ಹೊಸ ಪಕ್ಷ ಘೋಷಿಸಿದ ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್

ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ತಮ್ಮ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದಾರೆ.

Last Updated : Mar 15, 2018, 11:39 AM IST
ಹೊಸ ಪಕ್ಷ ಘೋಷಿಸಿದ ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್  title=
Pic : ANI

ಮೇಲುರ್ : ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ತಮ್ಮ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದಾರೆ. ಕಾಲಿವುಡ್ ಸೂಪರ್ ಸ್ಟಾರ್'ಗಳಾದ ರಜನಿಕಾಂತ್, ಕಮಲ್ ಹಾಸನ್ ಹೊಸ ಪಕ್ಷ ಕಟ್ಟಿದ ಬೆನ್ನಲ್ಲೇ ದಿನಕರನ್ ಹೊಸ ಪಕ್ಷ ಘೋಷಿಸಿದ್ದಾರೆ. 

ತಮ್ಮ ಪಕ್ಷಕ್ಕೆ ‘ಅಮ್ಮಾ ಮಕ್ಕಳ್​ ಮುನ್ನೇತ್ರ ಕಜಾಗಂ’(Amma Makkal Munetra Kazhagam) ಎಂದು ಹೆಸರಿಟ್ಟಿದ್ದು, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರವಿರುವ ಪಕ್ಷದ ಬಾವುಟವನ್ನೂ ಬಿಡುಗಡೆ ಮಾಡಿದರು. 

"ಈ ನೂತನ ಪಕ್ಷದ ಧ್ವಜವನ್ನು ಬಳಸಿಕೊಂಡು ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಾವು ಸ್ಪರ್ಧಿಸಿ ಗೆಲುವು ಸಾಧಿಸುತ್ತೇವೆ. ಎರಡು ಎಲೆಗಳ ಚಿಹ್ನೆಯನ್ನು ಮತ್ತೆ ಪಡೆಯಲು ನಾವು ಪ್ರಯತ್ನಿಸಾಲಿದು, ಅಲ್ಲಿಯವರೆಗೆ ಕುಕ್ಕರ್ ಚಿಹ್ನೆಯನ್ನು ಬಳಸಿಕೊಳ್ಳುತ್ತೇವೆ" ಎಂದು ದಿನಕರನ್ ಈ ಸಂದರ್ಭದಲ್ಲಿ ಹೇಳಿದರು.

ಈ ಹಿಂದೆ ಎಐಎಡಿಎಂಕೆ ನಾಯಕಿ ಜಯಲಲತಾ ಅವರ ಕ್ಷೇತ್ರವಾಗಿದ್ದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. 

Trending News