ರಾಜ್ಯದ ಮುಖ್ಯಮಂತ್ರಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಮನವಿ ಏನು ಗೊತ್ತಾ?

ದಯವಿಟ್ಟು ಸ್ಪಂದಿಸಿ ಎಂದು ಟ್ವಿಟ್ಟರ್ ಮೂಲಕ ರಶ್ಮಿಕಾ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

Last Updated : Jun 14, 2019, 11:18 AM IST
ರಾಜ್ಯದ ಮುಖ್ಯಮಂತ್ರಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಮನವಿ ಏನು ಗೊತ್ತಾ? title=
Pic Courtesy: Zee5.com

ಬೆಂಗಳೂರು: ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ಕೊಡಗು ಜಿಲ್ಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಈ ಬಗ್ಗೆ ಸಂದೇಶ ರವಾನಿಸಿರುವ ರಶ್ಮಿಕಾ ಮಂದಣ್ಣ, ಮೂಲಭೂತ ಅಗತ್ಯತೆಗಳಲ್ಲಿ ಆಸ್ಪತ್ರೆ ಕೂಡ ಒಂದಾಗಿದೆ. ಆದರೆ ಕೂರ್ಗ್ ನಲ್ಲಿ ನಮಗೆ ಈ ಸೌಕರ್ಯವಿಲ್ಲ. ಉತ್ತಮ ಆಸ್ಪತ್ರೆಗೆ ನಾವು ಬಹಳ ದೂರ ಪ್ರಯಾಣ ಮಾಡಬೇಕು. ಕೊಡಗಿನಲ್ಲೇ ಒಂದು ಉತ್ತಮ ಆಸ್ಪತ್ರೆ ಸೌಲಭ್ಯ ದೊರೆತರೆ ಕೊಡಗಿನ ಜನರಿಗೆ ನಿಜಕ್ಕೂ ಸಹಕಾರಿಯಾಗುತ್ತದೆ ಎಂದಿದ್ದಾರೆ.

WeNeedEmergencyHospitalInKodagu ಹ್ಯಾಶ್ ಟ್ಯಾಗ್ ಜೊತೆಗೆ ದಯವಿಟ್ಟು ಸ್ಪಂದಿಸಿ ಎಂದು ಟ್ವೀಟ್ ಮಾಡಿರುವ ರಶ್ಮಿಕಾ ಮಂದಣ್ಣ ಈ ಟ್ವೀಟ್ ಅನ್ನು @CMofKarnataka ಅವರಿಗೆ ಟ್ಯಾಗ್ ಮಾಡಿದ್ದಾರೆ.

Trending News