ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ಗ್ರಾಹಕರ ಆಯೋಗ ಆದೇಶ

ಮಾಳಮಡ್ಡಿಯ ನಿವಾಸಿ ಲಕ್ಕಪ್ಪ ಬೆನ್ನಿ ಅನ್ನುವವರು 2017 ಇಸವಿಯಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರದ ಜಿಯೋ ಸಿಮ್ ಖರೀದಿಸಿದ್ದರು. ಕೋವಿಡ್-19ರ ಅವಧಿಯಲ್ಲಿ ಅವರು ಸದರಿ ಸಿಮ್‍ನ್ನು ಕಳೆದುಕೊಂಡಿದ್ದರು. ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀಧಿಸಿದ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆ ಮತ್ತು ಜೀಯೋ ಕಸ್ಟಮರ್ ಕೇರಗೆ ಸಾಕಷ್ಟು ವಿನಂತಿಸಿದ್ದರು. 

Written by - Manjunath N | Last Updated : Sep 1, 2023, 07:04 PM IST
  • ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅದೇ ನಂಬರಗೆ ಸದರಿ ಸಿಮ್‍ನ್ನು ಸಕ್ರಿಯಗೊಳಿಸಬೇಕು ಅಂತಾ ಎದುರುದಾರರಿಗೆ ಆಯೋಗ ನಿರ್ಧೇಶನ ನೀಡಿದೆ.
  • ಸೇವಾ ನ್ಯೂನ್ಯತೆಗಾಗಿ 1ನೇ ಎದುರುದಾರರು ರೂ. 10 ಸಾವಿರ ಪರಿಹಾರ ಮತ್ತು ರೂ.5000/- ಪ್ರಕರಣದ ಖರ್ಚನ್ನು ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ.
ಸಿಮ್ ಸಕ್ರಿಯಗೊಳಿಸಲು ಜಿಯೋ ಕಂಪನಿಗೆ ಗ್ರಾಹಕರ ಆಯೋಗ ಆದೇಶ title=
file photo

ಧಾರವಾಡ: ಮಾಳಮಡ್ಡಿಯ ನಿವಾಸಿ ಲಕ್ಕಪ್ಪ ಬೆನ್ನಿ ಅನ್ನುವವರು 2017 ಇಸವಿಯಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರದ ಜಿಯೋ ಸಿಮ್ ಖರೀದಿಸಿದ್ದರು. ಕೋವಿಡ್-19ರ ಅವಧಿಯಲ್ಲಿ ಅವರು ಸದರಿ ಸಿಮ್‍ನ್ನು ಕಳೆದುಕೊಂಡಿದ್ದರು. ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀಧಿಸಿದ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆ ಮತ್ತು ಜೀಯೋ ಕಸ್ಟಮರ್ ಕೇರಗೆ ಸಾಕಷ್ಟು ವಿನಂತಿಸಿದ್ದರು. 

ಆದರೂ ಎದುರುದಾರರು ದೂರುದಾರರ ಮೇಲೆ ಹೇಳಿದ ನಂಬರಿನ ಜಿಯೋ ಸಿಮ್‍ನ್ನು ಸಕ್ರಿಯಗೊಳಿಸಿರಲಿಲ್ಲ. ಅದರಿಂದ ತನ್ನ ದೈನಂದಿನ ಜೀವ ನಿರ್ವಹಣೆ ಮತ್ತು ಬ್ಯಾಂಕ್ ಇತ್ಯಾದಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು ಎಲ್ಲ ಎದುರುದಾರರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದೂರುದಾರರು ಗ್ರಾಹಕ ರಕ್ಷಣಾಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಬಲ ಬೆಲೆಯೊಂದಿಗೆ ವರ್ಷವಿಡೀ ಕೊಬ್ಬರಿ  ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ : ಸಚಿವ ಸಂಪುಟ ಉಪಸಮಿತಿ ತೀರ್ಮಾನ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ದೂರುದಾರ 2 ಮತ್ತು 3ನೇ ಎದುರುದಾರರ ಜಿಯೋ ಕಂಪನಿಯ ಸಿಮ್‍ನ್ನು ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರಿನ ಜಿಯೊ ಸಿಮ್ ಖರೀದಿಸಿದ್ದರು. ಉಪಯೋಗಿಸುವಾಗ ದೂರುದಾರ ಆ ಸಿಮ್‍ನ್ನು  ಕಳೆದುಕೊಂಡಿದ್ದರಿಂದ  ಅದನ್ನು ಮರು ಸಕ್ರಿಯಗೊಳಿಸಲು ಎದುರುದಾರರಿಗೆ ಕೇಳಿಕೊಂಡರೂ ಅವರ ಕೋರಿಕೆಯನ್ನು ಪರಿಗಣಿಸಲು ಎದುರುದಾರರು ವಿಫಲರಾಗಿರುವುದರಿಂದ ಅವರು ಗ್ರಾಹಕರಾದ ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. 

ಇದನ್ನೂ ಓದಿ: BJP vs BJP: 4 ಮತ ಸೆಳೆಯಲಾಗದ ಬಿ.ಎಲ್.ಸಂತೋಷ್ ಸಭೆ ನಡೆಸುವ ದುರ್ಗತಿ ಬಿಜೆಪಿಯದ್ದು!

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಅದೇ ನಂಬರಗೆ ಸದರಿ ಸಿಮ್‍ನ್ನು ಸಕ್ರಿಯಗೊಳಿಸಬೇಕು ಅಂತಾ ಎದುರುದಾರರಿಗೆ ಆಯೋಗ ನಿರ್ಧೇಶನ ನೀಡಿದೆ. ಸೇವಾ ನ್ಯೂನ್ಯತೆಗಾಗಿ 1ನೇ ಎದುರುದಾರರು ರೂ. 10 ಸಾವಿರ ಪರಿಹಾರ ಮತ್ತು ರೂ.5000/- ಪ್ರಕರಣದ ಖರ್ಚನ್ನು ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News