ರಾಮ ಜನ್ಮಭೂಮಿಗೆ ಹಿಂದುಗಳು ಮತ್ತೊಮ್ಮೆ ಬಲಿದಾನ ಮಾಡಬೇಕಾಗಿದೆ- ಬಿಜೆಪಿ ಸಂಸದ

    

Last Updated : Mar 18, 2018, 11:09 AM IST
ರಾಮ ಜನ್ಮಭೂಮಿಗೆ ಹಿಂದುಗಳು ಮತ್ತೊಮ್ಮೆ ಬಲಿದಾನ ಮಾಡಬೇಕಾಗಿದೆ- ಬಿಜೆಪಿ ಸಂಸದ title=

ಅಯೋಧ್ಯ: ರಾಮ ಜನ್ಮಭೂಮಿಗೆ ಹಿಂದೂ ಸಮುದಾಯದಿಂದ ಮತ್ತೊಮ್ಮೆ ಬಲಿದಾನದ ಅಗತ್ಯವಿದೆ ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ವಿನಯ್ ಕಟಿಯಾರ್ "ರಾಮಜನ್ಮಭೂಮಿಗೆ ಮತ್ತೊಂದು ಬಲಿದಾನದ ಅಗತ್ಯವಿದೆ ಎಂದು ನಾನು ನಂಬಿದ್ದೇನೆ ಅದಕ್ಕೆ ಹಿಂದೂ ಸಮುದಾಯ ಸನ್ನದ್ದರಾಗಬೇಕು.1992 ಡಿಸೆಂಬರ್ 6 ರಂದು ಮುಲಾಯಂಸಿಂಗ್ ಸರ್ಕಾರದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹಲವಾರು ಜನರು ಮೃತಪಟ್ಟಿದ್ದರು,ಆದ್ದರಿಂದ ಅದೇ ರೀತಿ ಮತ್ತೊಂದು ಕ್ರಾಂತಿ ನಡೆಯಬೇಕಾಗಿದೆ, ಅಂತಹ ತ್ಯಾಗಕ್ಕೆ ಹಿಂದೂ ಸಮುದಾಯ ಸಜ್ಜಾಗಬೇಕಾಗಿದೆ" ಎಂದು ತಿಳಿಸಿದರು  

ಕಟಿಯಾರ್ ರವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಪ್ರಸ್ತಾಪಿಸುತ್ತಾ ಆ ಸಂದರ್ಭದಲ್ಲಿ ಮುಲಯಾಂ ಸಿಂಗ್ ಸರಕಾರ ಹಿಂದೂ ಕರಸೇವಕರ ಮೇಲೆ  ಗೊಲಿಬಾರಕ್ಕೆ ಆದೇಶ ನೀಡಿತ್ತು, ಆಗ ಸುಮಾರು 2000 ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಈಗ ಅದೇ ಮಾದರಿಯ ಬಲಿದಾನಕ್ಕೆ ಮತ್ತೊಮ್ಮೆ ಸಿದ್ದರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

Trending News