court news: ಅದರಿಂದ ಗ್ರಾಹಕನಾದ ದೂರುದಾರನಿಗೆ ಮಾನಸಿಕ ತೊಂದರೆ ಮತ್ತು ಆರ್ಥಿಕ ನಷ್ಟ ಉಂಟಾಗಿದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಅವರು ನೀಡಿದ ರೂ.1,50,000/- ಮತ್ತು ಅದರ ಮೇಲೆ ವಾರ್ಷಿಕ ಶೇ 9% ರಂತೆ ದಿ:05/04/2023 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಕೊಡಲು ಆದೇಶಿಸಿದೆ.
ಧಾರವಾಡದ ಮಾಳಮಡ್ಡಿ ನಿವಾಸಿ ಪ್ರಕಾಶ ಉಪ್ಪಾರ ಎಂಬುವವರು ಜರ್ಮನಿಯಲ್ಲಿ ನೆಲಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಂಬಂಧಿಕರ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು.
ಹುಬ್ಬಳ್ಳಿಯ ವಿದ್ಯಾನಗರದ ವಿಜಯಕುಮಾರ ಬಗಾಡೆ ಎಂಬುವವರು 2013 ರಲ್ಲಿ ಹುಬ್ಬಳ್ಳಿಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ಇಚ್ಚಿಸಿ ಎದುರುದಾರ ಎಸ್.ಎಸ್.ವಿ. ಶೇಲ್ಟರ್ಸ್ ನಿರ್ಮಿಸುತ್ತಿದ್ದ ಹುಬ್ಬಳ್ಳಿ ಸೆಂಟರ್ನಲ್ಲಿ ನಂ.31ಎ, 165 ಚ.ಪೂ ವಿಸ್ರ್ತಿಣದ ಮಳಿಗೆ ಖರೀದಿಸಲು ರೂ.8 ಲಕ್ಷ 50 ಸಾವಿರಗಳಿಗೆ ದಿ.21/02/2013 ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಸದರಿ ಒಪ್ಪಂದದಂತೆ ದೂರುದಾರ ಎದುರುದಾರರಿಗೆ ಎಲ್ಲ ಹಣವನ್ನು ಸಂದಾಯ ಮಾಡಿದ್ದರು.
ಹುಬ್ಬಳ್ಳಿಯ ಅಕ್ಷಯ ಕಾಲನಿಯ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ರವರು ಧಾರವಾಡದ ಹಳೆ ಹುಲ್ಲಿನ ಮಾರುಕಟ್ಟೆಯಲ್ಲಿರುವ ತಮ್ಮ ಮಾಲೀಕತ್ವದ 700 ಚ.ಅ. ಖುಲ್ಲಾ ಜಾಗೆಯನ್ನು ಪ್ರತಿ ತಿಂಗಳ ಬಾಡಿಗೆ ಕೊಡುವ ಕರಾರಿನ ಮೇಲೆ ಏರಸೆಲ್ ಕಂಪನಿಗೆ ಟಾವರ್ ಹಾಕಿಕೊಳ್ಳಲು ಕೊಟ್ಟಿದ್ದರು.
