ಚಾಮರಾಜನಗರದಲ್ಲಿ ಆನೆ, ಕರಡಿ ದಾಳಿಯಿಂದ ಇಬ್ಬರು ರೈತರಿಗೆ ಗಂಭೀರ ಗಾಯ

ಪುಟ್ಟಸ್ವಾಮಿ ಎಂಬವರ ಮೇಲೆ ಕಾಡಾನೆಯೊಂದು  ಏಕಾಏಕಿ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಸಿಲುಕಿದ ಪುಟ್ಟಸ್ವಾಮಿಯ ಎರಡೂ ಕಾಲಿನ ಮೂಳೆ ಮುರಿದಿದೆ. 

Written by - Ranjitha R K | Last Updated : Dec 15, 2022, 03:42 PM IST
  • ರೈತನ ಮೇಲೆ ಕಾಡಾನೆ ದಾಳಿ
  • ಘಟನೆಯಲ್ಲಿ ರೈತನಿಗೆ ತೀವ್ರವಾಗಿ ಗಾಯ
  • ಮತ್ತೊಂದೆಡೆ ಕರಡಿ ದಾಳಿಯಲ್ಲಿಯೂ ವ್ಯಕ್ತಿಗೆ ಗಾಯ
 ಚಾಮರಾಜನಗರದಲ್ಲಿ ಆನೆ, ಕರಡಿ ದಾಳಿಯಿಂದ ಇಬ್ಬರು ರೈತರಿಗೆ ಗಂಭೀರ ಗಾಯ title=

ಚಾಮರಾಜನಗರ :  ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ  ಹನೂರು ತಾಲೂಕಿನ  ಕೊಕ್ಕಬರೆ ಗ್ರಾಮದ ಸಮೀಪ ನಡೆದಿದೆ. ಘಟನೆಯಲ್ಲಿ ರೈತ ತೀವ್ರವಾಗಿ ಗಾಯಗೊಂಡಿದ್ದಾರೆ. ಕೊಕ್ಕಬರೆ ಗ್ರಾಮದ ಪುಟ್ಟಸ್ವಾಮಿ ಎಂಬವರ ಮೇಲೆ ಆನೆ ದಾಳಿ ಮಾಡಿದೆ. 

ಚಾಮರಾಜನಗರದ ಕೊಕ್ಕಬರೆ ಗ್ರಾಮದ ಪುಟ್ಟಸ್ವಾಮಿ ಎಂಬವರ ಮೇಲೆ ಆನೆಯೊಂದು ದಲಿ ಮಾಡಿದೆ.  ಪುಟ್ಟಸ್ವಾಮಿ ತನ್ನ  ಕಾರ್ಯನಿಮಿತ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ತನ್ನ ಕೆಲಸ ಮುಗಿಸಿಕೊಂಡು ಮಲೆ ಮಹದೇಶ್ವರ ಬೆಟ್ಟದಿಂದ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ತಮ್ಮ ಪಾಡಿಗೆ ಬರುತ್ತಿದ್ದ ಪುಟ್ಟಸ್ವಾಮಿ ಮೇಲೆ ಕಾಡಾನೆಯೊಂದು  ಏಕಾಏಕಿ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಸಿಲುಕಿದ ಪುಟ್ಟಸ್ವಾಮಿಯ ಎರಡೂ ಕಾಲಿನ ಮೂಳೆ ಮುರಿದಿದೆ. 

ಇದನ್ನೂ ಓದಿ : ಮಗನಿಂದ ಮೋಸ... ತಾಯಿಯನ್ನ ಮಂಚದ ಸಮೇತ ಕೋರ್ಟ್‌ಗೆ ಹಾಜರುಪಡಿಸಿದ ಮಗಳು

ರೈತನ ಮೇಲೆ ಕಾಡಾನೆ ದಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ  ಅರಣ್ಯ ಇಲಾಖೆ ಅಧಿಕಾರಿಗಳು ಸ್ತ್ಘಲಕ್ಕೆ ಧಾವಿಸಿದ್ದಾರೆ. ಪುಟ್ಟಸ್ವಾಮಿ ಅವರನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆದೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮತ್ತೊಂದೆಡೆ, ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪ ದನಗಳನ್ನು ಮೇಯಿಸುವಾಗ, ವ್ಯಕ್ತಿ ಮೇಲೆ ಕರಡಿ ದಾಳಿ ಮಾಡಿದೆ. ಕರಡಿ ದಾಳಿಗೆ ಒಳಗಾದ ವ್ಯಕ್ತಿಯನ್ನು ಬೆಳ್ಳಿತಂಬಡಿ ಎಂದು ಗುರುತಿಸಲಾಗಿದೆ. ಕರಡಿ ದಾಳಿಯಿಂದ ಗಾಯಗೊಂಡಿರುವ ಬೆಳ್ಳಿತಂಬಡಿ  ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನನತರ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮ ಮಾಡಲಾಗಿದೆ. 

ಇದನ್ನೂ ಓದಿ : ರಾಜ್ಯದ ಉತ್ತರ -ದಕ್ಷಿಣವಾಗಿ ಡಿಕೆಶಿ -ಸಿದ್ದರಾಮಯ್ಯ ಪ್ರತ್ಯೇಕ ಪ್ರವಾಸ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News