ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ನಡು ರಸ್ತೆಯಲ್ಲಿಯೇ ಎರಡು‌ ಬಣಗಳ ನಡುವೆ ಕಾದಾಟ

ಈಶ್ವರಪ್ಪನವರನ್ನು ಆಹ್ವಾನಿಸದೇ ಕೇವಲ ಸಿದ್ದರಾಮಯ್ಯರನ್ನು ಆಹ್ವಾನಿಸಿರುವುದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಈಶ್ವರಪ್ಪನವರನ್ನು ಆಹ್ವಾನಿಸದೇ, ಇದ್ದ ಕಾರಣ ಈಶ್ವರಪ್ಪ ಬಣ ಆಕ್ಷೇಪ ವ್ಯಕ್ತಪಡಿಸಿದೆ. 

Written by - Ranjitha R K | Last Updated : May 27, 2022, 11:28 AM IST
  • ಸಿದ್ದರಾಮಯ್ಯ ಈಶ್ವರಪ್ಪ ಬಣದ ನಡುವೆ ಕಿತ್ತಾಟ
  • ಕುರುಬ ಸಮಾವೇಶಕ್ಕೆ ಸಂಬಂಧಿಸಿದಂತೆ ಕಾದಾಟ
  • ಸುದ್ದಿಗೋಷ್ಠಿ ಬಳಿಕ ಕೈ ಕೈ ಮಿಲಾಯಿಸಿದ ಬೆಂಬಲಿಗರು
ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ನಡು ರಸ್ತೆಯಲ್ಲಿಯೇ ಎರಡು‌ ಬಣಗಳ ನಡುವೆ ಕಾದಾಟ  title=
siddu eshwarappa supporters fight

ಬೆಂಗಳೂರು : ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ಎರಡು‌ ಬಣಗಳ ನಡುವೆ ಕಾದಾಟ  ನಡೆದಿದೆ.  ಸಿದ್ದರಾಮಯ್ಯ ಬಣ ಹಾಗೂ ಈಶ್ವರಪ್ಪ ಬಣಗಳ ನಡುವೆ ಕಿತ್ತಾಟ ನಡೆದಿದೆ.  ನಾಳೆ ನಡೆಯುವ ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ಎರಡು‌ ಬಣಗಳ ಜಟಾಪಟಿ ನಡೆದಿದೆ. 

ಈಶ್ವರಪ್ಪನವರನ್ನು ಆಹ್ವಾನಿಸದೇ ಕೇವಲ ಸಿದ್ದರಾಮಯ್ಯರನ್ನು ಆಹ್ವಾನಿಸಿರುವುದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಈಶ್ವರಪ್ಪನವರನ್ನು ಆಹ್ವಾನಿಸದೇ, ಇದ್ದ ಕಾರಣ ಈಶ್ವರಪ್ಪ ಬಣ ಆಕ್ಷೇಪ ವ್ಯಕ್ತಪಡಿಸಿದೆ. 

ಇದನ್ನೂ ಓದಿ : ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರ ಕಿರಿಕ್!

 

ಸುದ್ದಿಗೋಷ್ಠಿ ಬಳಿಕ ಪರಸ್ಪರ ಎರಡು ಬಣಗಳು ಕೈ ಕೈ ಮಿಲಾಯಿಸಿಕೊಂಡಿಸಿವೆ. ಈಶ್ವರಪ್ಪ ಯಾವತ್ತೂ ಹಿಂದುಳಿದವರ ಪರ ಧ್ವನಿ ಎತ್ತಿಲ್ಲ. ಕೇವಲ ಸಿದ್ದರಾಮಯ್ಯನವರು ಮಾತ್ರ ಕುರುಬರ ಪರ ನಿಲ್ಲುತ್ತಾರೆ. ಈಶ್ವರಪ್ಪ ಮೊದಲು ತಾನು ಕುರುಬ ಎಂದು ಹೇಳಿಕೊಳ್ಳಲಿ. ನಂತರ ಅವರನ್ನು ಸಮಾವೇಶಕ್ಕೆ ಕರೆಯಲಾಗುವುದು ಎಂದು ಕುರುಬರ ರಾಜ್ಯ ಸಂಘದ ನಿರ್ದೇಶಕ ರಾಮಚಂದ್ರಪ್ಪ ಹೇಳಿದ್ದಾರೆ. 

ಆದರೆ ರಾಮಚಂದ್ರಪ್ಪರ ಹೇಳಿಕೆಯಿಂದ  ಈಶ್ವರಪ್ಪ ಬಣ ಕೆರಳಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆಯೇ ಖಾಸಗಿ‌ಹೋಟೆಲ್ ನ ಮುಂಭಾಗ ನಡುರಸ್ತೆಯಲ್ಲಿ  ಎರಡೂ‌ ಬಣಗಳು ಕಿತ್ತಾಡಿಕೊಂಡಿವೆ. 

ಇದನ್ನೂ ಓದಿ : ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಸ್ಫೋಟ, ಯುವಕನ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News