ನವಲಗುಂದ ತಾಲೂಕಿನ ಹಾಳ ಕುಸುಗಲ್ಲ ಗ್ರಾಮದ ಬಸವರಾಜ ಶಂಕರಪ್ಪಾ ಸವದಿ ಅನ್ನುವವರು ಕೆ.ಎ-25 ಎಎ-4536 ಗೂಡ್ಸ ವಾಹನಕ್ಕೆ ಮಾಲೀಕರಾಗಿದ್ದರು. ಅವರು ಆ ವಾಹನಕ್ಕೆ ಎದುದುದಾರ ಚೋಳಮಂಡಲ ವಿಮಾ ಕಂಪನಿಯಿಂದ ವಿಮೆ ಮಾಡಿಸಿದ್ದರು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕ ನಾಗನೂರ ಗ್ರಾಮದ ನಿವಾಸಿ ಅಶೋಕ ಕರಮಳ್ಳಿ ಎಂಬುವವರು ಸ್ಥಳೀಯ ಶ್ರೀ ಕುಮಾರೇಶ್ವರ ಗೃಹನಿರ್ಮಾಣ ಅಭಿವೃದ್ಧಿ ಸಹಕಾರಿ ಸಂಘದವರು ಪರಿಚಯಿಸಿದ ಬೆಂಗಳೂರಿನ ಕರ್ನಾಟಕ ರಾಜ್ಯ ಕೋ ಆಫ್ರೇಟಿವ್ ಹೌಸಿಂಗ್ ಫೆಡರೇಷನ್ ಲಿಮಿಟೆಡ್ ಇವರಲ್ಲಿ 40x60 ಅಳತೆಯ ಸೈಟಿಗೆ 2012ರಲ್ಲಿ ಅರ್ಜಿ ಸಲ್ಲಿಸಿದ್ದರು.
ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ ನಿವಾಸಿ ಉಷಾ ಜೈನ ಎಂಬುವವರು ಅಲ್ಲಿಯ ವಿದ್ಯಾನಗರದ ಪ್ರಕಲ್ಪ ಮೋಟರ್ಸ ಇವರಿಂದ ದಿ. 18/06/2021 ರಂದು ರೂ. 1,25,000/- ಕೊಟ್ಟು ಟಿ ವಿ ಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಲಕ್ಷ್ಮವ್ವ ಇಂಗಳಿಹಳ್ಳಿ ಅವರ ಪತಿ ಅಶೋಕ ಎಂಬುವವರು ಚೋರಮಂಡಲಮ್ ಜನರಲ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಅವರಿಂದ ರೂ.413/-ಗಳನ್ನು ಪ್ರಿಮಿಯಮ್ ನೀಡಿ, ರೂ.5 ಲಕ್ಷಗಳಿಗೆ ದಿ:06/08/2020 ರಂದು ಒಂದು ವರ್ಷದ ಅವಧಿಯ ಅಪಘಾತ ವಿಮೆ ಖರೀದಿಸಿದ್ದರು. ವಿಮೆದಾರ ದಿ:13/12/2020 ರಂದು ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಮೃತನ ಪತ್ನಿ ಲಕ್ಷ್ಮವ್ವ ಅಗತ್ಯ ದಾಖಲೆಗಳೊಂದಿಗೆ ವಿಮೆ ಹಣ ಕೊಡುವಂತೆ ವಿಮಾ ಕಂಪನಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು.
ಧಾರವಾಡದ ಖಾನಾಪೂರ ಮ.ತಡಕೋಡ ಗ್ರಾಮದ ವಾಸಿ ಈರಣ್ಣ ಗುಂಡಗೋವಿ ಎಂಬುವವರು ಪ್ಲಿಪ್ಕಾರ್ಟ ಕಂಪನಿಯಿಂದ ಆನ್ಲೈನ್ ಮೂಲಕ ದಿ:14/01/2023 ರಂದು ರೂ.2,632/- ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಮ್.ಎಲ್.ನ ಥರ್ಮಸ್ ಆರ್ಡರ್ ಮಾಡಿದ್ದರು. ಅದರ ಆಯ್ಡಿ.ನಂ.ಓಡಿ ನಂ.427057552465496100 ಇರುತ್ತದೆ. ಅದರಂತೆ ಸದರಿ ಥರ್ಮಸ್ನ್ನು 1ನೇ ಎದುರುದಾರರ ಕೋರಿಯರ್ ಸರ್ವಿಸ್ನವರು ದಿ:19/01/2023 ರಂದು ದೂರುದಾರನಿಗೆ ತಲುಪಿಸಿದ್ದರು.
