Puttakkana Makkalu: ಸ್ನೇಹಾ ಕೈ ಸೇರಿದ ಡಿವೋರ್ಸ್‌ ಪೇಪರ್:‌ ಬಂಗಾರಮ್ಮನ ಕಾಲಿಗೆ ಬಿದ್ದ ಕ್ಷಮೆ ಕೇಳಿದ ಸೊಸೆ!

Puttakkana Makkalu Kannada Serial:  ʻಪುಟ್ಟಕ್ಕನ ಮಕ್ಕಳುʼ ಧಾರವಾಹಿಯಲ್ಲಿ ಸ್ನೇಹಾಗೆ ರಾಧಾ ಕಂಠಿ ಮಾವಾ ಕೊಟ್ಟಿದ್ದಾನೆ ಎಂದು ಹೇಳಿ  ಡಿವೋರ್ಸ್‌ ಪೇಪರ್‌ ಕೊಡುತ್ತಾಳೆ. ಮುಂದೆ ಸ್ನೇಹಾ ಬಂಗಾರಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾಳೆ. ಹಾಗಿದ್ರೇ ಸೊಸೆಯನ್ನು ಬಂಗಾರಮ್ಮ ಕ್ಷಮಿಸುತ್ತಾಳಾ? ಕಂಠಿ ನಿರ್ಧಾರವೇನು? ಇಲ್ಲಿದೆ ಕಂಪ್ಲೀಟ್‌ ಸ್ಟೋರಿ. 

Written by - Zee Kannada News Desk | Last Updated : Apr 20, 2024, 04:07 PM IST
  • ಸ್ನೇಹಾಗೆ ಬಡವರು ನಿಜ ಹೇಳುತ್ತಾರೆ, ನೊಂದವರು ಯಾವತ್ತೂ ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ. ಆದರಿಂದ ಸ್ನೇಹಾ ಬಹಳ ಎಲ್ಲರನ್ನೂ ಸುಲಭವಾಗಿ ನಂಬುತ್ತಾಳೆ.
  • ಅವಾಗ ರಾಧಾ ಸ್ನೇಹಾಗೆ ಕಂಠಿ ಮಾವ ನಿನಗೆ ಅಂತ ಕೊಟ್ಟಿರೋ ಗಿಫ್ಟ್‌ ಕೊಟ್ಟಿ ಹೊಗೋಣ ಅಂತ ಬಂದು ಡಿವೋರ್ಸ್‌ ಪೇಪರ್‌ ಕೊಡುತ್ತಾಳೆ.
  • ಮರುದಿನ ಸ್ನೇಹಾ ಬಂಗಾರಮ್ಮನ ಹತ್ತಿರ ಬಂದು ದಯವಿಟ್ಟು ನನ್ನನೂ ಕ್ಷಮಿಸಿ ಅತ್ತೆ. ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಕೇಳುತ್ತಾಳೆ.
Puttakkana Makkalu: ಸ್ನೇಹಾ ಕೈ ಸೇರಿದ ಡಿವೋರ್ಸ್‌ ಪೇಪರ್:‌ ಬಂಗಾರಮ್ಮನ ಕಾಲಿಗೆ ಬಿದ್ದ ಕ್ಷಮೆ ಕೇಳಿದ ಸೊಸೆ! title=

Sneha Asks Sorry To Bangaramma: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ ಧಾರವಾಹಿಯಲ್ಲಿ ಸ್ನೇಹಾ ಇತ್ತೀಚಿನ ದಿನಗಳಲ್ಲಿ ಹಲವಾರು ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾಳೆ.ಈಕೆಗೆ ತನ್ನ ಅತ್ತೆಯ ಮೇಲೆ ಪೋಲೀಸ್‌  ಕಂಪ್ಲೀನ್‌ ಕೊಡುವುದು ಇಂತಹದೆಲ್ಲಾ ಮಾಡಿದರೆ ಗಂಡನ ಮರ್ಯಾದೆಗೆ ಕುಂದು ಬರುತ್ತದೆ  ಅನ್ನು ಆಲೋಚನೆಯೂ ಕೂಡ ಇರಿವುದಿಲ್ಲ. ಇವಳು ಎಲ್ಲರನ್ನೂ  ತುಂಬಾನೇ ಬೇಗ ನಂಬುತ್ತಾಳೆ.

