ನಿರ್ಭಯಾ ರೇಪ್ ಮತ್ತು ಹತ್ಯೆ ಪ್ರಕರಣ ಅಪರಾಧಿಗಳಿಗೆ ಕೆಳ್ಲವಂತೆ ಈ ಪ್ರಶ್ನೆ!

ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ.

Last Updated : Dec 12, 2019, 05:18 PM IST
ನಿರ್ಭಯಾ ರೇಪ್ ಮತ್ತು ಹತ್ಯೆ ಪ್ರಕರಣ ಅಪರಾಧಿಗಳಿಗೆ ಕೆಳ್ಲವಂತೆ ಈ ಪ್ರಶ್ನೆ! title=

ನವದೆಹಲಿ: ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ. ಆದರೆ, ಒಂದು ವೇಳೆ ನಾವು ನಿಮಗೆ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ಹತ್ಯೆ ನಡೆಸಿದ ಅಪರಾಧಿಗಳಿಗೆ ಅವರ ಕೊನೆ ಇಚ್ಛೆ ಕೇಳಲಾಗುವುದಿಲ್ಲ ಎಂದು ಹೇಳಿದರೆ, ನೀವು ಕೂಡ ಶಾಕ್ ಆಗಬಹುದು. ಆದರೆ, ಇದು ಸತ್ಯ ಒಂದು ವೇಳೆ ಅವರ ಗಲ್ಲು ಶಿಕ್ಷೆ ಸಮಯ ನಿಗದಿಯಾದರೆ ಅವರಿಗೆ ಈ ಪ್ರಶ್ನೆ ಕೇಳಲಾಗುತ್ತಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ನೀಡಲಾಗಿರುವ ಎಲ್ಲ ಗಲ್ಲುಶಿಕ್ಷೆಗಳ ಸಂದರ್ಭಗಳಲ್ಲಿ ಈ ಪ್ರಶ್ನೆಯನ್ನು ಯಾವ ಅಪರಾಧಿಗೂ ಕೇಳಲಾಗಿಲ್ಲ ಎಂದು ಹೇಳಿದರೆ ನೀವು ಮತ್ತಷ್ಟು ಶಾಕ್ ಗೆ ಒಳಗಾಗಬಹುದು. ಅತ್ಯಾಚಾರಿ ಧನಂಜಯ್ ಮಹಾಪಾತ್ರ ಆಗಿರಬಹುದು ಅಥವಾ ಇಂದಿರಾ ಗಾಂಧಿ ಹತ್ಯೆಗೈದ ಸತವಂತ್ ಸಿಂಗ್ ಹಾಗೂ ಕೆಹೆರ್ ಸಿಂಗ್ ಆಗಿರಬಹುದು. ಈ ಅಪರಾಧಿಗಳಿಗೆಯೇ ಅವರ ಅಂತಿಮ ಇಚ್ಛೆ ಕೇಳಲಾಗಿಲ್ಲ, ಇನ್ನೂ ಮುಂಬೈ ಹಲ್ಲೆಯ ಪ್ರಮುಖ ಅಪರಾಧಿ ಅಜಮಲ್ ಕಸಾಬ್ ಹಾಗೂ ಸಂಸದ್ ಮೇಲೆ ಹಲ್ಲೆ ನಡೆಸಿದ ಉಗ್ರವಾದಿ ಅಫ್ಜಲ್ ಗುರು ಬಗ್ಗೆ ಈ ಪ್ರಶ್ನೆ ಉದ್ಭವವೇ ಆಗುವುದಿಲ್ಲ.