ಬಾಗಲಕೋಟೆಯ ನವನಗರ ವಾಸಿ ಮಹೇಶ ಹಾಗೂ ಸುವರ್ಣ ವೀರಾಪೂರ ದಂಪತಿಗಳು ಹುಬ್ಬಳ್ಳಿಯ ಶ್ರೀ ಸಮರ್ಥ ಅಸೋಸಿಯೇಟ್ಸ್ನ ಪಾಲುದಾರ ಪಾಂಡುರಂಗ ಜೋಶಿ ಅವರು ನಿರ್ಮಿಸುತ್ತಿರುವ ನೂತನ ಅಪಾರ್ಟಮೆಂಟನಲ್ಲಿ ಪ್ಲ್ಯಾಟ ನಂ.3 ಮತ್ತು 4 ಖರೀದಿಸುವ ಕುರಿತು ಮಾತುಕತೆ ನಡೆಸಿ ಪ್ಲ್ಯಾಟಗೆ ತಲಾ ರೂ.6,53,850/-ಗಳಿಗೆ ಒಪ್ಪಂದ ಪತ್ರ ಮಾಡಿಕೊಂಡಿದ್ದರು.
ಬಾಗಲಕೋಟೆಯ ನಿವಾಸಿ ಗೀತಾ ಗೌಡರ ಎಂಬುವವರು ಧಾರವಾಡದ ಎಮ್.ಎಸ್. ಗ್ರೀನ್ ಕೌಂಟಿಯ ಮಾಲೀಕರಾದ ಶ್ರೀನಿವಾಸ ನಾಯ್ಡು ಎಂಬುವವರು ಈಟಿಗಟ್ಟಿಯ ಪ್ಲಾಟ್ನಂ.108 ನ್ನು ರೂ.4,80,000/-ಗಳಿಗೆ 2014ರಲ್ಲಿ ಖರೀದಿಸುವ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಆ ಪೈಕಿ ಬೇರೆ ಬೇರೆ ದಿನಾಂಕಗಳಂದು ದೂರುದಾರಳು ಒಟ್ಟು ರೂ.3,66,000/- ಅಡವಾನ್ಸ್ ಹಣ ಎದುರುದಾರ/ಬಿಲ್ಡರಗೆ ಕೊಟ್ಟಿದ್ದರು.
ಶಿರಸಿಯ ಶ್ರೀಮತಿ ನಾಗರತ್ನ ಫರನಾಂಡಿಸ್ ರವರ ಮಗ ರೋಷನ್ ಮೋಟರ್ ಸೈಕಲ್ ನಂ:ಕೆಎ-31 ಇಡಿ-1835 ಕ್ಕೆ ಮಾಲೀಕನಿದ್ದನು. ಅವನು ಆ ವಾಹನದ ಮೇಲೆ ದಿ:27/03/2021 ರಿಂದ 26/03/2022 ರ ಅವಧಿಯ ವಿಮೆ ಮಾಡಿಸಿದ್ದನು. ಆ ವಿಮೆಯಲ್ಲಿ ಅದರ ಮಾಲೀಕ ಆಥವಾ ಚಾಲಕರ ಅವಘಡದ ಪಿ.ಎ, ಕವರೇಜ್ ಸೇರಿತ್ತು. ದೂರುದಾರರಾದ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು.
ಶಿರಸಿಯ ಶ್ರೀಮತಿ ನಾಗರತ್ನ ಫರನಾಂಡಿಸ್ ರವರ ಮಗ ರೋಷನ್ ಮೋಟರ್ ಸೈಕಲ್ ನಂ:ಕೆಎ-31 ಇಡಿ-1835 ಕ್ಕೆ ಮಾಲೀಕನಿದ್ದನು. ಅವನು ಆ ವಾಹನದ ಮೇಲೆ ದಿ:27/03/2021 ರಿಂದ 26/03/2022 ರ ಅವಧಿಯ ವಿಮೆ ಮಾಡಿಸಿದ್ದನು. ಆ ವಿಮೆಯಲ್ಲಿ ಅದರ ಮಾಲೀಕ ಆಥವಾ ಚಾಲಕರ ಅವಘಡದ ಪಿ.ಎ, ಕವರೇಜ್ ಸೇರಿತ್ತು. ದೂರುದಾರರಾದ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು.
