ಒಡಿಶಾ : ಜಾಜ್‌ಪುರ ಮೇಲ್ಸೇತುವೆಯಿಂದ ಬಸ್ ಉರುಳಿ ಐವರು ಸಾವು, ಹಲವರಿಗೆ ಗಾಯ

Odisha  : ಜಾಜ್‌ಪುರದ ಬಾರಾಬತಿ ಬಳಿ NH-16 ರಲ್ಲಿ ಅವರು ಪ್ರಯಾಣಿಸುತ್ತಿದ್ದ ಬಸ್‌ ಫ್ಲೈಓವರ್‌ನಿಂದ ಜಾರಿ  ಐವರು ಸಾವನ್ನಪ್ಪಿದ್ದಾರೆ ಮತ್ತು ಹಲವರಿಗೆ ಗಾಯಗೊಂಡಿರುವ ಘಟನೆ ನಡೆದಿದೆ. 

Written by - Zee Kannada News Desk | Last Updated : Apr 16, 2024, 06:24 AM IST
  • ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ ನೀಡುವುದಾಗಿ ಪರಿಹಾರ ಘೋಷಿಸಿದ್ದಾರೆ
  • ಬಸ್ ನಲ್ಲಿ ಒಟ್ಟು 43 ಪ್ರಯಾಣಿಕರಿದ್ದು, ಗಾಯಾಳುಗಳನ್ನು 16 ಆಂಬ್ಯುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಖಿಲ್ ಪವನ್ ಕಲ್ಯಾಣ್ ತಿಳಿಸಿದರು.
  • ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ
ಒಡಿಶಾ : ಜಾಜ್‌ಪುರ ಮೇಲ್ಸೇತುವೆಯಿಂದ ಬಸ್ ಉರುಳಿ ಐವರು ಸಾವು, ಹಲವರಿಗೆ ಗಾಯ title=

Flyover bus accident in odisha : ಸೋಮವಾರ ಈ ಘಟನೆ ನಡೆದಿದ್ದು, ಒಡಿಶಾದ ಜಾಜಪುರದ ಮೇಲ್ಸೇತುವೆಯಿಂದ ಬಿದ್ದು ಐವರು ಸಾವನ್ನಪ್ಪಿದ್ದು, ಹಲವಾರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. \

ಇದನ್ನು ಓದಿ : ಇದೇ 18-19ರಂದು ಧಾರಾಕಾರ ಮಳೆ ಸಾಧ್ಯತೆ :ರಾಜ್ಯದಲ್ಲಿ ಯಲ್ಲೋ ಅಲರ್ಟ್, ಐಎಂಡಿ ಮುನ್ಸೂಚನೆ 

ಸಾವಿನ ಅಂಕಿ ಅಂಶವನ್ನು ಜಾಜ್‌ಪುರದ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ದೇಬಾಶಿಶ್ ಮೊಹರಾನಾ ಅವರು ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ ನೀಡುವುದಾಗಿ ಪರಿಹಾರ  ಘೋಷಿಸಿದ್ದಾರೆ 

. ದುರಂತದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಗಾಯಾಳುಗಳನ್ನು ಪ್ರಾಥಮಿಕವಾಗಿ ಧರ್ಮಶಾಲಾ ಸಿಎಚ್‌ಸಿಗೆ ಕಳುಹಿಸಲಾಗಿತ್ತು.  

ವರದಿಗಳ ಪ್ರಕಾರ, ಗಾಯಗೊಂಡ ಐವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ಗಾಯಾಳುಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. 16 ಆಂಬ್ಯುಲೆನ್ಸ್‌ಗಳು ಮತ್ತು ಐದು ಕ್ರೇನ್‌ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಜಾಜ್‌ಪುರ ಎಸ್‌ಪಿ ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಇದನ್ನು ಓದಿ : ಕರಿಮಣಿ ಮಾಲೀಕ ನೀನಲ್ಲ" ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ ! 

ಬಸ್ ನಲ್ಲಿ ಒಟ್ಟು 43 ಪ್ರಯಾಣಿಕರಿದ್ದು, ಗಾಯಾಳುಗಳನ್ನು 16 ಆಂಬ್ಯುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿಖಿಲ್ ಪವನ್ ಕಲ್ಯಾಣ್ ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News