ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆ ಇಂದು ಪ್ರಾರಂಭವಾಗಿದ್ದು.ಉತ್ತರ ಪ್ರದೇಶದಲ್ಲಿ ಆನೆ ಗುರುತಿಗೆ ಮತ ಹಾಕಿದರೆ ಅದು ಕಮಲದ ಗುರುತಿಗೆ ಮತ ರವಾನೆಯಾಗುತ್ತಿದೆ ಎಂದು ಬಿಎಸ್ಪಿ ಗಂಭೀರ ಆರೋಪ ಮಾಡಿದೆ.
ಈ ವಿಚಾರವಾಗಿ ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬಿಎಸ್ಪಿ ನಾಯಕ ಸತೀಶ್ ಚಂದ್ರ ಮಿಶ್ರಾ"ನಾವು ಇನ್ನೊಂದು ದೂರನ್ನು ಸ್ವೀಕರಿಸಿ ಮತಯಂತ್ರದ ವೀಡಿಯೋ ಕ್ಲಿಪ್ ನ್ನು ಕಳುಹಿಸಿದ್ದೇವೆ.ಇದರಲ್ಲಿ ಆನೆ ಗುರುತಿಗೆ ಹಾಕಿದ ಮತವು ಕಮಲಕ್ಕೆ ಹೋಗುತ್ತಿದೆ. ನಾವು ಈ ಬಗ್ಗೆ ದೂರನ್ನು ನೀಡಿದ್ದೇವೆ.ಆದರೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ" ಎಂದು ಅವರು ಆರೋಪಿಸಿದ್ದಾರೆ.
SC Mishra, BSP: We've registered another complaint with Election Commission & have sent them a video clip of EVM, in which it is seen that 'elephant' symbol is being pressed but vote is going to BJP's 'lotus' symbol. Our people had complained against it but no action was taken https://t.co/hURcLhKCWK
— ANI UP (@ANINewsUP) April 11, 2019
ಇನ್ನು ಮುಂದುವರೆದು "ಉತ್ತರ ಪ್ರದೇಶದಲ್ಲಿ ಪೋಲಿಸ್ ಹಾಗೂ ಆಡಳಿತ ವಿಭಾಗವು ದಲಿತರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ಈ ಕುರಿತಾಗಿ ದೂರು ನೀಡಿ ತಕ್ಷಣ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದೇವೆ ಎಂದು ಹೇಳಿದರು.
Satish Chandra Mishra, BSP: In Uttar Pradesh today, the police & administration stopped members of Dalit community from casting votes. We've registered complaint with Election Commission regarding this & requested immediate action. We've told EC that higher-ups had a hand in this pic.twitter.com/nVcMG7C1Cm
— ANI UP (@ANINewsUP) April 11, 2019
ಉತ್ತರ ಪ್ರದೇಶದಲ್ಲಿ ಈ ಬಾರಿ ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಪಕ್ಷಗಳು ಬಿಜೆಪಿಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿವೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ 70ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.