ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ಒಂದು ಪರಿಣಾಮಕಾರಿ ಮನೆಮದ್ದು!

Black Pepper Nutritional Value:ಸಾಮಾನ್ಯವಾಗಿ ಕರಿಮೆಣಸು ಸೇವನೆಯ ಹಲವು ವಿಧಾನಗಳಿವೆ. ಕರಿಮೆಣಸನ್ನು ಭಾರತದ ಪ್ರತಿಯೊಂದು ಮನೆಯಲ್ಲಿ ಬಳಸಲಾಗುತ್ತದೆ. ನಮ್ಮ ಅಡುಗೆ ಮನೆಯಲ್ಲಿ ಬಳಸಲಾಗುವ ದಿನನಿತ್ಯದ ಮಸಾಲೆ ಪದಾರ್ಥಗಳಲ್ಲಿ ಕರಿಮೆಣಸು ಕೂಡ ಒಂದು. ಇದನ್ನು ಹೊರತುಪಡಿಸಿದರೆ ಪಲ್ಯಕ್ಕೆ ರುಚಿಯೇ ಬರುವುದಿಲ್ಲ. 

Written by - Nitin Tabib | Last Updated : Mar 9, 2023, 11:23 PM IST
  • ಇದರಲ್ಲಿ ಕಂಡುಬರುವ ಔಷಧೀಯ ಗುಣಗಳು ನಮ್ಮನ್ನು ಹಲವು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ.
  • ಕೆಮ್ಮೆ ಆಗಿರಲಿ ಅಥವಾ ಶೀತವೇ ಆಗಿರಲಿ, ಇದು ನಮ್ಮ ಎಲ್ಲಾ ರೀತಿಯ
  • ಸಮಸ್ಯೆಗಳನ್ನು ಮತ್ತು ರೋಗಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ಒಂದು ಪರಿಣಾಮಕಾರಿ ಮನೆಮದ್ದು! title=
ಕರಿಮೆಣಸಿನ ಆರೋಗ್ಯ ಲಾಭಗಳು

Black Pepper Nutritional Value: ಸಾಮಾನ್ಯವಾಗಿ ಕರಿಮೆಣಸು ಸೇವನೆಯ ಹಲವು ವಿಧಾನಗಳಿವೆ. ಕರಿಮೆಣಸನ್ನು ಭಾರತದ ಪ್ರತಿಯೊಂದು ಮನೆಯಲ್ಲಿ ಬಳಸಲಾಗುತ್ತದೆ. ನಮ್ಮ ಅಡುಗೆ ಮನೆಯಲ್ಲಿ ಬಳಸಲಾಗುವ ದಿನನಿತ್ಯದ ಮಸಾಲೆ ಪದಾರ್ಥಗಳಲ್ಲಿ ಕರಿಮೆಣಸು ಕೂಡ ಒಂದು. ಇದನ್ನು ಹೊರತುಪಡಿಸಿದರೆ ಪಲ್ಯಕ್ಕೆ ರುಚಿಯೇ ಬರುವುದಿಲ್ಲ. ಇನ್ನೊಂದೆಡೆ ಇದರಲ್ಲಿ ಕಂಡುಬರುವ ಔಷಧೀಯ ಗುಣಗಳು ನಮ್ಮನ್ನು ಹಲವು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ. ಕೆಮ್ಮೆ ಆಗಿರಲಿ ಅಥವಾ ಶೀತವೇ ಆಗಿರಲಿ, ಇದು ನಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ಮತ್ತು ರೋಗಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗಾದರೆ ಬನ್ನಿ ಈ ಕರಿಮೆಣಸಿನಿಂದಾಗುವ ಪ್ರಯೋಜನಗಳು ಮತ್ತು ಅವುಗಳನ್ನು ಹೇಗೆ ಬಳಸಿದರೆ ಅದು ನಮ್ಮ ತ್ವಚೆಗೂ ಕೂಡ ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ. 

