Winter Session : ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು.. ರಾಜ್ಯಸಭೆಯ 12  ವಿಪಕ್ಷ ಸಂಸದರ ಅಮಾನತು

ಕಳೆದ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿರುವ ಗಂಭೀರ ಆರೋಪದ ಮೇಲೆ 12 ವಿರೋಧ ಪಕ್ಷದ ಸಂಸದರನ್ನು ರಾಜ್ಯಸಭೆಯಿಂದ (Rajya Sabha) ಅಮಾನತುಗೊಳಿಸಲಾಗಿದೆ. ಇದೀಗ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಹಾಜರಾಗದಂತೆ ಸೂಚನೆ ನೀಡಲಾಗಿದೆ.

Last Updated : Nov 29, 2021, 05:54 PM IST
  • ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು
  • ರಾಜ್ಯಸಭೆಯ 12 ವಿಪಕ್ಷ ಸಂಸದರು ಅಮಾನತು
  • ಚಳಿಗಾಲದ ಅಧಿವೇಶನಕ್ಕೆ ಹಾಜರಾಗದಂತೆ ಸೂಚನೆ
Winter Session : ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು.. ರಾಜ್ಯಸಭೆಯ 12  ವಿಪಕ್ಷ ಸಂಸದರ ಅಮಾನತು title=

ನವದೆಹಲಿ : ಚಳಿಗಾಲದ ಅಧಿವೇಶನದ (Winter Session)ಮೊದಲ ದಿನವಾದ ಸೋಮವಾರ ರಾಜ್ಯಸಭೆಯು 12 ವಿಪಕ್ಷ ಸದಸ್ಯರನ್ನು ಪ್ರಸಕ್ತ ಅಧಿವೇಶನದ ಉಳಿದ ಅವಧಿಗೆ 'ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ'ಯ (unruly and violent behaviour) ಕಾರಣದಿಂದಾಗಿ ಅಮಾನತುಗೊಳಿಸಿದೆ. 

ಅಮಾನತುಗೊಂಡಿರುವ ಸಂಸದರಲ್ಲಿ ಕಾಂಗ್ರೆಸ್‌(Congress)ನ ಆರು, ಟಿಎಂಸಿ ಮತ್ತು ಶಿವಸೇನೆಯ ತಲಾ ಇಬ್ಬರು ಮತ್ತು ಸಿಪಿಎಂ ಮತ್ತು ಸಿಪಿಐನ ತಲಾ ಒಬ್ಬರು ಸೇರಿದ್ದಾರೆ.

ಇದನ್ನೂ ಓದಿ : Farm Laws Repeal Bill 2021: ಪ್ರತಿಪಕ್ಷಗಳ ಗದ್ದಲದ ನಡುವೆಯೂ ಲೋಕಸಭೆಯಲ್ಲಿ 'ಕೃಷಿ ಕಾನೂನುಗಳ ರದ್ದತಿ ಮಸೂದೆ-2021' ಅಂಗೀಕಾರ

ಅಮಾನತುಗೊಂಡ ಸಂಸದರ ಪಟ್ಟಿ ಇಂತಿದೆ:

1.ಎಳಮರಮ್ ಕರೀಂ (CPM)

2.ಫುಲೋ ದೇವಿ ನೇತಮ್ ​(INC)

3.ಛಾಯಾ ವರ್ಮಾ (INC)

4.ರಿಪುನ್ ಬೋರಾ (INC)

5.ಬಿನೋಯ್ ವಿಶ್ವಂ (CPM)

6.ರಾಜಮಣಿ ಪಟೇಲ್ (INC)

7.ಡೋಲಾ ಸೇನ್ (TMC)

8.ಶಾಂತಾ ಛೆಟ್ರಿ (TMC)

9.ಸೈಯದ್ ನಾಸಿರ್ ಹುಸೇನ್ (INC)

10.ಪ್ರಿಯಾಂಕಾ ಚತುರ್ವೇದಿ (Shiv Sena)

11.ಅನಿಲ್ ದೇಸಾಯಿ (Shiv Sena)

12.ಅಖಿಲೇಶ್ ಪ್ರಸಾದ್ ಸಿಂಗ್ (INC)

ಕಳೆದ ಆಗಸ್ಟ್​ ತಿಂಗಳಲ್ಲಿ ನಡೆದ ಸಂಸತ್​​ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ನಿಯಮ ದುರುಪಯೋಗ ಹಾಗೂ ಅಶಿಸ್ತಿನಿಂದ ನಡೆದುಕೊಂಡಿರುವ ಕಾರಣ ಸದಸ್ಯರನ್ನು ಅಮಾನತುಗೊಳಿಸಲಾಗಿದೆ (Rajya Sabha MPs suspended)ಎಂದು ತಿಳಿದು ಬಂದಿದೆ. ಪೆಗಾಸಸ್​, ಕೃಷಿ ಕಾಯ್ದೆ ಮಸೂದೆ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ನಿರಂತರವಾಗಿ ಸದನಕ್ಕೆ ಅಡ್ಡಿಪಡಿಸಲಾಗುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಈ 12 ವಿರೋಧ ಪಕ್ಷದ ಸಂಸದರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ : PMGKY Extended: ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ ಮಾರ್ಚ್ 2022 ರವರೆಗೆ ವಿಸ್ತರಣೆ

ಕಾಂಗ್ರೆಸ್‌ನ ಛಾಯಾ ವರ್ಮಾ ಅವರು ಅಮಾನತು "ಅನ್ಯಾಯ ಮತ್ತು ಅನ್ಯಾಯ" ಎಂದು ಬಣ್ಣಿಸಿದರು. "ಇತರ ಪಕ್ಷಗಳ ಸದಸ್ಯರು ಗದ್ದಲವನ್ನು ಸೃಷ್ಟಿಸಿದರು ಆದರೆ ಸಭಾಪತಿ ನನ್ನನ್ನು ಅಮಾನತುಗೊಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಬಹುಮತವನ್ನು ಹೊಂದಿರುವುದರಿಂದ ಅವರು ಬಯಸಿದಂತೆ ಮಾಡುತ್ತಿದ್ದಾರೆ" ಎಂದು ಹೇಳಿದರು.

ಕಾಂಗ್ರೆಸ್ ಸಂಸದ ರಿಪುನ್ ಬೋರಾ, ಅಮಾನತು "ಪ್ರಜಾಪ್ರಭುತ್ವ ವಿರೋಧಿ" ಎಂದು ಹೇಳಿದ್ದಾರೆ. ನಮ್ಮ ಮಾತು ಕೇಳಲು ಅವಕಾಶ ನೀಡಿಲ್ಲ, ಇದು ಏಕಪಕ್ಷೀಯ, ಪಕ್ಷಪಾತ, ಸೇಡಿನ ನಿರ್ಧಾರ, ವಿರೋಧ ಪಕ್ಷಗಳ ಅಭಿಪ್ರಾಯ ಕೇಳಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News