ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ರಮೇಶ್ ಜಾರಕಿಹೊಳಿ

ಇನ್ನೂ ನಾಲ್ವರು ಶಾಸಕರು ಬಂದು ನಮ್ಮನ್ನು ಸೇರಲಿದ್ದಾರೆ- ಮತ್ತೊಂದು ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ.

Last Updated : Jul 10, 2019, 12:19 PM IST
ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ರಮೇಶ್ ಜಾರಕಿಹೊಳಿ title=
Pic Courtesy: ANI

ಮುಂಬೈ: "ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಭೇಟಿ ಮಾಡುವುದಿಲ್ಲ. ಡಿ.ಕೆ ಶಿವಕುಮಾರ್ ಅವರು ಈ ನಾಟಕವನ್ನು ಇಲ್ಲಿಗೆ ನಿಲ್ಲಿಸಬೇಕು" ಎಂದು ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ಅವರು ಈ ನಾಟಕವನ್ನು ಇಲ್ಲಿಗೆ ನಿಲ್ಲಿಸಬೇಕು. ಕಳೆದ ಒಂದು ವರ್ಷದಿಂದ ಈ ಡ್ರಾಮಾ ನೋಡಿ, ನೋಡಿ ಸಾಕಾಗಿದೆ. ಇಂದು ಯಾರೊಂದಿಗೂ ಮಾತನಾಡುವ ಮನಸ್ಥಿತಿಯಲ್ಲಿ ನಾವಿಲ್ಲ. ಇನ್ನೂ ನಾಲ್ವರು ಶಾಸಕರು ಬಂದು ನಮ್ಮನ್ನು ಸೇರಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಮುಂಬೈಯ ರಿನೈಸೆನ್ಸ್‌ ಹೊಟೇಲ್‌ನಲ್ಲಿ  ಕಾಂಗ್ರೆಸ್‌-ಜೆಡಿಎಸ್‌ನ ಅತೃಪ್ತ ಶಾಸಕರ ಭೇಟಿಗೆ ಮುಂದಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿಯವರು ನಮ್ಮನ್ನು ಕರೆತಂದಿಲ್ಲ:
ಅತೃಪ್ತ ಶಾಸಕರನ್ನು ಬಿಜೆಪಿಯವರು ಕರೆತಂದಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ನಮ್ಮನ್ನು ಯಾವ ಪಕ್ಷದವರೂ ಕರೆತಂದಿಲ್ಲ. ನಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿಗೆ ಬಂದಿದ್ದೇವೆ ಎಂದರು.

Trending News