ಇಲ್ಲಿ ಬೆರಗುಗೊಳಿಸುವ ವಿಷಯ ಏನೆಂದರೆ ಕಾನೂನಿನಲ್ಲಿ ಗಲ್ಲುಶಿಕ್ಷೆ ನೀಡುವ ವೇಳೆ ಅಪರಾಧಿಗಳ ಅಂತಿಮ ಇಚ್ಛೆ ಕೇಳುವ ಯಾವುದೇ ಪ್ರಸ್ತಾಪವಿಲ್ಲ. ಜೈಲಿನ ಮ್ಯಾನ್ಯೂಅಲ್ ನಲ್ಲಿ ಈ ರೀತಿ ಏನೂ ಉಲ್ಲೇಖವಿಲ್ಲ. ಅಂದರೆ ಕೇವಲ ಕಥೆಗಳು ಮತ್ತು ಚಿತ್ರಗಳಲ್ಲಿಯೇ ಈ ಕುರಿತು ಕಲ್ಪನೆ ಮಾಡಲಾಗಿದ್ದು, ನಿಜ ಜೀವನಕ್ಕೆ ಇದು ಸಂಬಂದಿಸಿದ್ದಲ್ಲ. ತಿಹಾರ್ ಜೈಲಿನ ಮಾಜಿ ಡಿಜಿ ಅಜಯ್ ಕಶ್ಯಪ್ ಅವರ ಪ್ರಕಾರ ಅಪರಾಧಿಗಳ ಅಂತಿಮ ಇಚ್ಛೆ ಕೇಳುವ ಪರಂಪರೆ ಕೇವಲ ಚಲನಚಿತ್ರಗಳಲ್ಲಿ ಮಾತ್ರ ತೋರಿಸಲಾಗುತ್ತದೆ. ಗಲ್ಲುಶಿಕ್ಷೆ ನೀಡುವುದು ಒಂದು ನ್ಯಾಯಾಲಯದ ಆದೇಶವಾಗಿದ್ದು, ಇದನ್ನು ನಿರ್ಧರಿಸಲಾದ ವೇಳೆಯಲ್ಲಿಯೇ ಪೂರ್ಣಗೊಳಿಸಬೇಕು. ಒಂದು ವೇಳೆ ಅಪರಾಧಿ ಗಲ್ಲುಶಿಕ್ಷೆಯ ವೇಳೆ ತನ್ನ ಅಂತಿಮ ಇಚ್ಛೆಯಾಗಿ 'ನನ್ನನ್ನು ಗಲ್ಲಿಗೇರಿಸಬೇಡಿ' ಎಂದು ಕೇಳಿದರೆ ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ, ಇದೇ ವೇಳೆ ಗಲ್ಲುಶಿಕ್ಷೆ ನೀಡುವುದಕ್ಕೂ ಮುನ್ನ ಅಪರಾಧಿಯ ಉಯಿಲನ್ನು ಮಾತ್ರ ಸಿದ್ಧಪಡಿಸಲಾಗುತ್ತದೆ. ಕಾರಣ, ಆತನ ಮರಣದ ಬಳಿಕ ಆತನಿಗೆ ಸೇರಿದ ಎಲ್ಲ ವಸ್ತುಗಳು ಹಾಗೂ ಆಸ್ತಿಗೆ ಉತ್ತರಾಧಿಕಾರಿ ಯಾರು ಹಾಗು ಆತನ ಅಂತಿಮ ಸಂಸ್ಕಾರ ಎಲ್ಲಿ ಮತ್ತು ಯಾರು ಮಾಡಬೇಕು ಎಂಬುದನ್ನು ಕೇಳಲಾಗುತ್ತದೆ ಎಂದು ಕಶ್ಯಪ್ ಹೇಳುತ್ತಾರೆ.

ಗಲ್ಲುಶಿಕ್ಷೆ ಹೇಗೆ ನೀಡಲಾಗುತ್ತದೆ?
ಗಲ್ಲುಶಿಕ್ಷೆ ನೀಡುವ ವೇಳೆ ಅಪರಾಧಿಯನ್ನು ಸುಮಾರು 22 ಅಡಿ ಎತ್ತರದ ವೇದಿಕೆ ಮೇಲೆ ಕರೆದುಕೊಂಡು ಹೋಗಲಾಗುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಅಡಿಯಿಂದ ಮುಡಿಯವರೆಗೆ ಕಪ್ಪು ವಸ್ತ್ರದ ಬಟ್ಟೆ ಧರಿಸಲಾಗುತ್ತದೆ. ಗಲ್ಲುಶಿಕ್ಷೆ ನೀಡುವ ಮುನ್ನ ಆತನ ಎರಡು ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗುತ್ತದೆ. ಮುಖದ ಮೇಲೂ ಸಹ ಕಪ್ಪು ಬಟ್ಟೆ ಹಾಕಲಾಗುತ್ತದೆ. ಬಳಿಕ ಉರಿಯನ್ನು ಆತನ ಕುತ್ತಿಗೆಗೆ ಹಾಕಲಾಗುತ್ತದೆ. ನಂತರ ವೇದಿಕೆ ಮೇಲೆ ಇರುವ ಎಕ್ಸಿಕ್ಯೂಶನರ್ ವೇದಿಕೆಯ ಲಿವರ್ ಎಳೆಯುತ್ತಾನೆ. ಬಳಿಕ ಅಪರಾಧಿಯ ಕಾಲು ಕೆಳಗಿನ ಕಪಾಟ ಕೆಳಗಡೆ ತೆಗೆದುಕೊಳ್ಳುತ್ತದೆ ಹಾಗೂ ಅಪರಾಧಿಯ ಶರೀರ ನೇತಾಡಲು ಆರಂಭಿಸುತ್ತದೆ. ಇದಾದ ಅರ್ಧ ಗಂಟೆಯ ಬಳಿಕ ವೈದ್ಯರೊಬ್ಬರ ಸಹಾಯ ಪಡೆದು ಅಪರಾಧಿಯ ಸಾವನ್ನಪ್ಪಿದ್ದಾನೆ ಅಥವಾ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಇದಾದ ಬಳಿಕ ಜೈಲು ಸುಪರಿಟೆಂಡೆಂಟ್ ಮೃತ ವ್ಯಕ್ತಿಯ ವಸ್ತುಗಳು ದುರ್ಬಳಕೆ ಆಗುವುದಿಲ್ಲ ಎಂಬ ಖಾತ್ರಿ ಪಡೆದು ವಸ್ತುಗಳನ್ನು ಹಾಗೂ ಶವವನ್ನು ವ್ಯಕ್ತಿಯ ಸಂಬಂಧಿಕರಿಗೆ ಹಸ್ತಾಂತರಿಸುತ್ತಾರೆ.

Trending News