ಸ್ನೇಹಾಗೆ ಬಡವರು ನಿಜ ಹೇಳುತ್ತಾರೆ, ನೊಂದವರು ಯಾವತ್ತೂ ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ. ಆದರಿಂದ ಸ್ನೇಹಾ ಬಹಳ ಎಲ್ಲರನ್ನೂ ಸುಲಭವಾಗಿ ನಂಬುತ್ತಾಳೆ. ಅದರಲ್ಲಂತೂ ಬೇರೆಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರಬೇಕಾದರೆ, ಇದನ್ನು ನೋಡಿ ಸುಮ್ಮನೆ ಕೂರಲಾರದೆ  ಬೇರೆಯವರ ಮಾತು ಕೇಳಿ ಸ್ನೇಹ ತನ್ನ ಅತ್ತೆಯ ಮೇಲೆ ಪೋಲೀಸರಿಗೆ ದೂರನ್ನು ನೀಡುತ್ತಾಳೆ. ಆದರೆ ಸ್ನೇಹಾಗೆ ಇದೀಗ ತಾನು ಮಾಡಿದ ತಪ್ಪಿನ ಅರಿವಾಗಿದೆ.

ಇದನ್ನೂ ಓದಿ: Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಸೀರಿಯಲ್ ಶಾರ್ವರಿ ನಿಜಕ್ಕೂ ಯಾರು? ಇವರ ಬ್ಯಾಕ್‌ಗ್ರೌಂಡ್‌ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಇನ್ನೊಂದು ಕಡೆ ರಾಧಾಗೆ ಸ್ನೇಹಾ ಕಂಡರೆ  ಇಷ್ಟವಿಲ್ಲದ ಕಾರಣ ಇದನ್ನೇ ಬಂಡವಾಳವಾಗಿ ಮಾಡಿಕೊಳ್ಳುತ್ತಾಳೆ. ರಾಧಾಗೆ ಹೇಗಾದರೂ ಮಾಡಿ ಸ್ನೇಹಾಳಿಂದ ತನ್ನ ಮಾವನನ್ನು ದೂರ ಮಾಡಬೇಕು, ತನ್ನ ಮಾವ ತನ್ನವನಾಗಿಸಿಕೊಳ್ಳಬೇಕೆಂಬ ಆಸೆ. ಇದೀಗ ಸ್ನೇಹಾ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವಾಗ, ಈಕೆ ರೂಮ್‌ನಲ್ಲಿ ಇರುವಾಗ ರಾಧಾ ಬರುತ್ತಾಳೆ. ರಾಧಾ ಬಂದು ಸ್ನೇಹಾಗೆ ವಿಚ್ಛೇದನದ ಪೇಪರ್ ಅನ್ನು ಕೊಡುತ್ತಾಳೆ. ಇದನ್ನು ನೋಡಿ ಸ್ನೇಹಾಗೆ ಸಿಡಿಲು ಬಡಿದಂತೆ ಆಗುತ್ತದೆ.

