ಪಂಜಾಬ್‌ನ 1,500 ರಿಲಯನ್ಸ್ ಜಿಯೋ ಟವರ್ ಗಳಲ್ಲಿ ಟೆಲಿಕಾಂ ಸೇವೆ ಸ್ಥಗಿತ

ಪಂಜಾಬ್‌ನ ರಿಲಯನ್ಸ್ ಜಿಯೋನ 9,000 ಟೆಲಿಕಾಂ ಟವರ್‌ಗಳಲ್ಲಿ 1,500 ಕ್ಕೂ ಹೆಚ್ಚು ಟವರ್ ಗಳು ನಿಷ್ಕ್ರೀಯವಾಗಿವೆ ಎನ್ನಲಾಗಿದೆ. ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಹಿನ್ನಲೆಯಲ್ಲಿ ಕೆಲವು ಕಡೆ ಸೇವೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

Last Updated : Dec 28, 2020, 11:40 PM IST
 ಪಂಜಾಬ್‌ನ 1,500 ರಿಲಯನ್ಸ್ ಜಿಯೋ ಟವರ್ ಗಳಲ್ಲಿ ಟೆಲಿಕಾಂ ಸೇವೆ ಸ್ಥಗಿತ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಪಂಜಾಬ್‌ನ ರಿಲಯನ್ಸ್ ಜಿಯೋನ 9,000 ಟೆಲಿಕಾಂ ಟವರ್‌ಗಳಲ್ಲಿ 1,500 ಕ್ಕೂ ಹೆಚ್ಚು ಟವರ್ ಗಳು ನಿಷ್ಕ್ರೀಯವಾಗಿವೆ ಎನ್ನಲಾಗಿದೆ. ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಹಿನ್ನಲೆಯಲ್ಲಿ ಕೆಲವು ಕಡೆ ಸೇವೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಾನಿ, ವಿದ್ಯುತ್ ಅಡೆತಡೆ ಅಥವಾ ಜನರೇಟರ್ ಕಳ್ಳತನದಿಂದಾಗಿ ಟವರ್ ಗಳಿಗೆ ಹಾನಿಯಾಗಿವೆ ಎಂದು ಟೆಲಿಕಾಂ ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ.ಮೊಬೈಲ್ ಟವರ್‌ಗಳನ್ನು ಧ್ವಂಸ ಮಾಡುವುದು ಮತ್ತು ಟೆಲಿಕಾಂ ಸೇವೆಗಳಿಗೆ ಅಡ್ಡಿಪಡಿಸುವುದರ ವಿರುದ್ಧ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇಂದು ಕಠಿಣ ಎಚ್ಚರಿಕೆ ನೀಡಿದ್ದು,ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಪರೋಕ್ಷ ಸಂದೇಶ ರವಾನಿಸುವ ಬದಲು ಪ್ರಧಾನಿ ಮೋದಿ ನೇರವಾಗಿ ರೈತರೊಂದಿಗೆ ಮಾತನಾಡಲಿ: ಎಚ್ ಡಿಕೆ

ಕಳೆದ ವಾರದಿಂದ, ರೈತರು ರಿಲಯನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ವಿದ್ಯುತ್ ಸರಬರಾಜನ್ನು ಕಿತ್ತುಹಾಕುವುದು, ಟೆಲಿಕಾಂ ಟವರ್‌ಗಳ ಕೇಬಲ್‌ಗಳನ್ನು ಕತ್ತರಿಸುವುದು ಮತ್ತು ಮುಖೇಶ್ ಅಂಬಾನಿ ಒಡೆತನದ ಸಂಸ್ಥೆಯ ಮೂಲಸೌಕರ್ಯಗಳನ್ನು ಹಾನಿಗೊಳಿಸುತ್ತಿದ್ದಾರೆ, ರೈತರು ಕೃಷಿ ಕಾನೂನುಗಳು ಅಂಬಾನಿಗೆ ಅನುಕೂಲಕರ ಎಂದು ಆರೋಪಿಸಿವೆ.

'ಕೇಂದ್ರ ಸರ್ಕಾರವು ಸ್ಪಷ್ಟ ಪ್ರಸ್ತಾವನೆಯನ್ನು ಮಂಡಿಸಿದರೆ ಮಾತುಕತೆಗೆ ಸಿದ್ಧ'

ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಅಮರಿಂದರ್ ಸಿಂಗ್ ಅರಾಜಕತೆಗೆ ಧುಮುಕುವ ಮೂಲಕ ಅಥವಾ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಆಸ್ತಿ ನಾಶವನ್ನು ಪಂಜಾಬ್ ಅನ್ನು ಅನುಮತಿಸುವುದಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗಳಿಗೆ ತಮ್ಮ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿಲ್ಲ, ಆದರೆ ಆಸ್ತಿಪಾಸ್ತಿಗೆ ಹಾನಿ ಮತ್ತು ಜನರಿಗೆ ಅನಾನುಕೂಲತೆಯನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಮೋದಿ 'ಮನ್ ಕಿ‌ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ

ಇಂತಹ ಸಂವಹನ ಸ್ಥಗಿತವು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ಮಾಡುವವರಿಗೆ ಮತ್ತು ಕೋವಿಡ್ ಏಕಾಏಕಿ ಮನೆಯಿಂದ ಕೆಲಸ ಮಾಡುವ ವೃತ್ತಿಪರರಿಗೆ ದುಬಾರಿಯಾಗಲಿದೆ ಎಂದು ಸಿಂಗ್ ರೈತರಿಗೆ ನೆನಪಿಸಿದರು.ಈಗ ಹೆಚ್ಚಾಗಿ ಆನ್‌ಲೈನ್ ವಹಿವಾಟಿನ ಮೇಲೆ ಅವಲಂಬಿತವಾಗಿರುವ ಬ್ಯಾಂಕಿಂಗ್ ಸೇವೆಗಳು ಸಹ ದೊಡ್ಡ ಹೊಡೆತವನ್ನು ಅನುಭವಿಸುತ್ತಿವೆ ಎಂದು ಅವರು ಹೇಳಿದರು.
 

Trending News