ಹುಬ್ಬಳ್ಳಿಯ ಲಿಂಗರಾಜ ನಗರದ ಹೂಗಾರ ಲೇಔಟನ ದೇವೆಂದ್ರಪ್ಪ ಹೂಗಾರ ಅನ್ನುವವರು ಹುಬ್ಬಳ್ಳಿಯ ಕ್ಲಬ್ರಸ್ತೆಯಲ್ಲಿ ಶ್ರೀ ರಾಘವೇಂದ್ರ ಜೂಸ್ ಹಾಗೂ ಐಸ್ಕ್ರೀಮ್ ಅಂಗಡಿಯನ್ನು ಸ್ವಯಂ ಉದ್ಯೋಗದ ಅಡಿ ನಡೆಸುತ್ತಿದ್ದರು. ಅವರು ತಮ್ಮ ಅಂಗಡಿಯಲ್ಲಿ ಬಿಸ್ಲೇರಿ ನೀರು, ಜೂಸ್ ಮತ್ತು ಐಸಕ್ರೀಮಗಳನ್ನು ಮಾರಾಟ ಮಾಡುತ್ತಿದ್ದರು. ಜನವರಿ 01 2023 ರಂದು ದೂರುದಾರ ಹಳೆ ಹುಬ್ಬಳ್ಳಿಯ ಆನಂದ ನಗರದ ಸಾಯಿ ಎಂಟರ ಪ್ರೈಸಸ್ರವರಿಂದ ರೂ.495 ಕೊಟ್ಟು ವಿವಿಧ ಬಗೆಯ ಬಿಸ್ಲೇರಿ ಬಾಟಲಿಗಳನ್ನು ಖರೀದಿಸಿದ್ದರು
ಮಾಳಮಡ್ಡಿಯ ನಿವಾಸಿ ಲಕ್ಕಪ್ಪ ಬೆನ್ನಿ ಅನ್ನುವವರು 2017 ಇಸವಿಯಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರದ ಜಿಯೋ ಸಿಮ್ ಖರೀದಿಸಿದ್ದರು. ಕೋವಿಡ್-19ರ ಅವಧಿಯಲ್ಲಿ ಅವರು ಸದರಿ ಸಿಮ್ನ್ನು ಕಳೆದುಕೊಂಡಿದ್ದರು. ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀಧಿಸಿದ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆ ಮತ್ತು ಜೀಯೋ ಕಸ್ಟಮರ್ ಕೇರಗೆ ಸಾಕಷ್ಟು ವಿನಂತಿಸಿದ್ದರು.
ಬಾಗಲಕೋಟೆಯ ನಿವಾಸಿ ಗೀತಾ ಗೌಡರ ಎಂಬುವವರು ಧಾರವಾಡದ ಎಮ್.ಎಸ್.ಗ್ರೀನ್ ಕೌಂಟಿಯ ಮಾಲೀಕರಾದ ಶ್ರೀನಿವಾಸ ನಾಯ್ಡು ಎಂಬುವವರು ಈಟಿಗಟ್ಟಿಯ ಪ್ಲಾಟ್ನಂ.108 ನ್ನು ರೂ.4,80,000/-ಗಳಿಗೆ 2014ರಲ್ಲಿ ಖರೀದಿಸುವ ಕರಾರು ಒಪ್ಪಂದ ಮಾಡಿಕೊಂಡಿದ್ದರು.
