ್ದರು.ಆದರೆ ಅಪರಿಚಿತ ಗುಂಪೊಂದು ಇವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದೆ ಎಂದು ಹೇಳಲಾಗಿದೆ. ಹಲ್ಲೆ ಮಾಡಿದವರನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ.

Trending News