ಕರಿಮೆಣಸಿನ ಪ್ರಯೋಜನಗಳ ಬಗ್ಗೆ ನಾವು ಮೊದಲು ತಿಳಿದುಕೊಳ್ಳೋಣ
ಕರಿಮೆಣಸಿನ ಪ್ರಯೋಜನಗಳು
>> ಹೆಚ್ಚಾಗಿ ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಕಂಡುಬರುವ ಕರಿಮೆಣಸು ಔಷಧಿಗಳ ಖಜಾನೆಯಾಗಿದೆ. ಇದೇ ಕಾರಣಕ್ಕೆ ಈಗ ಹೊರ ದೇಶಗಳಲ್ಲೂ ಇದರ ಬೇಡಿಕೆ ಹೆಚ್ಚಾಗಿದೆ. 
>> ಕರಿಮೆಣಸಿನ ಸೇವನೆಯಿಂದ ಶೀತ ಮತ್ತು ಜ್ವರವನ್ನು ನಿಯಂತ್ರಿಸಬಹುದು.
>> ಕರಿಮೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ
>> ಕರಿಮೆಣಸು ಕೀಲು ನೋವಿನಲ್ಲೂ ಪರಿಹಾರ ನೀಡುತ್ತದೆ
>> ಕರಿಮೆಣಸು ವಾತ ದೋಷವನ್ನು ಹೋಗಲಾಡಿಸುತ್ತದೆ
>> ಕರಿಮೆಣಸು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ
>> ನೀವು ಕೊಬ್ಬನ್ನು ಕರಗಿಸಲು ಬಯಸುತ್ತಿದ್ದರೆ, ಪ್ರತಿದಿನ ಕರಿಮೆಣಸನ್ನು ಸೇವಿಸಿ.
>> ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಶಿಲೀಂಧ್ರ ಸಮಸ್ಯೆಗಳ ನಿವಾರಣೆಗೆ ಕರಿಮೆಣಸು ಸಹಾಯ ಮಾಡುತ್ತದೆ
>> ಕರಿಮೆಣಸು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಕರಿಮೆಣಸನ್ನು ಹೇಗೆ ಸೇವಿಸಬೇಕು
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವ ಮೂಲಕ ನೀವು ಇದನ್ನು ಸೇವಿಸಬಹುದು, ಇದು ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಕರಿಮೆಣಸು ಮಧುಮೇಹವನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಉಸಿರಾಟದ ತೊಂದರೆಯೂ ನಿವಾರಣೆಯಾಗುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ-Cholesterol ನ ಈ ಲಕ್ಷಣಗಳನ್ನು ಮರೆತೂ ನಿರ್ಲಕ್ಷಿಸಬೇಡಿ, ಇಲ್ದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

>> ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅರಿಶಿಣ, ಜೇನುತುಪ್ಪ ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ.
>> ಸಂಧಿವಾತದ ಸಮಸ್ಯೆ ಇದ್ದರೆ ಹಾಲಿನಲ್ಲಿ ಚಿಟಿಕೆ ಒಣ ಶುಂಠಿ ಮತ್ತು ಕರಿಮೆಣಸನ್ನು ಬೆರೆಸಿ ಮಲಗುವ ವೇಳೆಗೆ ಸೇವಿಸಿ.
>> ಮಾನಸಿಕ ಆರೋಗ್ಯಕ್ಕಾಗಿ, ರಾತ್ರಿ ಮಲಗುವಾಗ ಒಂದು ಚಮಚ ತುಪ್ಪದಲ್ಲಿ ಕರಿಮೆಣಸನ್ನು ಸೇವಿಸಿ.

ಇದನ್ನೂ ಓದಿ-Diabetes-High BP ಸಮಸ್ಯೆಗಳನ್ನು ತಪ್ಪಿಸಬೇಕೇ? ಇಂದಿನಿಂದಲೇ ಈ 3 ಮಾರ್ಗಸೂಚಿಗಳನ್ನು ಅನುಸರಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News