ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ

ರೀಲ್ಸ್‌ ಸ್ಟಾರ್‌, ಬೃಂದಾವನ ಧಾರಾವಾಹಿಯಲ್ಲಿ ವರುಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. 2019 ರಿಂದ ಪ್ರೇಮಿಗಳಾಗಿದ್ದ ವರುಣ್ ಆರಾಧ್ಯ ಜೋಡಿ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿತ್ತು.  ಇನ್ನೂ ಈ ವರುಣ್ ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನಂತೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

Written by - VISHWANATH HARIHARA | Edited by - Krishna N K | Last Updated : Sep 11, 2024, 04:38 PM IST
    • ಬೃಂದಾವನ ಸಿರಿಯಲ್ ನಟ, ರೀಲ್ಸ್‌ ಸ್ಟಾರ್‌ ವರುಣ್ ಆರಾಧ್ಯ
    • ವರುಣ್ ಆರಾಧ್ಯ ವಿರುದ್ಧ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಆರೋಪ
    • ಆತನ ಮಾಜಿ ಪ್ರೇಯಸಿಯೇ ಇಂತಹ ಆರೋಪವನ್ನು ಮಾಡಿದ್ದಾಳೆ
ನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..! ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ title=

ಬೆಂಗಳೂರು: ಬೃಂದಾವನ ಸಿರಿಯಲ್ ನಟ, ರೀಲ್ಸ್‌ ಸ್ಟಾರ್‌ ವರುಣ್ ಆರಾಧ್ಯ ವಿರುದ್ಧ ಬ್ಲಾಕ್ ಮೇಲ್, ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಸ್ವತ: ಆತನ ಮಾಜಿ ಪ್ರೇಯಸಿಯೇ ಇಂತಹ ಆರೋಪವನ್ನು ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಾಜಿ ಪ್ರೇಯಸಿಯ ಖಾಸಗಿ ಫೋಟೋ, ವಿಡಿಯೋ ಜಾಲತಾಣದಲ್ಲಿ ಹರಿಬಿಡುವುದಾಗಿ ವರುಣ್ ಆರಾಧ್ಯ ಬ್ಲಾಕ್ ಮೇಲ್ ಮಾಡಿದ್ದಾನೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯಲ್ಲಿ ವರುಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. 2019 ರಿಂದ ಪ್ರೇಮಿಗಳಾಗಿದ್ದ ವರುಣ್ ಆರಾಧ್ಯ ಜೋಡಿ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿತ್ತು. ಇನ್ನೂ ಈ ವರುಣ್ ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನಂತೆ.

ಇದನ್ನೂ ಓದಿ:39 ವರ್ಷಗಳ ಹಿಂದೆಯೇ ಡಿವೋರ್ಸ್ ಆಗಿದ್ದರೂ ಮತ್ತೆ ಒಂದಾಗಿದ್ದ ಮಲೈಕಾ ಪೋಷಕರು!ಸಾವಿಗೂ ಮುನ್ನ ಮಕ್ಕಳೊಂದಿಗೆ ಈ ರೀತಿ ನಡೆದುಕೊಂಡಿದ್ದರು ಅನಿಲ್ ಆರೋರಾ

ಲವ್ ನಲ್ಲಿ ಎಲ್ಲಾ  ಚೆನ್ನಾಗಿದ್ದಾಗ ಈ ವರುಣ್  ಕಳೆದ ವರ್ಷ ಬೇರೆ ಯುವತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದನಂತೆ. ಮೊಬೈಲ್ ನಲ್ಲಿ ಮಾಜಿ ಪ್ರೇಯಸಿ ಇದು ಯಾರ ಫೋಟೋಗಳು ಎಂದು ಪ್ರಶ್ನೆ ಮಾಡಿದಾಗ ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾನಂತೆ.

ಈ ಬಗ್ಗೆ ಯಾರ ಬಳಿಯಾದ್ರು ಹೇಳಿದ್ರೆ ನಿನ್ನ ಖಾಸಗಿ ಫೋಟೋ, ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಹ ಹರಿಬಿಡುವುದಾಗಿ ಬೆದರಿಸಿದ್ದಾನೆ. ಹೀಗಾಗಿ ವರುಣ್ ನಿಂದ ಯುವತಿ ಸಹ ದೂರವಾಗಿದ್ದಳು. ಇದರಿಂದ ರೊಚ್ಚಿಗೆದ್ದ ವರುಣ್ ಕಳೆದ ವರ್ಷ ಆಕೆಯ ಖಾಸಗಿ ಫೋಟೋವನ್ನು ಆಕೆಯ ಮೊಬೈಲ್ ಗೆ ಕಳುಹಿಸಿ ನೀನು ಬೇರೆಯವರನ್ನು ಮದುವೆಯಾದರು ನಿನ್ನನ್ನು ನಿನ್ನ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಂತೆ. 

ಇದನ್ನೂ ಓದಿ:'ಅಸುರರು' ಟೀಸರ್ ಔಟ್‌ : ದರೋಡೆ ಕಥೆ ಹೇಳಲು ಬಂದ ಹುಲಿಬೇಟೆ ಡೈರೆಕ್ಟರ್

ಹೀಗಾಗಿ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಪ್ರಾಣ ಬೆದರಿಕೆ ಹಾಕಿರುವ ವರುಣ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಂತ್ರಸ್ಥೆ ಸದ್ಯ ಪಶ್ಚಿಮ ವಿಭಾಗದ ಠಾಣೆಯಲ್ಲಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರು ವರುಣ್ ಆರಾಧ್ಯ  ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News