ನಗರದ ಗೌಡರ ಓಣಿ ವಾಸಿ ಕಿರಣ ಗಿರಿಯಪ್ಪನವರ ಅವರ ಅಜ್ಜ ವಿರುಪಾಕ್ಷಪ್ಪಾ ಗಿರಿಯಪ್ಪನವರ ಎಂಬುವವರು ಎದುರುದಾರ/ಧಾರವಾಡ ಕೆ.ಸಿ.ಸಿ. ಬ್ಯಾಂಕಿನಲ್ಲಿ ರೂ.9 ಲಕ್ಷ ರೂ.ಗಳ ಠೇವಣಿ ಇರಿಸಿದ್ದರು. ಸದರಿ ಠೇವಣಿ ಅವಧಿ 27/07/2023 ರಂದು ಮುಕ್ತಾಯವಾಗುವುದಿತ್ತು. ಸದರಿ ಅವಧಿಯೊಳಗೆ ದೂರುದಾರನ ಅಜ್ಜ ವಿರುಪಾಕ್ಷಪ್ಪಾ ದಿ.17/06/2022 ರಂದು ನಿಧನ ಹೊಂದಿದರು. ಮೃತರು ಸದರಿ ಠೇವಣಿಗೆ ಮೊಮ್ಮಗ ಕಿರಣರವರನ್ನು ನಾಮ ನಿರ್ದೇಶನ ಮಾಡಿದ್ದರು.
ಧಾರವಾಡ ಸಪ್ತಾಪುರದ ವಾಸಿ ಗಿರೀಶ ಜೋಶಿ ಎನ್ನುವವರು ತಮ್ಮ ಮನೆ ಬಳಕೆಗಾಗಿ ಅಮೆಜಾನ್ ವೆಬ್ಸೈಟ್ನಿಂದ ಅಗಸ್ಟ್ 7, 2020 ರಂದು ರೂ.15,499 ರೂ.ಗಳ ಸಂದಾಯ ಮಾಡಿ ವಾಷೀಂಗ್ ಮಶೀನ್ ಖರೀದಿಸಿದ್ದರು. ಅದರಂತೆ ಎದುರುದಾರ ಕಂಪನಿಯವರು ಆಗಸ್ಟ್ 10,2020 ರಂದು ಸದರಿ ಮಶೀನನ್ನು ದೂರುದಾರನಿಗೆ ವಿತರಿಸಿದ್ದರು. ಆದರೆ ಸದರಿ ಮಷೀನು ಖರೀದಿಸಿದ ಕೆಲವೇ ತಿಂಗಳಲ್ಲಿ ಮಶೀನಿನಲ್ಲಿ ದೋಷ ಉಂಟಾಗಿ ಸಮಸ್ಯೆ ಉಂಟಾಗಿತ್ತು. ದೂರುದಾರ ಆ ವಿಷಯವನ್ನು ಕೂಡಲೇ ಎದುರುದಾರನಿಗೆ ತಿಳಿಸಿದ್ದರು.
ಧಾರವಾಡದ ಮಹಿಷಿ ಪ್ಲಾಟ ವಾಸಿ ರಘುನಾಥ ಜೋಶಿ ರವರು ನಿವೃತ್ತಿ ಹೊಂದಿದ ನಂತರ ಎದುರುದಾರ ಕೇಶವ ಅನ್ನುವವರು ಬೆಂಗಳೂರಿನಲ್ಲಿ ಅಭಿವೃದ್ಧಿಗೊಳಿಸುತ್ತ್ತಿರುವ ಪ್ಲಾಟ್ ನಂ.11 ನ್ನು ದಿನಾಂಕ:11/11/2011 ರಂದು ರೂ.6,67,500/-ಗೆ ಖರೀದಿಸಿದ್ದರು. ಆ ಪೈಕಿ ರೂ.2,00,250/-ಗಳನ್ನು ಚೆಕ್ ಮೂಲಕ ಅಡ್ವಾನ್ಸ್ ನೀಡಿ ಎದುರುದಾರರಿಂದ ಖರೀದಿ ಕರಾರು ಪತ್ರ ಮಾಡಿಸಿಕೊಂಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.