ಬಿಜೆಪಿಯಿಂದ ‘ಕಲೆಕ್ಷನ್ ಮಂತ್ರಿ’ ಪ್ರಿಯಾಂಕ್ ಖರ್ಗೆಯವರ ಘನಂದಾರಿ ಕೆಲಸಗಳ ಪಟ್ಟಿ ಬಿಡುಗಡೆ!

BJP Slams Priyank Kharge: ತಂದೆಯ ಕೃಪಾಕಟಾಕ್ಷದಿಂದ ಸಿದ್ದರಾಮಯ್ಯರ ಹಿಡಿತಕ್ಕೂ ಸಿಗದೆ ಪ್ರಿಯಾಂಕ್‌ ಖರ್ಗೆ ಆಡಿದ್ದೇ ಆಟ ಎನ್ನುವಂತಾಗಿರುವುದು ಕರ್ನಾಟಕದ ದುರಂತ..! ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Nov 8, 2023, 04:47 PM IST
  • ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ
  • ಕಲೆಕ್ಷನ್‌ ಮಂತ್ರಿ ಪ್ರಿಯಾಂಕ್ ಖರ್ಗೆ ಮಾಡುತ್ತಿರುವ ಘನಂದಾರಿ ಕೆಲಸಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
  • ತಂದೆಯ ಕೃಪಾಕಟಾಕ್ಷದಿಂದ ಸಿದ್ದರಾಮಯ್ಯರ ಹಿಡಿತಕ್ಕೂ ಸಿಗದೆ ಪ್ರಿಯಾಂಕ್‌ ಖರ್ಗೆ ಆಡಿದ್ದೇ ಆಟ ಎನ್ನುವಂತಾಗಿದೆ
ಬಿಜೆಪಿಯಿಂದ ‘ಕಲೆಕ್ಷನ್ ಮಂತ್ರಿ’ ಪ್ರಿಯಾಂಕ್ ಖರ್ಗೆಯವರ ಘನಂದಾರಿ ಕೆಲಸಗಳ ಪಟ್ಟಿ ಬಿಡುಗಡೆ! title=
ಪ್ರಿಯಾಂಕ್‌ ಖರ್ಗೆ ಆಡಿದ್ದೇ ಆಟ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಮತ್ತೊಮ್ಮೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ದಿನದಿಂದಲೂ ಕಲೆಕ್ಷನ್‌ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಮಾಡುತ್ತಿರುವ ಘನಂದಾರಿ ಕೆಲಸಗಳು’ ಅಂತಾ ಪಟ್ಟಿ ಬಿಡುಗಡೆ ಮಾಡಿದೆ.

‘ಕಾಸಿಗಾಗಿ ಪೋಸ್ಟಿಂಗ್‌/ಟ್ರಾನ್ಸ್‌ಫರ್‌ ದಂಧೆ, ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ದಂಧೆ, ಕಿಯೋನಿಕ್ಸ್‌ ಸಂಸ್ಥೆಯಲ್ಲಿ ಪರ್ಸಂಟೇಜ್‌ ದಂಧೆ, ಕಲಬುರಗಿ ಜಿಲ್ಲೆಯಲ್ಲಿ ಆಪ್ತರ ಗೂಂಡಾಗಿರಿ, ಕಲಬುರಗಿಯ ತುಂಬಾ ಹೆಚ್ಚಿದ ಮರಳು ಮಾಫಿಯಾ, ಫೇಕ್ ನ್ಯೂಸ್‌ ಹೆಸರಲ್ಲಿ ಅಮಾಯಕರಿಗೆ ಬೆದರಿಕೆ ಮತ್ತು ಆಪ್ತರಿಂದ ನಗರಸಭಾ ಅಧಿಕಾರಿಗಳ ಮೇಲೆ ಹಲ್ಲೆ. ತಂದೆಯ ಕೃಪಾಕಟಾಕ್ಷದಿಂದ ಸಿದ್ದರಾಮಯ್ಯರ ಹಿಡಿತಕ್ಕೂ ಸಿಗದೆ ಪ್ರಿಯಾಂಕ್‌ ಖರ್ಗೆ ಆಡಿದ್ದೇ ಆಟ ಎನ್ನುವಂತಾಗಿರುವುದು ಕರ್ನಾಟಕದ ದುರಂತ..!’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ 5 ವರ್ಷ ಇದ್ದರೆ ರಾಜ್ಯದ ಸಾಲದ ಪ್ರಮಾಣ 10 ಲಕ್ಷ ಕೋಟಿಗೆ ಏರಿಕೆ..!