ಅವಾಗ ರಾಧಾ ಸ್ನೇಹಾಗೆ ಕಂಠಿ ಮಾವ ನಿನಗೆ ಅಂತ ಕೊಟ್ಟಿರೋ ಗಿಫ್ಟ್‌ ಕೊಟ್ಟಿ ಹೊಗೋಣ ಅಂತ ಬಂದು ಡಿವೋರ್ಸ್‌ ಪೇಪರ್‌ ಕೊಡುತ್ತಾಳೆ. ಅದನ್ನು ನೋಡಿ ಸ್ನೇಹಾ ಶಾಕ್‌ ಆಗಿರುವಾಗ ನನಗಿಂತ ಜಾಸ್ತೀನೆ ಶಾಕ್‌ ಆಗಿರಬೇಕಲ್ವಾ. ಮಾವ ನಿನಗೆ ಕೊಟಿಟರೋ ಡಿವೋರ್ಸ್‌ ಪೇಪರ್.‌ ಈಗ ನಾನು ಮನಸ್ಸು ಮಾಡಿದರೇ ನಿಮ್ಮಿಬ್ಬರನ್ನು ದೂರ ಮಾಡಬಹುದು ಎಂದು ಹೇಳುತ್ತಾಳೆ. ಆಗ ಸ್ನೇಹಾ ರಾಧಾಗೆ ನೀನು ಈ ಮಟ್ಟಿಗೆ ಇಳಿಯುತ್ತೀಯಾ ಅಮತ ಅಂದುಕೊಂಡಿರಲಿಲ್ಲ ರಾಧಾ. ನನ್ನ ಶ್ರೀ ಮುಗ್ಧತೆಯನ್ನು ಬಳಸಿಕೊಂಡು ಈ ರೀತಿ ಮಾಡಿದ್ದೀಯಾ ಅಂತ ಹೇಳುತ್ತಾಳೆ. 

ಇದನ್ನೂ ಓದಿ: Puttakkana Makkalu: ಬಂಗಾರಮ್ಮನ್ನು ಜೈಲಿನಿಂದ ಬಿಡಿಸಿ ಪುಟ್ಟಕ್ಕ: ಕಂಠಿ ಸ್ನೇಹಾಳನ್ನು ಕ್ಷಮಿಸುತ್ತಾನಾ?

ಮರುದಿನ ಸ್ನೇಹಾ ಬಂಗಾರಮ್ಮನ ಹತ್ತಿರ ಬಂದು ದಯವಿಟ್ಟು ನನ್ನನೂ ಕ್ಷಮಿಸಿ ಅತ್ತೆ. ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಕೇಳುತ್ತಾಳೆ. ಅವಾಗ ಬಂಗಾರಮ್ಮ ಎದ್ದೇಳು ಮೇಲೆ ಎಂದು ಹೇಳುತ್ತಾಳೆ. ಆವಾಗ ಸ್ನೇಹಾ ನನಗೆ ಅಳಿದು ತೂಗಿ ನಿರ್ಧಾರ ತೆಗೆದುಕೊಳ್ಳೋ ಪಕ್ವತೆ ನನಗಿಲ್ಲ ಅತ್ತೆ. ದುಡುಕಿ ನಿರ್ಧಾರ ತೆಗೆದುಕೊಳ್ಳೋದು ನನಗೆ ಚಿಕ್ಕ ವಯಸ್ಸಿನಿಂದ ಬಂದಿರುವುದು ಎಂತ ಹೇಳುತ್ತಾಳೆ. ಅದೇ ಸಂದರ್ಭದಲ್ಲಿ ರಾಧಾ ಸ್ನೇಹಾಗೆ ಕ್ಷಮೆ ಕೇಳಿದರೇ ಎಲ್ಲಾ ಸರಿ ಹೋಗುತ್ತಾ ಎಂದು ಹೇಳುತ್ತಾಳೆ. ಅವಾಗ ಕಂಠಿ ರಾಧಾ ಎಂದು ಜೋರು ಧ್ವನಿಯಲ್ಲಿ ಕರೆಯುತ್ತಾನೆ. ಹಾಗಾದ್ರೇ ಕಂಠಿ ಸ್ನೇಹಾನಾ ಕ್ಷಮಿಸಿದ್ದಾನೆ? ಬಂಗಾರಮ್ಮ ಮುಂದೆ ತನ್ನ ಸೊಸೆ ಮಾಡಿದ ತಪ್ಪನ್ನು ಕ್ಷಮಿಸಿತ್ತಾಳಾ? ಎಂಬುದನ್ನು ಮುಂಬರುವ ಸಂಚಿಕೆ ನೋಡಿ ತಿಳಿಯಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News