ತುಘಲಕ್ ಆರ್ಥಿಕ ನೀತಿ!

‘ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯರ ಆರ್ಥಿಕ ನೀತಿಗಳು ಅವರ ಆಸ್ಥಾನ ಕಲಾವಿದರಿಗೆ, ವಂಧಿಮಾಗದರಿಗೆ ಮಾತ್ರ ಸಹ್ಯ. ಸಿದ್ದರಾಮಯ್ಯರವರ ಹಾಗೂ ಕಾಂಗ್ರೆಸ್ ಪಕ್ಷದ ಆರ್ಥಿಕ ನೀತಿಗಳು, ಒಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹೇಗೆ ದಿವಾಳಿ ಮಾಡುತ್ತದೆ ಎಂಬುದಕ್ಕೆ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ!! ಕಾಂಗ್ರೆಸ್ ಸರ್ಕಾರದ ತುಘಲಕ್ ಆರ್ಥಿಕ ನೀತಿಗಳ ಪರಿಣಾಮ ಕರ್ನಾಟಕದ ಜನತೆ ಬರದಿಂದ ಬಸವಳಿಯುವ ಜೊತೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾದ ಸಂದರ್ಭ ಬಂದೆರಗಿದೆ’ ಎಂದ ಬಿಜೆಪಿ ಟೀಕಿಸಿದೆ.

ಕಲೆಕ್ಷನ್ ಕಾಯಕದಲ್ಲಿ ತಲ್ಲೀನರಾಗಿದ್ದಾರೆ!

‘ರಾಜ್ಯದ ಆರೋಗ್ಯ ಮೂಲಸೌಕರ್ಯ ಸೇವೆಯನ್ನು ಕಾಂಗ್ರೆಸ್ ಹದಗೆಡಿಸಿರುವುದರ ಪರಿಣಾಮ ನ್ಯಾಯಾಲಯವೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ನೋಟಿಸ್ ನೀಡಿದೆ‌. ರಾಜ್ಯದಲ್ಲಿ 16,500 ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದರೂ ಕಾಂಗ್ರೆಸ್‌‌ನ ಒಂದರ್ಧ ಶಾಸಕರು ಮುಂದಿನ ಮುಖ್ಯಮಂತ್ರಿ ಯಾರೆಂಬ ಚಿಂತೆಯಲ್ಲಿದ್ದಾರೆ, ಇನ್ನರ್ಧ ಶಾಸಕರು ಕಲೆಕ್ಷನ್ ಕಾಯಕದಲ್ಲಿ ತಲ್ಲೀನರಾಗಿದ್ದಾರೆ! ಇವುಗಳ ನಡುವೆ ಜನರ ಆರೋಗ್ಯ ಹದಗೆಟ್ಟರೆ ತಮಗೇನು ಎಂಬ ನಿಶ್ಚಿಂತೆಯಲ್ಲಿ ಸಿದ್ದರಾಮಯ್ಯನವರ ಮಂತ್ರಿ ಮಂಡಲ ಮಲಗಿರುವುದು ಕರ್ನಾಟಕದ ಪಾಲಿನ ದುರಂತ’ವೆಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಬಲಿಯಾದ ಮಹಿಳೆಯ ಕುಟುಂಬಕ್ಕೆ 15 ಲಕ್ಷ ಪರಿಹಾರ: ಸಿಎಂ ಸಿದ್ದರಾಮಯ್ಯ ಘೋಷಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News